ಜ್ವರದಿಂದ ಇಬ್ಬರ ಸಾವು
Team Udayavani, Jul 3, 2019, 2:17 PM IST
ಕಾಸರಗೋಡು: ಜ್ವರದಿಂದ ಬಳಲುತ್ತಿದ್ದ ಇಬ್ಬರು ಸಾವಿಗೀಡಾದ ಘಟನೆ ನಡೆದಿದೆ.
ಪೈವಳಿಕೆ ಜೋಡುಕಲ್ಲು ನಿವಾಸಿ ರಮೇಶ್ ಶೆಟ್ಟಿ (44) ಮತ್ತು ಪಾಲಕುನ್ನು ನಿವಾಸಿ ದೇವಾನಂದ (5) ಸಾವಿಗೀಡಾದರು.
ರಮೇಶ್ ಶೆಟ್ಟಿ ಕಲ್ಲಿಕೋಟೆಯ ಹೊಟೇಲಿನಲ್ಲಿ 4 ದಿನ ಕೆಲಸ ಮಾಡಿದ್ದು, ಆಗ ಜ್ವರ ಬಾಧಿಸಿತ್ತು. ಊರಿಗೆ ಬಂದು ಉಪ್ಪಳದ ಖಾಸಗಿ ಆಸ್ಪತ್ರೆ, ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರೂ ವಾಸಿಯಾಗದೆ ಸಾವಿಗೀಡಾದರು.