ರಾಧೆ ಪುರಾಣ
ನೋಡ ನೋಡುತಾ ಕಾಡುವ ಕಥೆ...
Team Udayavani, Jul 19, 2019, 5:00 AM IST
ಸಂತು ನಂತರ ಮತ್ತೆ ಬರುತ್ತಿರುವುದಕ್ಕೆ ಎಕ್ಸೆ„ಟ್ ಆಗಿದ್ದೇನೆ….
-“ಸಂತು ಸ್ಟ್ರೈಟ್ ಫಾರ್ವರ್ಡ್’ ಚಿತ್ರದ ನಂತರ ನಟಿ ರಾಧಿಕಾ ಪಂಡಿತ್ ಮತ್ತೆ ಬಿಗ್ ಸ್ಕ್ರೀನ್ ಮೇಲೆ ಬರುತ್ತಿರುವುದರಿಂದ “ಆದಿಲಕ್ಷ್ಮಿ ಪುರಾಣ’ದ ಮೇಲೆ ರಾಧಿಕಾ ಪಂಡಿತ್ ಅವರಿಗೂ ಸಾಕಷ್ಟು ನಿರೀಕ್ಷೆ ಇದೆ. ಚಿತ್ರ ಇಂದು ತೆರೆಕಾಣುತ್ತಿದೆ. ಈ ಬಗ್ಗೆ ಮಾತನಾಡುವ ರಾಧಿಕಾ, “ಸುಮಾರು ಎರಡೂವರೆ ವರ್ಷಗಳ ನಂತರ, ಮದುವೆ ಆದ ಮೇಲೆ ನನ್ನ ಚಿತ್ರ ಬರುತ್ತಿರುವುದರಿಂದ, ಆಡಿಯನ್ಸ್, ಫ್ರೆಂಡ್ಸ್-ಹಿತೈಷಿಗಳು ಎಲ್ಲರಿಗೂ ಚಿತ್ರದ ಮೇಲೆ ಒಂದಷ್ಟು ಕುತೂಹಲವಿದೆ. ಎಲ್ಲರೂ ಕೂಡ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ. ಇಂಥ ಮಾತುಗಳನ್ನ ಕೇಳುತ್ತಿದ್ದಂತೆ, ನಾನೂ ಕೂಡ ಈ ಚಿತ್ರದ ಮೇಲೆ ಸಾಕಷ್ಟು ಎಕ್ಸೆ„ಟ್ ಆಗಿದ್ದೇನೆ. ಇಂಥದ್ದೊಂದು ಸಬೆjಕ್ಟ್ ಚಿತ್ರ ಮಾಡಿದ್ದಕ್ಕೆ ಖುಷಿ ಇದೆ. ಇನ್ನು ಜನ ಹೇಗೆ ಸ್ವೀಕರಿಸುತ್ತಾರೋ ನೋಡೋಣ…’ ಎನ್ನುತ್ತಾರೆ.
“ಆದಿಲಕ್ಷ್ಮಿಪುರಾಣ’ ಚಿತ್ರವನ್ನು ಒಪ್ಪಿ ಕೊಳ್ಳಲು ಮುಖ್ಯ ಕಾರಣ ಅದರ ಸಬೆjಕ್ಟ್ ಅಂತೆ. ಈ ಬಗ್ಗೆ ಮಾತನಾಡುವ ರಾಧಿಕಾ, “ಮದುವೆಯಾದ ನಂತರ ನನಗೆ ಮ್ಯಾಚ್ ಆಗುವಂಥ ಸಬೆjಕ್ಟ್ ಅನ್ನೋ ಕಾರಣಕ್ಕೆ ಈ ಚಿತ್ರವನ್ನು ಒಪ್ಪಿಕೊಂಡಿಲ್ಲ. ನನ್ನ ಸಿನಿಮಾ ಕೆರಿಯರ್ನಲ್ಲಿ ಯಾವಾಗ ಈ ಚಿತ್ರದ ಆಫರ್ ಬಂದಿದ್ದರೂ, ಅದನ್ನ ಒಪ್ಪಿಕೊಳ್ಳುತ್ತಿದ್ದೆ. ಕಾರಣ ಅದರಲ್ಲಿರುವ ಕಥೆ ಮತ್ತು ನನ್ನ ಪಾತ್ರಕ್ಕೆ ಇರುವ ಇಂಪಾರ್ಟೆನ್ಸ್. ಹಾಗಂತ “ಆದಿಲಕ್ಷ್ಮಿಪುರಾಣ’ ಚಿತ್ರದಲ್ಲಿ ಆಹಾ… ಓಹೋ ಅನ್ನುವಂತ ಕಥೆಯೇನೂ ಇಲ್ಲ. ಆದ್ರೆ ನಮ್ಮ ನಡುವೆಯೇ ನಡೆಯುವ, ನಮ್ಮ ನಡುವೆಯೇ ಇರುವಂಥ, ಕಥೆ-ಪಾತ್ರ ಈ ಚಿತ್ರದಲ್ಲಿ ಇರುವುದರಿಂದ ನನಗೆ ಇಷ್ಟವಾಯ್ತು. ಸಿಂಪಲ್ ಕಥೆಯಾದ್ರೂ, ನೋಡುವವರಿಗೆ ಕಾಡುವಂಥ ಕ್ಯಾರೆಕ್ಟರ್ ಅದು. ಹಾಗಾಗಿ ಈ ಚಿತ್ರ ಮಾಡುವಂತಾಯ್ತು’ ಎನ್ನುತ್ತಾರೆ.
