ನಕ್ಸಲ್ ನಿಗ್ರಹಕ್ಕೆ ಹೊರಟವನಿಗೆ ಎದುರಾಗಿದ್ದು ಆತನ ತಂಗಿ!

ಏನಿದು ವೆಟ್ಟಿ ರಾಮ ಮತ್ತು ನಕ್ಸಲ್ ವೆಟ್ಟಿ ಕನ್ನಿಯವರ ಕರುಣಾಜನಕ ಕಥೆ?

Team Udayavani, Aug 13, 2019, 8:10 PM IST

Vetti-Rama-13-8

ಜಾರ್ಖಂಡ್: ಇದು ಯಾವುದೇ ಸಿನೇಮಾದ ಕಥೆಯಲ್ಲ ಬದಲಾಗಿ ನಂಬಲು ಕಷ್ಟವಾದರೂ ನಿಜವಾಗಿಯೂ ನಡೆದ ಘಟನೆ. ಛತ್ತೀಸ್ ಗಢ ರಾಜ್ಯದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ ಸುಕ್ಮಾ ಎಂಬಲ್ಲಿ ನಕ್ಸಲರ ಮೇಲೆ ದಾಳಿ ಮಾಡಲು ಪೊಲೀಸರು ಹೋದಾಗ ನಡೆದ ಅಚ್ಚರಿ ಇದು.

ಸುಕ್ಮಾ ಪ್ರದೇಶದಲ್ಲಿ ನಕ್ಸಲರ ಒಂದು ತಂಡ ಕಾರ್ಯಾಚರಿಸುತ್ತಿದೆ ಎಂಬ ಖಚಿತ ಮಾಹಿತಿ ಪಡೆದು ಅಲ್ಲಿಗೆ ದಾಳಿ ನಡೆಸಲು ಹೋದ ಪೊಲೀಸರ ತಂಡದಲ್ಲಿದ್ದ ವೆಟ್ಟಿ ರಾಮ ಎಂಬವರಿಗೆ ಅಲ್ಲೊಂದು ಅಚ್ಚರಿ ಕಾದಿತ್ತು. ಅದೇನೆಂದರೆ ಅವರು ದಾಳಿ ನಡೆಸಲು ಹೋಗಿದ್ದ ನಕ್ಸಲರ ಗುಂಪಿನಲ್ಲಿ ಸ್ವತಃ ವೆಟ್ಟಿ ರಾಮನ ತಂಗಿಯೇ ಇದ್ದಳು. ತನ್ನ ತಂಗಿ ನಕ್ಸಲ್ ಗುಂಪಿನಲ್ಲಿರುವ ವಿಷಯ ವೆಟ್ಟಿ ರಾಮನಿಗೆ ಗೊತ್ತಿದ್ದರೂ ಆಕೆಯನ್ನು ಆ ಕ್ಷಣದಲ್ಲಿ, ಆ ಜಾಗದಲ್ಲಿ  ತಾನು ನೋಡುತ್ತೇನೆ ಎಂದು ವೆಟ್ಟಿ ರಾಮ ಊಹಿಸಿಯೂ ಇರಲಿಲ್ಲ.

ಒಂದು ಕಾಲದಲ್ಲಿ ವೆಟ್ಟ ರಾಮನೂ ನಕ್ಸಲ್ ಗುಂಪಿನ ಸದಸ್ಯನೇ ಆಗಿದ್ದ. ಆದರೆ ಬಳಿಕ 2018ರಲ್ಲಿ ಶಸ್ತ್ರತ್ಯಾಗ ಮಾಡಿ ಶರಣಾಗಿದ್ದ. ಶರಣಾಗತಿಯ ನಂತರ ಪೊಲೀಸ್ ಪಡೆ ಸೇರಿದ ವೆಟ್ಟಿ ರಾಮ ಅಲ್ಲಿ ಪೊಲೀಸರಿಗೆ ನಕ್ಸಲ್ ಚಲನವಲನಗಳ ಮಾಹಿತಿ ನೀಡುವ ಕಾರ್ಯವನ್ನೂ ಮಾಡುತ್ತಿದ್ದ.

