ಮೌಲ್ಯ ಅಧಃಪತನದಿಂದ ಶೋಷಣೆ ಹೆಚ್ಚಳ

ಸಹಾಯ-ಅನುಕಂಪ ಮೇಲ್ನೋಟಕ್ಕೆ ಸೀಮಿತ•ಬಸವಣ್ಣ-ಅಂಬೇಡ್ಕರ್‌ ತತ್ವ ಪಾಲನೆ ಆಗುತ್ತಿಲ್ಲ

Team Udayavani, Aug 5, 2019, 12:47 PM IST

5-AGUST-19

ಕಲಬುರಗಿ: ನೀತಿ ಇಲ್ಲದ ರಾಜಕೀಯ, ಸಾಮಾಜಿಕ ಬದ್ಧತೆ ಇಲ್ಲದ ಹೋರಾಟ-ಸಂಘಟನೆ, ಜನಪರ ಕಾಳಜಿಯಿಲ್ಲದ ಆಡಳಿತ ವರ್ಗ ಹಾಗೂ ಜನರಲ್ಲಿ ಹೆಚ್ಚಿದ ಸ್ವಾರ್ಥತೆಯಿಂದ ಎಲ್ಲವೂ ಬದಲಾಗಿ ಪ್ರೀತಿ, ಪ್ರೇಮ, ಸಹಾಯ ಹಾಗೂ ಅನುಕಂಪ ಎನ್ನುವುದು ಮೇಲ್ನೋಟಕ್ಕೆ ಮಾತ್ರ ಸೀಮಿತ ಎನ್ನುವಂತಾಗಿದೆ.

ಎಲ್ಲ ಕ್ಷೇತ್ರಗಳಲ್ಲಿ ಮೌಲ್ಯಗಳ ಅಧಃಪತನದಿಂದ ಶೋಷಣೆ ಹೆಚ್ಚಾಗಿದೆ. ಅಲ್ಲದೇ ಜಾತಿಯತೆ ಬಲಾಡ್ಯವಾಗಿದೆ. ಎಲ್ಲದರ ನಡುವೆ ಅಂತರ ಕಡಿಮೆಯಾಗುವ ಬದಲು ಮತ್ತಷ್ಟು ಜಾಸ್ತಿಯಾಗುತ್ತಿದೆ. ಮೇಲ್ನೋಟಕ್ಕೆ ಬಸವಣ್ಣ ಹಾಗೂ ಅಂಬೇಡ್ಕರ್‌ ತತ್ವಗಳನ್ನು ಹೇಳುತ್ತಿದ್ದೆವೆಯೇ ಹೊರತು ಅವರ ತತ್ವಗಳ ಆಚರಣೆ ಮಾಡುತ್ತಿಲ್ಲ.

-ಹೀಗೆ ವಾಸ್ತವ ಅಂಶಗಳನ್ನು ಬಿಚ್ಚಿಟ್ಟರು ಮಾಜಿ ಸಚಿವ, ಹೋರಾಟಗಾರ, ದಣಿವರಿಯದ ನಾಯಕ ಎಸ್‌.ಕೆ. ಕಾಂತಾ.

ಸಂದರ್ಭ: ಜಿಲ್ಲಾ ಕನ್ನಡ ಪರಿಷತ್‌ ವತಿಯಿಂದ ಕನ್ನಡ ಭವನದಲ್ಲಿ ರವಿವಾರ ಆಯೋಜಿಸಲಾಗಿದ್ದ ‘ಮನದಾಳದ ಮಾತು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೀವನ ಸಂಘರ್ಷ, ನಡೆದು ಬಂದ ದಾರಿಯನ್ನು ತಿಳಿಸಿದರು.

