ಕೆಲವೇ ದಿನದಲ್ಲಿ ಕೇಳಲಿದೆ ಪೆಪ್ಪೆರೆರೆ ಪೆರೆರೆರೆ !


Team Udayavani, Jun 27, 2019, 5:00 AM IST

14

ರಂಗೀನಮ್ಮನ್ನು ಕಾಡುವ ಬಹುತೇಕ ಸಮಸ್ಯೆಗಳಿಗೆ ನಾವೇ ಕಾರಣ ಎಂಬ ಸಂದೇಶ ದೊಂದಿಗೆ ರೆಡಿಯಾದ ‘ಪೆಪ್ಪೆರೆರೆ ಪೆರೆರೆರೆ’ ಸಿನೆಮಾ ಇದೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ನವೀನ್‌ ಡಿ. ಪಡೀಲ್, ಭೋಜರಾಜ್‌ ವಾಮಂಜೂರ್‌, ಅರವಿಂದ ಬೋಳಾರ್‌, ಜೆ.ಪಿ. ತೂಮಿನಾಡು, ಸತೀಶ್‌ ಬಂದಲೆ ಮೊದಲಾದವರ ಜತೆಯಲ್ಲಿ ಶೋಭರಾಜ್‌ ಪಾವೂರು ಪ್ರಮುಖ ಪಾತ್ರದಲ್ಲಿ ನಟಿಸಲಿರುವ ಪೆಪ್ಪೆರೆರೆ ಪೆರೆರೆರೆ ಎಂಬ ಭಿನ್ನ ಸಿನೆಮಾ ಕೋಸ್ಟಲ್ವುಡ್‌ನ‌ಲ್ಲಿ ಭಾರೀ ಸದ್ದು ಮಾಡುತ್ತಿದೆ. ಸದ್ಯ ಎಲ್ಲಾ ಹಂತದ ಶೂಟಿಂಗ್‌ ಮುಗಿಸಿರುವ ಈ ಸಿನೆಮಾದ ಒಂದು ಹಾಡಿನ ಶೂಟಿಂಗ್‌ ಮಾತ್ರ ಬಾಕಿ ಇದೆ. ಕೆಲವೇ ದಿನದಲ್ಲಿ ಹಾಡಿನ ಚಿತ್ರೀಕರಣ ಕೂಡ ನಡೆಯಲಿದೆ.

ಈ ಸಿನೆಮಾದ ಟೈಟಲೇ ಒಂದು ಭಿನ್ನತೆಯನ್ನು ಹೊಂದಿದೆ. ಶೋಭರಾಜ್‌ ಅವರು ತುಳು ರಂಗಭೂಮಿಯಿಂದ ಅರಳಿದ ಪ್ರತಿಭೆ. ಆನಂತರ ಸಿನೆಮಾ ರಂಗದಲ್ಲಿ ಮತ್ತು ಕಿರುತೆರೆಯಲ್ಲಿ ಅವರು ಮಾಡಿರುವ ಸಾಧನೆ ಉಲ್ಲೇಖನೀಯ. ಈ ಹಿಂದೆ ‘ಏಸ’ ಎಂಬ ಸಿನೆಮಾದಲ್ಲಿ ದುಡಿದು ತನ್ನ ಪ್ರತಿಭೆಯನ್ನು ತೋರಿಸಿದವರು. ಕಥೆ, ಸಂಭಾಷಣೆಯಲ್ಲೂ ಕೈಯಾಡಿಸಿದ್ದಾರೆ. ಏಸ ಸಿನೆಮಾಕ್ಕೂ ಇವರದ್ದೇ ಕಥೆ. ಅದೊಂದು ಯಕ್ಷಗಾನ ಕಲಾವಿದನನ್ನು ಕೇಂದ್ರೀಕರಿಸಿ ಹೆಣೆದ ಕಥೆಯಾಗಿತ್ತು. ಕೋಸ್ಟಲ್ವುಡ್‌ನ‌ಲ್ಲಿ ಈ ಸಿನೆಮಾ ಸ್ಟಾರ್‌ ಮಾನ್ಯತೆಯನ್ನು ಪಡೆದಿತ್ತು. ಸಿನೆಮಾ ಅಂದರೆ ಹೀಗಿರಬೇಕು ಎಂಬ ರೀತಿಯಲ್ಲಿ ಜನರು ಮಾತನಾಡುವಂತಾಗಿತ್ತು.

ಹೀಗಾಗಿ ಹಿಂದಿನ ಎಲ್ಲ ಅನುಭವಗಳನ್ನು ಸೇರಿಸಿಕೊಂಡು ಮತ್ತಷ್ಟು ಪ್ರಬುದ್ಧರಾಗಿ ‘ಪೆಪ್ಪೆರೆರೆ ಪೆರೆರೆರೆ’ ರೆಡಿ ಮಾಡುವಲ್ಲಿ ಶೋಭರಾಜ್‌ ವಿಶೇಷ ಆದ್ಯತೆ ನೀಡಿದ್ದರು.

ನಿಶಾನ್‌ ಮತ್ತು ವರುಣ್‌ ನಿರ್ಮಾಪಕರಾಗಿರುವ ಈ ಸಿನೆಮಾದ ಬಹುತೇಕ ಚಿತ್ರೀಕರಣ ಮಂಗಳೂರಿನಲ್ಲಿಯೇ ನಡೆದಿದೆ. ಶೋಭರಾಜ್‌ ನಿರ್ದೇಶನದೊಂದಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಗುರು ಬಾಯಾರ್‌ ಸಂಗೀತದಲ್ಲಿ ಮೂಡಿ ಬಂದಿರುವ ನಾಲ್ಕು ಹಾಡುಗಳು ಈ ಸಿನೆಮಾದಲ್ಲಿದೆ. ಹಾಡುಗಳ ಸಾಹಿತ್ಯ ಶಶಿರಾಜ್‌ ಕಾವೂರು ಹಾಗೂ ಉಮೇಶ್‌ ಮಿಜಾರು ಅವರದ್ದು. ಹಾಡುಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದ್ದು, ಇದು ಪ್ರತಿಭೆಗಳಿಗೊಂದು ಹೊಸ ಅವಕಾಶ. ಇಲ್ಲಿರುವ ನಾಲ್ಕು ಪ್ರಮುಖ ಪಾತ್ರಧಾರಿಗಳು ಹೀರೋಗಳು. ಜತೆಗೆ ಚೈತ್ರಾ ಶೆಟ್ಟಿ ಮತ್ತು ಮೈತ್ರಿ ಕಶ್ಯಪ್‌ ಅವರದ್ದೂ ಮುಖ್ಯ ಪಾತ್ರವಿದೆ.

ಟಾಪ್ ನ್ಯೂಸ್

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.