ರಿಸೈಕ್ಲರ್ ಯಂತ್ರ ಅಳವಡಿಕೆ
•ಗ್ರಾಹಕರ ಸೇವೆಯಲ್ಲಿ ಇನ್ನೊಂದು ಮೈಲಿಗಲ್ಲು: ಅಬ್ದುಲ್ ಚೌಗುಲೆ
Team Udayavani, Aug 10, 2019, 10:56 AM IST
ಭಟ್ಕಳ: ಭಟ್ಕಳ ಅರ್ಬನ್ ಬ್ಯಾಂಕಿನ ಮುಖ್ಯ ಶಾಖೆ ಆವಾರದಲ್ಲಿ ರಿಸೈಕ್ಲರ್ ಯಂತ್ರವನ್ನು ಅಧ್ಯಕ್ಷ ಆಬ್ದುಲ್ ಮಾಜೀದ್ ಚೌಗುಲೆ ಉದ್ಘಾಟಿಸಿದರು.
ಭಟ್ಕಳ: ಭಟ್ಕಳ ಅರ್ಬನ್ ಬ್ಯಾಂಕು ಹಣ ಜಮಾ ಮಾಡುವ ಹಾಗೂ ಹಿಂಪಡೆಯುವ (ರಿಸೈಕ್ಲರ್)ಯಂತ್ರ ಅಳವಡಿಕೆ ಮೂಲಕ ಇನ್ನೊಂದು ಮೈಲಿಗಲ್ಲನ್ನು ದಾಟಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಾಜೀದ್ ಚೌಗುಲೆ ಹೇಳಿದರು.
ಅವರು ಬ್ಯಾಂಕಿನ ಮುಖ್ಯ ಶಾಖೆ ಆವಾರದಲ್ಲಿ ಅಳವಡಿಸಲಾದ ರಿಸೈಕ್ಲರ್ (ಹಣ ಜಮಾ ಮಾಡುವ ಹಾಗೂ ಪಡೆಯುವ) ಯಂತ್ರವನ್ನು ಉದ್ಘಾಟಿಸಿ ಮಾತನಾಡಿದರು.
ಹೊಸ ಹೊಸ ಬ್ಯಾಂಕಿಂಗ್ ತಂತ್ರಜ್ಞಾನ ಅಳವಡಿಸಿ ಗ್ರಾಹಕ ಸೇವೆ ನೀಡುವಲ್ಲಿ ಮಂಚೂಣಿಯಲ್ಲಿರುವ ನಮ್ಮ ಬ್ಯಾಂಕು ಗ್ರಾಹಕರ ಕುಂದು ಕೊರತೆಗಳಿಗೆ ಸದಾ ಸ್ಪಂದಿಸುತ್ತಿದೆ. ಬ್ಯಾಂಕಿನ ಮುಖ್ಯ ಶಾಖೆಯಲ್ಲಿ ಅಳವಡಿಸಿರುವ ರಿಸೈಕ್ಲರ್ ಯಂತ್ರದ ಮೂಲಕ ಗ್ರಾಹಕರು ತಮ್ಮ ಖಾತೆಗೆ ಹಣ ಜಮಾ ಮಾಡಲು ಹಾಗೂ ತೆಗೆಯಲು ಅವಕಾಶವಿದ್ದು ಇನ್ಮುಂದೆ ಬ್ಯಾಂಕಿನ ನಗದು ಕೌಂಟರ್ನಲ್ಲಿ ಕಾಯುವ ಸಮಯ ಉಳಿತಾಯವಾಗಲಿದೆ ಎಂದರು. ರಿಸೈಕ್ಲರ್ ಯಂತ್ರದ ಮೂಲಕ ಅತೀ ಶೀಘ್ರ ಹಾಗೂ ಸುಲಭವಾಗಿ ಹಣ ಜಮಾ ಮಾಡಬಹುದಲ್ಲದೇ ದಿನದ 24 ಗಂಟೆಯೂ ಈ ಸೇವೆ ಲಭ್ಯವಿರುವುದರಿಂದ ಯಾವುದೇ ಸಮಯದಲ್ಲಿ ಖಾತೆಗೆ ಹಣ ಜಮಾ ಮಾಡಲು ಸಾಧ್ಯವಾಗುವುದು ಎಂದೂ ಹೇಳಿದರು.
ಈ ಹಿಂದೆಯೇ ಜನತೆಗೆ ಎಟಿಎಂ ಸೌಲಭ್ಯವನ್ನು ಒದಗಿಸುವ ಮೂಲಕ ಉತ್ತಮ ಸೇವೆಗೆ ಹೆಸರಾಗಿದ್ದ ಬ್ಯಾಂಕ್ ರಿಸೈಕ್ಲರ್ ಯಂತ್ರ ಸ್ಥಾಪಿಸುವ ಮೂಲಕ ಸೇವೆ ನೀಡುವಲ್ಲಿ ಇನ್ನೊಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದೂ ಅವರು ಕರೆ ನೀಡಿದರು.
ಬ್ಯಾಂಕಿನ ಉಪಾಧ್ಯಕ್ಷ ಶೇಖ್ ಶಬ್ಬೀರ್ ಖಾದಿರ ಬಾಷಾ, ನಿರ್ದೇಶಕರಾದ ಅಬ್ದುಲ ಖಾಲಿಕ್ ಸೌದಾಗರ್, ಮಾಸ್ತಿ ಎಸ್. ಮೊಗೇರ, ಶ್ರೀಧರ ನಾಯ್ಕ, ಜುಬೇರ್ ಕೋಲಾ, ಇಮ್ತಿಯಾಜ್ ಜುಬಾಪು, ಜಾಫರ್ ಸಾಧಿಕ್ ಶಾಬಂದ್ರಿ, ಪರಿ ಹುಸೇನ್ ಹಾಗೂ ಬ್ಯಾಂಕಿನ ಪ್ರಧಾನ ಕಾರ್ಯ ನಿರ್ವಾಹಕ ಸುಭಾಷ ಎಂ. ಶೆಟ್ಟಿ, ಸಹಾಯಕ ಪ್ರಧಾನ ಕಾರ್ಯನಿರ್ವಾಹಕ ಶಂಭು ಹೆಗಡೆ, ಮುಖ್ಯ ಶಾಖೆ ವ್ಯವಸ್ಥಾಪಕ ಗಣಪತಿ ಪ್ರಭು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್ಗೆ ಭಾರಿ ಡಿಮ್ಯಾಂಡ್
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