ಕಣ್‌ ತೆರೆದು ನೋಡಿ


Team Udayavani, Jun 20, 2019, 5:00 AM IST

d-3

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಡಿಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು…

ಜಿರಾಫೆಯ ನಾಲಗೆ ಕಪ್ಪೇಕೆ?
ನಾಲಗೆ ಉದ್ದಕ್ಕೆ ಚಾಚುವವರನ್ನು ಕಂಡರೆ ನಾವು ಉರಿದುಬೀಳುತ್ತೇವೆ. ಅಂದರೆ ಅಗತ್ಯಕ್ಕಿಂತ ಹೆಚ್ಚಿಗೆ ಮಾತಾಡುವವರನ್ನು ಯಾರೂ ಇಷ್ಟಪಡುವುದಿಲ್ಲ. ಆದರೆ ಅಕ್ಷರಶಃ ನಾಲಗೆ ಚಾಚುವವರನ್ನು ಕಂಡರೆ, ಎಲ್ಲೋ ತಲೆ ಕೆಟ್ಟಿರಬೇಕು ಎಂದುಕೊಳ್ಳಬಹುದು. ಆದರೆ ಜಿರಾಫೆಯ ವಿಷಯದಲ್ಲಿ ಹಾಗೆ ತಿಳಿದುಕೊಳ್ಳುವಂತಿಲ್ಲ. ಏಕೆಂದರೆ ಅದು ಯಾರನ್ನೋ ಅಣಕಿಸಲು ನಾಲಗೆ ತೋರಿಸುತ್ತಿಲ್ಲ. ಅದು ಆಹಾರವನ್ನು ಬಾಯೊಳಗೆ ಸೆಳೆಯಲು ನಾಲಗೆಯನ್ನು ಬಳಸಿಕೊಳ್ಳುತ್ತವೆ. ಸಾಮಾನ್ಯವಾಗಿ ನಾಲಗೆ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಆದರೆ ಜಿರಾಫೆಯ ನಾಲಗೆ ಕಪ್ಪು ಬಣ್ಣದ್ದಾಗಿದೆ. ಜಿರಾಫೆ ಹೊಟ್ಟೆ ತುಂಬಿಸಿಕೊಳ್ಳಲು ತುಂಬಾ ಸಮಯ ವ್ಯಯ ಮಾಡುತ್ತದೆ. ನಾಲಗೆಯನ್ನು ತುಂಬಾ ಸಮಯದವರೆಗೆ ಹೊರಕ್ಕೆ ಚಾಚಬೇಕಾಗಿರುವುದರಿಂದ ಸೂರ್ಯನ ಅಲ್ಟ್ರಾ ವಯಲೆಟ್‌ ಕಿರಣಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಸೂರ್ಯನ ಅಪಾಯಕಾರಿ ಕಿರಣಗಳಿಂದ ರಕ್ಷಣೆ ಪಡೆಯಲು ನಾಲಗೆ ಮೇಲಿನ ಕಪ್ಪು ಬಣ್ಣದ ಪದರ ಸಹಕರಿಸುತ್ತದೆ.

ಮೊಸಳೆಗೆ ಕಾಂಪ್ಲಾನ್‌ ಕುಡಿಸಬೇಕಿಲ್ಲ!
ಇಷ್ಟು ವಯಸ್ಸಾದರೂ ಬೆಳೆದೇ ಇಲ್ಲವಲ್ಲೋ ಎಂದು ತಾಯಂದಿರು ವ ುಗರಾಯಂದಿರಿಗೆ ಸಹಸ್ರ ನಾಮಾರ್ಚನೆ ಮಾಡುತ್ತಾರೆ. ಈ ನಾಮಾರ್ಚನೆಯನ್ನು ಮೊಸಳೆಗೆ ಮಾಡುವಂತಿಲ್ಲ. ಏಕೆಂದರೆ ಸಂಶೋಧನೆಯೊಂದರಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಮೊಸಳೆ 30 ವರ್ಷವಾದರೂ ಬೆಳವಣಿಗೆ ಪೂರ್ತಿಯಾಗಿರುವುದಿಲ್ಲವಂತೆ. ಅಂದರೆ 33 ವರ್ಷದವರೆಗೂ ಬೆಳೆಯುತ್ತಲೇ ಇರುತ್ತವಂತೆ. ಆದರೆ ಮನುಷ್ಯ 19 ವರ್ಷ ತಲುಪಿದಾಗಲೇ ಅವನ ಬೆಳವಣಿಗೆ ನಿಲ್ಲುತ್ತದೆ. ಅದು ಸೃಷ್ಟಿಯ ನಿಯಮ. ಅದನ್ನು ಮೀರಲು ಆಗುವುದಿಲ್ಲ. ಅದಕ್ಕೇ ಅಲ್ಲವೆ ಉದ್ದ ಇಲ್ಲದೇ ಇದ್ದರೂ ಹಿಂಸೆಯನ್ನು ಸಹಿಸಿಕೊಂಡು ಉದ್ದಕ್ಕಿರುವ ಭ್ರಮೆ ಹುಟ್ಟಿಸಲು ಹೈಹೀಲ್ಡ್‌ ಚಪ್ಪಲಿ ಧರಿಸಿ ಬೀಗುವುದು. ಇನ್ನು ಕೆಲವರು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಉದ್ದ ಆಗಲು ಟಾನಿಕ್ಕು, ಮಾತ್ರೆ ಹಾಗೂ ಪೇಯಗಳ ಮೊರೆ ಹೋಗುವುದಿದೆ. ಅವೆಲ್ಲಾ ಬರೀ ಸಮಾಧಾನ ತರಬಹುದೇ ಹೊರತು ಉದ್ದವನ್ನು ಹೆಚ್ಚಿಸಲಾಗದು! ಆದರೆ ಮೊಸಳೆಗೆ ಪ್ರಕೃತಿಯೇ 30 ವರ್ಷವಾದರೂ ಉದ್ದ ಆಗುತ್ತಲೇ ಇರುವ ವರವನ್ನು ನೀಡಿದೆ. ಆ ವರವನ್ನೇನಾದರೂ ಮನುಷ್ಯನಿಗೆ ನೀಡಿದ್ದರೆ ಮಾರುಕಟ್ಟೆಯಲ್ಲಿ ಬೆಳವಣಿಗೆ ಹೆಚ್ಚಿಸುವ ಉತ್ಪನ್ನಗಳೇ ಇರುತ್ತಿರಲಿಲ್ಲ!

ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

9-kushtagi

Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.