ನೇಜಿ ನೆಟ್ಟು ಸಂಭ್ರಮಿಸಿದ ವಿದ್ಯಾರ್ಥಿಗಳು
Team Udayavani, Jul 17, 2019, 5:17 AM IST
ನೀರ್ಚಾಲು: ಕೃಷಿಯು ಮಾನವನ ಇತಿಹಾಸದಲ್ಲಿ ಒಂದು ಪ್ರಮುಖ ಪಾತ್ರವನ್ನೇ ವಹಿಸಿದೆ. ತಂತ್ರಜ್ಞಾನ ಎಷ್ಟೇ ಬೆಳೆದರೂ ಕೃಷಿಗೆ ಪರ್ಯಾಯ ವ್ಯವಸ್ಥೆ ಅಸಾಧ್ಯ. ರಾಷ್ಟ್ರದ ಬೆನ್ನೆಲುಬಾಗಿರುವ ಇಂತಹ ಕೃಷಿಯ ಬಗ್ಗೆ ತಿಳಿಯಲು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ವಿದ್ಯಾರ್ಥಿಗಳು ಬೇಳ ಸಮೀಪದ ಸುಬ್ರಹ್ಮಣ್ಯ ಅಡಿಗಳ ಭತ್ತದ ಗದ್ದೆಗೆ ಭೇಟಿ ನೀಡಿ ನೇಜಿನೆಟ್ಟು ಸಂಭ್ರಮಿಸಿದರು.
ಬೇಸಾಯದ ಬಗೆಗಿನ ಮಕ್ಕಳ ಕುತೂಹಲ ಭರಿತ ಪ್ರಶ್ನೆಗಳಿಗೆ ಅಡಿಗರು ಉತ್ತರಿಸುತ್ತಾ ಅಕ್ಕಿ, ತರಕಾರಿ ಮುಂತಾದವು ಗಳನ್ನು ಸ್ವತಃ ಬೆಳೆಯಬೇಕು. ಇದರಿಂದ ವಿಷಮುಕ್ತ ಆಹಾರ, ದೈಹಿಕ ವ್ಯಾಯಾಮ ಮತ್ತು ಮನಸ್ಸಿಗೆ ಆನಂದ ಲಭಿಸುತ್ತದೆ ಎಂದು ತಿಳಿಸಿದರು.
ಶಿಕ್ಷಕರಾದ ವಾಣಿ ಪಿ.ಎಸ್, ಮಾಲತಿ ಪಿ, ಗೋವಿಂದ ಶರ್ಮ ಕೆ., ಅವಿನಾಶ ಕಾರಂತ ಎಂ., ಶೋಭಾ ಕೆ. ಹೀರೇಮs… ಉಪಸ್ಥಿತರಿದ್ದರು.