ಅಜೆಕಾರು: ಕಡ್ತಲ ಪೇಟೆ ರಸ್ತೆ ಕಾಮಗಾರಿ ಪೂರ್ಣ
Team Udayavani, Jun 9, 2019, 6:10 AM IST
ಅಜೆಕಾರು: ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೇಟೆಯ ರಸ್ತೆಯನ್ನು ನಗರೋತ್ಥಾನ ಯೋಜನೆಯಡಿ 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿ ವಿಭಾಜಕ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.
ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸಲಾಗಿದ್ದು ರಸ್ತೆ ನಡುವಿನ ವಿಭಾಜಕಗಳಿಗೆ ವಿದ್ಯುತ್ ದೀಪ ಅಳ ವಡಿಸುವ ಕಾರ್ಯ ಇನ್ನಷ್ಟೇ ಆಗ ಬೇಕಾಗಿದೆ. ಕಡ್ತಲ ಪಂಚಾಯತ್ ಮನವಿ ಯಂತೆ ನಗರೋತ್ಥಾನ ಯೋಜನೆಯಡಿ ಶಾಸಕ ಸುನಿಲ್ ಕುಮಾರ್ ಅನುದಾನ ಒದಗಿಸಿದ್ದು ರಸ್ತೆ ಕಾಮಗಾರಿ ಪೂರ್ಣ ಗೊಂಡಿದೆ.
ರಸ್ತೆಯ ಇಕ್ಕೆಲಗಳ ಚರಂಡಿ ವ್ಯವಸ್ಥೆ ಪೂರ್ಣಪ್ರಮಾಣದಲ್ಲಿ ಇನ್ನಷ್ಟೇ ಆಗ ಬೇಕಾಗಿದ್ದು ಮಳೆಗಾಲದ ಮೊದಲು ಚರಂಡಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಪಂಚಾಯತ್ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ ಹೇಳಿದ್ದಾರೆ.