ಹುಟ್ಟೂರು ಹಾಗರಗುಂಡಗಿ ಆದರೂ ಸ್ವಗ್ರಾಮದಲ್ಲಿ ಶಾಲೆ ಕಲಿಯಲಿಲ್ಲ. ಕಲಬುರಗಿಯಲ್ಲಿ ಸೋದರಮಾವನ ಮನೆಯಲ್ಲಿದ್ದು, ಮಕ್ತಂಪುರ ಮಠದಲ್ಲಿ ಏಳನೇ ತರಗತಿವರೆಗೂ ಮಾತ್ರ ಓದಿದೆ. ಕಷ್ಟದ ಹಿನ್ನೆಲೆಯಲ್ಲಿ 16ನೇ ವಯಸ್ಸಿಗೆ ಎಂಎಸ್‌ಕೆ ಮಿಲ್ಗೆ ಸೇರಿದೆ. 18 ವರ್ಷಕ್ಕೆ ಕಾಯಂ ಕಾರ್ಮಿಕನಾದೆ. ಕಾರ್ಖಾನೆಯಲ್ಲಿ ಇಂಗ್ಲಿಷ್‌ಗೆ ಪ್ರಾಧ್ಯಾನ್ಯತೆ ಇದ್ದಿದ್ದರಿಂದ ಬಿರಾದಾರ ಎನ್ನುವರ ಬಳಿ ಎರಡು ವರ್ಷ ಇಂಗ್ಲಿಷ ಕಲಿತೆ. ಕಾರ್ಮಿಕರಿಗೆ ನ್ಯಾಯಕ್ಕಾಗಿ ಹೋರಾಟ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಸಂಘಟನೆಯೊಂದಿಗೆ ಸೇರಿಕೊಂಡರು. ಎಂಎಸ್‌ಕೆ ಮಿಲ್ ಬಂದಾಗಿದ್ದ ಹಾಗೂ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಪ್ರಬಲ ಹೋರಾಟ ನಡೆಸಲಾಯಿತು. ಲಾಠಿ ಚಾರ್ಜ್‌ ಆಯಿತು. 144 ಕಲಂ ಜಾರಿಯಾಯಿತು. ಆಯಿಲ್ ಮಿಲ್ ವಿರುದ್ಧ ಹೋರಾಟ ನಡೆದಾಗ ತಮ್ಮನ್ನು ಬಂಧಿಸಿ ಜೈಲಿಗಟ್ಟಿದಾಗ ತಮ್ಮ ತಾಯಿ ಸತ್ಯಾಗ್ರಹ ಮುಂದುವರಿಸಿದ್ದರು ಎಂದು ಹೋರಾಟದ ಸಂದರ್ಭಗಳನ್ನು ವಿವರಿಸಿದರು.

ವಿ.ಪಿ. ದೇವುಳಗಾಂವಕರ, ಮಲ್ಲೇಶಯ್ಯ ಕಲ್ಮಠ ಮುಂತಾದವರ ಸಹಕಾರದಿಂದ ಹಾಗೂ ಬಾಬುರಾವ್‌ ಎನ್ನುವರು ನಡೆಸುತ್ತಿದ್ದ ನೂರಾರು ಸಂಘಟನೆಗಳ ನೇತೃತ್ವ ವಹಿಸಿಕೊಂಡು ಲಾರಿ, ಆಟೋ ಹೀಗೆ ಎಲ್ಲ ವರ್ಗದ ಸಂಘಟನೆಗಳ ಕಾರ್ಮಿಕರ ಸಲುವಾಗಿ ಹೋರಾಟದ ಮಾರ್ಗಕ್ಕೆ ಇಳಿದು, ಅದನ್ನೇ ಇಂದಿನ ದಿನದವರೆಗೂ ಮುಂದುವರಿಸಲಾಗಿದೆ. ಇದರ ನಡುವೆ ರಾಜಕೀಯಕ್ಕೆ ಬಂದು ಶಾಸಕನಾಗಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಕಾರ್ಮಿಕ ಸಚಿವನಾಗಿ ಅಮೂಲಾಗ್ರ ಬದಲಾವಣೆ ತರಲು ಯತ್ನಿಸಲಾಗಿತ್ತು. ಇದಕ್ಕೆಲ್ಲ ಜನರಿಟ್ಟಿರುವ ಪ್ರೀತಿಯೇ ಕಾರಣವಾಗಿದೆ ಎಂದರು.

ಎಂಎಸ್‌ಕೆ ಮಿಲ್ ಕಾರ್ಖಾನೆ ಹಾಗೂ ಕಾರ್ಮಿಕರ ಸಲುವಾಗಿ, ಆಳಂದ ಸಕ್ಕರೆ ಕಾರ್ಖಾನೆ ಕಾರ್ಮಿಕರ ಕಾಯಂಗೆ, ಭೂಮಿ ಕಳೆದುಕೊಂಡ ಹೊನ್ನಕಿರಣಗಿ ರೈತರಿಗೆ ಸೂಕ್ತ ಪರಿಹಾರ, ಪಾಲಿಕೆಯಲ್ಲಿನ ಕಾರ್ಮಿಕರು ಸೇರಿದಂತೆ ಹತ್ತಾರು ಬಗೆಯ ಕಾರ್ಮಿಕರ ಹೋರಾಟವಲ್ಲದೇ, ಈಗ ಕಳೆದ ನಾಲ್ಕು ವರ್ಷಗಳಿಂದ ಶ್ರೀ ಸಿಮೆಂಟ್ ಕಾರ್ಖಾನೆ ವಿರುದ್ಧ ನಡೆಸುತ್ತಿರುವ ಹೋರಾಟ ತಮ್ಮ ಜೀವನದಲ್ಲಿ ಮರೆಯಲಾರದ್ದು ಎಂದು ಹೇಳಿದರು.

