ಆ್ಯಂಕರಿಂಗ್‌ ಭವಿಷ್ಯದ ಭರವಸೆ


Team Udayavani, Jun 12, 2019, 5:50 AM IST

h-17

ಪ್ರಸ್ತುತವಾಗಿ ಆ್ಯಂಕರಿಂಗ್‌ ಕೋರ್ಸ್‌ಗಳಿಗೆ ಬಹು ಬೇಡಿಕೆಯಿದೆ. ಹಾಗಾಗಿ ಕೆಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಆ್ಯಂಕರಿಂಗ್‌ ಸಂಬಂಧಿಸಿದ ಕೋರ್ಸ್‌ಗಳನ್ನು ಆರಂಭಿಸಿ, ತರಬೇತಿ ನೀಡಲಾಗುತ್ತದೆ. ಉತ್ತಮ ಸಂವಹನ ಕೌಶಲ, ಸಾಮಾನ್ಯ ಜ್ಞಾನ, ಆಂಗಿಕ ಭಾಷೆ, ಶಬ್ದ ಭಂಡಾರ ಇದ್ದರೆ ಆ್ಯಂಕರ್‌ ಆಗಬಹುದಾಗಿದೆ.

ಹಾಯ್‌..ಹಲೋ..ನಮಸ್ಕಾರ…ಎನ್ನುತ್ತಲೇ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳುವ, ನಿರರ್ಗಳವಾಗಿ ಪದಪುಂಜಗಳನ್ನೇ ತೇಲಿ ಬಿಡುವ ಹುಡುಗ-ಹುಡುಗಿಯರನ್ನು ಕಂಡಾಗಲೆಲ್ಲ ನಾವೂ ಅವರಂತಾಗಬೇಕು, ಅವರಂತೆ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳಬೇಕು, ಮೈಕ್‌ ಮುಂದೆ ನಿಂತು ನಿರರ್ಗಳ ಪದಮುತ್ತುಗಳನ್ನು ಉದುರಿಸಬೇಕೆಂಬ ಬಯಕೆ, ಆಸೆ ಚಿಗುರೊಡೆಯುವುದು ಸಾಮಾನ್ಯ. ಆದರೆ, ಅಂತಹ ಮಾತುಗಾರಿಕೆ ಕಲೆ ಸುಮ್ಮನೇ ಬಂದೀತೆ? ಆ್ಯಂಕರಿಂಗ್‌ ಅವಕಾಶ ದಕ್ಕಿಸಿಕೊಳ್ಳಲು ಅವಿರತ ಶ್ರಮವೂ ಅಗತ್ಯ ಎನ್ನುವುದು ಅಷ್ಟೇ ಪ್ರಾಮುಖ್ಯ.

ಉಪಗ್ರಹ ಆಧಾರಿತ ಚಾನೆಲ್‌ಗ‌ಳು ಈ ಯುಗದಲ್ಲಿ ಮಾಧ್ಯಮ ಲೋಕದಲ್ಲಿ ಕಾಲಿಟ್ಟ ಬಳಿಕ ಆ್ಯಂಕರಿಂಗ್‌ ಎಂಬುದು ಜನಪ್ರಿಯ ವೃತ್ತಿಯಾಗಿ ರೂಪು ತಳೆಯಿತು. ವಾರ್ತಾವಾಚಕರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಅದೆಷ್ಟೋ ಯುವ ಜನತೆ ತಮ್ಮ ಮಾತಿನ ಮೋಡಿಯಿಂದಲೇ ಜನಪ್ರಿಯತೆ ಗಳಿಸಿಕೊಂಡರು. ಆ್ಯಂಕರಿಂಗ್‌ ವೃತ್ತಿ ಪ್ರಾಮುಖ್ಯತೆ ಗಳಿಸಿದಂತೆ ಅದಕ್ಕೆ ಬೇಡಿಕೆಯೂ ಹೆಚ್ಚಾಯಿತು. ಎಷ್ಟೆಂದರೆ, ಈ ವೃತ್ತಿ ಬೇಡಿಕೆ ಗಳಿಸುತ್ತಿದ್ದಂತೆ ಆ್ಯಂಕರಿಂಗ್‌ಗಾಗಿಯೇ ಕೆಲವೊಂದು ಅಲ್ಪಕಾಲದ ಕೋರ್ಸ್‌ಗಳೂ ಹುಟ್ಟಿಕೊಂಡವು.

ಆಂಗಿಕ ಭಾಷೆಗೂ ಪ್ರಾಮುಖ್ಯ
ಯಾವುದೇ ಕಾರ್ಯಕ್ರಮಗಳನ್ನು, ಸುದ್ದಿಗಳನ್ನು ಜನ ಸಾಮಾನ್ಯರಿಗೆ ಮನಮುಟ್ಟುವಂತೆ ತಿಳಿಸುವುದು ಆ್ಯಂಕರ್‌ ಎನಿಸಿಕೊಂಡವರ ಕರ್ತವ್ಯ. ಮುಖ್ಯವಾಗಿ ಒಬ್ಬ ಯಶಸ್ವಿ ನಿರೂಪಕನಾಗಿ ರೂಪು ತಳೆಯಬೇಕಾದರೆ ಮಾತುಗಾರಿಕೆಯ ಕಲೆಯೊಂದಿದ್ದರೆ ಸಾಲದು. ಮಾತನಾಡಿದ್ದನ್ನು ಜನಮಾನಸಕ್ಕೆ ತಲುಪಿಸುವುದು ಅಷ್ಟೇ ಮುಖ್ಯ. ಸಮರ್ಥ ಭಾಷಾ ಹಿಡಿತದೊಂದಿಗೆ ಆಂಗಿಕ ಭಾಷಾ ಹಿಡಿತವೂ ಇಲ್ಲಿ ಮುಖ್ಯವಾಗುತ್ತದೆ. ಶುದ್ಧ ಭಾಷಾಜ್ಞಾನ, ಉತ್ತಮ ಸಂವಹನ ಕೌಶಲ, ಪ್ರಾಪಂಚಿಕ ಜ್ಞಾನ, ಶಬ್ದಭಂಡಾರ, ಆಕರ್ಷಕ ಮೈಕಟ್ಟು, ಆರೋಗ್ಯಕರ ಮನಸ್ಸು, ಆತ್ಮವಿಶ್ವಾಸ ಇವಿಷ್ಟಿದ್ದರೆ ನಿರೂಪಣೆ ಕ್ಷೇತ್ರದಲ್ಲಿ ಪಳಗುವುದು ಸುಲಭ.