ಇನ್ನು ಎರಡೂವರೆ ವರ್ಷದ ನಂತರ ಆಡಿಯನ್ಸ್ ಮುಂದೆ ಬರುತ್ತಿರುವುದರಿಂದ, ರಾಧಿಕಾ ಪಂಡಿತ್ ಅವರ ಚಿತ್ರದಲ್ಲಿ ಏನೇನು ನಿರೀಕ್ಷಿಸಬಹುದು ಎಂಬ ಪ್ರಶ್ನೆಗೆ ಉತ್ತರಿಸುವ ರಾಧಿಕಾ, “ಇದು ಸಿಂಪಲ್ ಕಥೆ ಆದ್ರೂ ರಿಯಾಲಿಸ್ಟಿಕ್ ಕಥೆ. ಚಿತ್ರದಲ್ಲಿ ಬರುವ ಎಲ್ಲಾ ಕ್ಯಾರೆಕ್ಟರ್ ಹಾಗೇ ಇದೆ. ಇನ್ನು ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಲಕ್ಷ್ಮೀ ಅಂತ. ಚಿಕ್ಕ ವಯಸ್ಸಿನಿಂದಲೂ ನಾನು ದಪ್ಪ ಇದ್ದೀನೇನೊ ಅನ್ನೋ ಕಾಂಪ್ಲೆಕ್ಸ್ ಇಟ್ಟುಕೊಂಡು ಬೆಳೆದಿರುವಂಥ ಹುಡ್ಗಿ. ಇದಕ್ಕೆ ಸರಿಯಾಗಿ ಎಲ್ರೂ ಅವಳನ್ನ ಲಡ್ಡು, ಲಡ್ಡು ಲಕ್ಷ್ಮೀ, ಸೋಡಾಬುಡ್ಡಿ ಅಂಥ ಅಡ್ಡ ಹೆಸರಿನಿಂದ ಕರೆಯುತ್ತಿರುತ್ತಾರೆ. ಮನೆಯಲ್ಲಿ ತಮಾಷೆ ಮಾಡಿಕೊಂಡು ಇರುವಂಥ ಹುಡ್ಗಿ. ಇದ್ರಲ್ಲಿ ಒಂದು ಲವ್ಸ್ಟೋರಿ ಇದೆ, ಇಡೀ ಚಿತ್ರ ಕಾಮಿಕ್ ಆಗಿ ಸಾಗುತ್ತದೆ’ ಎನ್ನುತ್ತಾರೆ ರಾಧಿಕಾ.
ಮದುವೆಯ ಬಳಿಕ ಇಷ್ಟವಾದ ಮೊದಲ ಕಥೆ
ಮದುವೆಯಾದ ನಂತರ ರಾಧಿಕಾ ಪಂಡಿತ್ ಸುಮಾರು ಆರು ತಿಂಗಳು ಚಿತ್ರರಂಗದ ಎಲ್ಲಾ ಕೆಲಸ ಕಾರ್ಯಗಳಿಂದ ಗ್ಯಾಪ್ ತೆಗೆದುಕೊಂಡಿದ್ದರು. ಈ ವೇಳೆ ಕೆಲವೊಂದು ಕಥೆಗಳು ರಾಧಿಕಾ ಅವರನ್ನು ಹುಡುಕಿಕೊಂಡು ಬಂದಿದ್ದವು. ಅದರಲ್ಲಿ ಒಂದು ಕಥೆಯೇ “ಆದಿಲಕ್ಷ್ಮಿಪುರಾಣ’ವಂತೆ. ಇದರ ಬಗ್ಗೆ ಮಾತನಾಡುವ ರಾಧಿಕಾ, “ಮದುವೆಯ ನಂತರ ಕೇಳಿದ ಮೂರು-ನಾಲ್ಕು ಕಥೆಗಳಲ್ಲಿ, ಈ ಕಥೆ ನನಗೆ ಇಷ್ಟವಾಯ್ತು. ರಾಕ್ಲೈನ್ ವೆಂಕಟೇಶ್ ಅವರ ಕಡೆಯಿಂದ ಈ ಆಫರ್ ಬಂತು. ನಂತರ ನಿರ್ದೇಶಕಿ ಪ್ರಿಯಾ ಬಂದು ಕಥೆ ಹೇಳಿದ್ರು. ಯಶ್ ಅವರಿಗೂ ಈ ಕಥೆ ಇಷ್ಟವಾಯ್ತು. ನಂತರ ಇದನ್ನ ಮಾಡೋಣ ಅನ್ನೋ ನಿರ್ಧಾರಕ್ಕೆ ಬಂದೆ. ನಾನು ಮಾಡುವ ಯಾವುದೇ ಚಿತ್ರಕ್ಕಾದರೂ, ಒಂದಷ್ಟು ಪ್ರಿಪರೇಷನ್ಸ್, ಹೋಮ್ವರ್ಕ್ ಅಂತ ಮಾಡಿಕೊಳ್ಳುತ್ತೇನೆ’ ಎನ್ನುತ್ತಾ ಮಾತು ಮುಗಿಸಿದರು ರಾಧಿಕಾ.
ಜಿ.ಎಸ್.ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