ನಾಲ್ಕು ವರ್ಷದಿಂದ ಹೋರಾಟ: ಸೇಡಂ ತಾಲೂಕಿನಲ್ಲಿ ಶ್ರೀ ಸಿಮೆಂಟ್ ಕಾರ್ಖಾನೆ ಪ್ರಾರಂಭಕ್ಕೆ ಭೂಮಿ ಎನ್‌ಎ ಆಗದೇ ಇದ್ದರೂ 2012ರಲ್ಲಿ ಅನುಮತಿ ನೀಡಲಾಗುತ್ತದೆ. ಆದರೆ ಭೂಮಿ 2008ರಲ್ಲಿಯೇ ಖರೀದಿ ಮಾಡಲಾಗಿತ್ತು. ಆದರೂ ಸರ್ಕಾರದ ಭೂಮಿಗೆ ಒಂದು ದರ, ರೈತರ ಭೂಮಿಗೆ ಒಂದು ದರ ನೀಡಲಾಗಿದೆ. ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇದನ್ನು ಸರಿಪಡಿಸುವಂತೆ ಒತ್ತಾಯಿಸಿ ನಾಲ್ಕು ವರ್ಷಗಳಿಂದ ಸೇಡಂದಲ್ಲಿ ಹೋರಾಟ ನಡೆಸುತ್ತಾ ಬಂದಿದ್ದೇವೆ. ಹೋರಾಟದಲ್ಲಿ ಪಾಲ್ಗೊಂಡ 16 ಮಂದಿ ರೈತರು ಮೃತಪಟ್ಟಿದ್ದರೂ ಬೇಡಿಕೆಗೆ ಸ್ಪಂದಿಸದಿದ್ದರೇ ಏನು ಮಾಡಬೇಕು? ಯಾವ ರೀತಿ ಹೋರಾಟ ಮಾಡಬೇಕೆಂಬುದೇ ತಿಳಿಯುತ್ತಿಲ್ಲ ಎಂದರು. ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ ನಿರೂಪಿಸಿದರು, ಗೌರವ ಕಾರ್ಯದರ್ಶಿ ಡಾ| ವಿಜಯಕುಮಾರ ಪರೂತೆ ಸ್ವಾಗತಿಸಿದರು, ಸೂರ್ಯಕಾಂತ ಪಾಟೀಲ ವಂದಿಸಿದರು.

ಪ್ರಮುಖರಾದ ಬಸವರಾಜ ಇಂಗಿನ್‌, ಉಮಾಕಾಂತ ನಿಗ್ಗುಡಗಿ, ಶಿವಕಾಂತ ಮಹಾಜನ್‌, ಬಸವರಾಜ ತಡಕಲ್, ಡಿ.ಜಿ. ಸಾಗರ, ದೇವೇಗೌಡ ತೆಲ್ಲೂರ, ಮಹ್ಮದ ಸುಲ್ತಾನ ತಿಮ್ಮಾಪುರಿ, ಅಂಬಾರಾವ್‌ ಬೆಳಕೋಟಾ, ಅಗಸ್ತತೀರ್ಥ, ಬಾಬುರಾವ್‌ ಶೇರಿಕಾರ, ಎಂ.ಬಿ. ಅಂಬಲಗಿ, ಸುರೇಶ ಬಡಿಗೇರ ಹಾಗೂ ಕಸಾಪ ಪದಾಧಿಕಾರಿಗಳು ಮುಂತಾದವರಿದ್ದರು.

ಟಾಪ್ ನ್ಯೂಸ್

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಸಿಎಂ ಸಿದ್ಧರಾಮಯ್ಯ ರಾಜೀನಾಮೆ ಕೊಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ

Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ

1-qwewewqe

Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.