ಸಂಭಾವನೆಯೂ ಅಧಿಕ
ಬೇಡಿಕೆಯ ನಿರೂಪಕರಾಗಿ ಗುರುತಿಸಿಕೊಂಡರೆ ಹಲವಾರು ಕಾರ್ಯಕ್ರಮಗಳ ನಿರೂಪಣೆಗೆ ಸ್ವತಃ ಕಾರ್ಯಕ್ರಮ ಆಯೋಜಕರೇ ಆಹ್ವಾನಿಸುತ್ತಾರೆ. ಹೀಗೆ ನಿರೂಪಣೆಯಲ್ಲಿ ತೊಡಗಿಸಿಕೊಂಡರೆ ಒಂದು ನಿರೂಪಣೆಗೆ ಕನಿಷ್ಠ 10 ಸಾವಿರ ರೂ.ಗಳಿಂದ ಲಕ್ಷ ರೂ.ಗಳವರೆಗೂ ಸಂಪಾದಿಸಲು ಅವಕಾಶವಿದೆ. ಉದ್ಯೋಗ ನಿರ್ವಹಿಸುತ್ತಲೇ ಉಪ ವೃತ್ತಿಯಾಗಿ ನಿರೂಪಣೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಕಾಲೇಜುಗಳಲ್ಲೇ ತರಬೇತಿ
ಬೆಂಗಳೂರಿನಂತಹ ಮಹಾನಗರಗಳಲ್ಲಿ ಆ್ಯಂಕರಿಂಗ್‌ಗೆಂದೇ ಅಲ್ಪಾವಧಿಯ ಕೆಲವು ಕೋರ್ಸ್‌ಗಳಿವೆ. ಆದರೆ ಮಂಗಳೂರಿನಲ್ಲಿ ಇಂತಹ ಕೋರ್ಸ್‌ ಗಳು ಇರುವುದಿಲ್ಲ. ಪ್ರಮುಖವಾಗಿ ಮಾಧ್ಯಮ ಕ್ಷೇತ್ರಕ್ಕೆ ಪೂರಕವಾದ ಕೋರ್ಸ್‌ ಗಳನ್ನು ಕೆಲವು ಖಾಸಗಿ ಸಂಸ್ಥೆಗಳಲ್ಲಿಯೇ ನೀಡಲಾಗುತ್ತದೆ. ಪತ್ರಿಕೋದ್ಯಮ ತರಗತಿಗಳನ್ನು ಹೊಂದಿರುವ ಕಾಲೇಜುಗಳಲ್ಲಿ ಪ್ರಾಯೋಗಿಕ ಶಿಕ್ಷಣವಾಗಿ ಇದನ್ನು ಕಲಿಸಲಾಗುತ್ತದೆ. ಉಜಿರೆ ಎಸ್‌ಡಿಎಂ ಕಾಲೇಜು, ಪುತ್ತೂರು ವಿವೇಕಾನಂದ ಕಾಲೇಜು ಮತ್ತು ಇತರ ಕೆಲವು ಕಾಲೇಜುಗಳು ಪತ್ರಿಕೋದ್ಯಮ ವಿಭಾಗದಲ್ಲಿಯೇ ತಮ್ಮದೇ ಆದ ಸ್ಟುಡಿಯೋವೊಂದನ್ನು ಹೊಂದಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಭಾಗವಾಗಿ ಆ್ಯಂಕರಿಂಗ್‌ ತರಬೇತಿಯನ್ನೂ ನೀಡಲಾಗುತ್ತದೆ. ಮಂಗಳೂರು ಸೈಂಟ್‌ ಅಲೋಶಿಯಸ್‌ ಕಾಲೇಜು, ಬೆಸೆಂಟ್‌ ಕಾಲೇಜುಗಳಲ್ಲಿಯೂ ಪತ್ರಿಕೋದ್ಯಮ ತರಗತಿಯಲ್ಲಿ ಆ್ಯಂಕರಿಂಗ್‌ ಕುರಿತು ಪ್ರಾಥಮಿಕ ಮಾಹಿತಿ ಒದಗಿಸುವ ವ್ಯವಸ್ಥೆ ಇರುತ್ತದೆ. ಇನ್ನು ರಾಜ್ಯ ಮಟ್ಟದ ಸುದ್ದಿವಾಹಿನಿಗಳು ತಮ್ಮ ಸಂಸ್ಥೆಗಳಲ್ಲಿಯೇ ಆ್ಯಂಕರಿಂಗ್‌ ತರಬೇತಿಯನ್ನು ಆರಂಭಿಸಿ ರುವುದು ಆ್ಯಂಕರಿಂಗ್‌ ಬಗ್ಗೆ ಕನಸು ಕಾಣುತ್ತಿರುವ ಯುವ ಸಮುದಾಯಕ್ಕೆ ವರವಾಗಿದೆ.

-   ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.