ಹೀಗಿರುವಾಗ ಮೊನ್ನೆ ಜುಲೈ 29ರಂದು ನಕ್ಸಲ್ ಕಾರ್ಯಾಚರಣೆಗೆ ಹೊರಟಿದ್ದ ಪೊಲೀಸರ ತಂಡದೊಂದಿಗೆ ತೆರಳುವಂತೆ ವೆಟ್ಟಿ ರಾಮನಿಗೆ ತನ್ನ ಮೇಲಧಿಕಾರಿಗಳಿಂದ ಸೂಚನೆ ಸಿಗುತ್ತದೆ. ಹಾಗೆ ತೆರಳಿದ ವೆಟ್ಟಿ ರಾಮನಿಗೆ ಆ ಕಾಡಿನಲ್ಲಿದ್ದ ನಕ್ಸಲ್ ತಂಡದ ಜೊತೆ ಎದುರಾದವಳೇ ಆತನ ಸಹೋದರಿ ವೆಟ್ಟಿ ಕನ್ನಿ.

ಬಳಿಕ ಅಲ್ಲಿ ನಡೆದ ಎನ್ ಕೌಂಟರಿನಲ್ಲಿ ಇಬ್ಬರು ನಕ್ಸಲರು ಮೃತಪಟ್ಟರೂ ವೆಟ್ಟಿರಾಮನ ತಂಗಿ ತನ್ನ ತಂಡದವರ ಜೊತೆ ದಟ್ಟ ಕಾಡಿನಲ್ಲಿ ತಪ್ಪಿಸಿಕೊಂಡು ಹೋಗುತ್ತಾಳೆ. ಈ ಹಿಂದೆಯೂ ವೆಟ್ಟಿ ರಾಮ ತನ್ನ ತಂಗಿಗೆ ಹಲವಾರು ಪತ್ರಗಳನ್ನು ಬರೆದು ಪೊಲೀಸರಿಗೆ ಶರಣಾಗುವಂತೆ ಸೂಚಿಸಿದ್ದ.

ಇದೀಗ ರಕ್ಷಾ ಬಂಧನದ ಕೊಡುಗೆಯಾಗಿ ವೆಟ್ಟಿ ರಾಮ ಮತ್ತೆ ತನ್ನ ತಂಗಿಗೆ ಪತ್ರ ಬರೆದು ಆಕೆಯನ್ನು ಶರಣಾಗತಿಗೆ ಒಪ್ಪಿಸಲು ನಿರ್ಧರಿಸಿದ್ದಾನೆ. ಯಾವುದೇ ಹಬ್ಬಗಳ ಆಚರಣೆಯಲ್ಲಿ ಆಕೆಗೆ ನಂಬಿಕೆ ಇಲ್ಲದಿರುವುದರಿಂದ ತನ್ನ ತಂಗಿ ತನ್ನ ಈ ಮನವಿಯನ್ನು ಪುರಸ್ಕರಿಸುತ್ತಾಳೆ ಎಂಬ ನಂಬಿಕೆ ವೆಟ್ಟಿ ರಾಮನಲ್ಲಿ ಉಳಿದಿಲ್ಲವಂತೆ. ಆದರೆ ನನಗೆ ಉಳಿದಿರುವುದು ಇದೊಂದೇ ಮಾರ್ಗ ಎಂದು ತನ್ನ ತಂಗಿಯನ್ನು ನೆನೆದು ಭಾವುಕನಾಗುತ್ತಾನೆ ವೆಟ್ಟಿ ರಾಮ.

ಒಟ್ಟಿನಲ್ಲಿ, ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ನಕ್ಸಲ್ ತಂಡವನ್ನು ಸೇರಿ ಪೊಲೀಸ್ ಪಡೆಗಳ ಕಣ್ಣು ತಪ್ಪಿಸಿ ಕಾಡು ಮೇಡುಗಳಲ್ಲಿ ಅಲೆಯುತ್ತಾ ಕೊನೆಗೊಂದು ದಿನ ಅದೇ ಪೊಲೀಸರ ಕೈಯಲ್ಲಿ ಎನ್ ಕೌಂಟರ್ ಗೆ ಬಲಿಯಾಗುವ ವೆಟ್ಟಿ ಕನ್ನಿಯಂತವರ ಮನ ಒಲಿಸಿ ಅವರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ಕರೆ ತರುವಲ್ಲಿ ವೆಟ್ಟಿ ರಾಮನಂತವರು ಮಾಡುತ್ತಿರುವ ಭಗೀರಥ ಪ್ರಯತ್ನವನ್ನು ಪ್ರಶಂಸಿಸಲೇಬೇಕು.

ಟಾಪ್ ನ್ಯೂಸ್

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.