ಕಂಬಳಿ ಹುಳುವಿನ ಕಥೆ ನಮಗೂ ಮಾದರಿ


Team Udayavani, Aug 26, 2019, 5:00 AM IST

30

ಜೀವನ ಎನ್ನುವುದು ನಮ್ಮನ್ನು ನಾವು ಸಾಬೀತು ಪಡಿಸಿಕೊಳ್ಳಲಿರುವ ಉತ್ತಮ ಅವಕಾಶ. ಇಲ್ಲಿ ಸ್ವಲ್ಪ ಕಷ್ಟ ಪಟ್ಟರೆ, ಚಿಕ್ಕ-ಪುಟ್ಟ ತ್ಯಾಗ ಮಾಡಿಕೊಂಡರೆ ಅಂದುಕೊಂಡ ಗುರಿ ಸಾಧಿಸಬಹುದು. ಇನ್ನೊಬ್ಬರಿಗೆ ಮಾದರಿ ಯಾಗಬಹುದು.

ಚೇತೋಹಾರಿ ಕಂಬಳಿ ಹುಳದ ಕಥೆ
ಕಂಬಳಿ ಹುಳ ಚಿಟ್ಟೆಯಾಗಿ ಬದಲಾಗುತ್ತದೆ ಎನ್ನಲಾಗುವ ಕಥೆ ಎಂತಹವರಿಗೂ ಸ್ಫೂರ್ತಿಯಾಗಬಲ್ಲದು. ಪರಿಶ್ರಮದಿಂದ ಯಾವುದೇ ಗುರಿ ಈಡೇರಬಹುದು ಎಂಬುದನ್ನು ಈ ಕಥೆ ಸಾರಿ ಹೇಳುತ್ತದೆ. ಕಂಬಳಿ ಹುಳ ಯಾರಿಗೆ ಗೊತ್ತಿಲ್ಲ ಹೇಳಿ. ಮೈಯೆಲ್ಲ ರೋಮ ಹೊಂದಿರುವ ಅದನ್ನು ನೋಡಿ ಅಸಹ್ಯಪಟ್ಟುಕೊಳ್ಳುವವರೇ ಅಧಿಕ. ನಿಜ ಹೇಳಬೇಕೆಂದರೆ ಪ್ರಕೃತಿಯಲ್ಲಿ ಅಸುಂದರ ಎಂಬ ಕಲ್ಪನೆಯೇ ಇಲ್ಲ. ಆದರೆ ನಮ್ಮ ದೃಷ್ಟಿಕೋನ ಸರಿಯಾಗಿಲ್ಲದಿರುವುದರಿಂದ ಕಂಬಳಿ ಹುಳವನ್ನು ಅಸಹ್ಯ ಎನ್ನುತ್ತೇವೆ. ಅದಿರಲಿ. ಎಲ್ಲರಂತೆ ಕಂಬಳಿ ಹುಳಕ್ಕೂ ಅದರದ್ದೇ ಆದ ಕನಸುಗಳಿರುತ್ತವೆ. ಬಣ್ಣ ಬಣ್ಣದ ರೆಕ್ಕೆ ಕಟ್ಟಿಕೊಂಡು ಸ್ವತ್ಛಂದವಾಗಿ ಹಾರಾಡುತ್ತಿರಬೇಕು ಎಂದು ಕನಸು ಕಾಣುವ ಅದು ಎಷ್ಟೇ ಕಷ್ಟ ಪಟ್ಟಾದರೂ ನನಸು ಮಾಡಲು ಸಿದ್ಧವಾಗುತ್ತದೆ.

ಸಾಧನೆಯ ಮೊದಲ ಭಾಗವಾಗಿ ಕಂಬಳಿ ಹುಳ ಸಿಕ್ಕ ಸಿಕ್ಕ ಎಲೆಗಳನ್ನೆಲ್ಲಿ ತಿನ್ನತೊಡಗುತ್ತದೆ. ಹೊಟ್ಟೆ ತುಂಬಿದರೂ ಹಠಕ್ಕೆ ಬಿದ್ದು ಎಲೆಗಳನ್ನು ಸೇವಿಸುತ್ತದೆ. ಕೊನೆಗೆ ಮೈಯೆಲ್ಲಾ ದಪ್ಪವಾಗುತ್ತದೆ. ಮುಂದಿನ ಹಾದಿಗೆ ಬೇಕಾದ ಪೋಷಣೆಯನ್ನು ಈ ಮೂಲಕ ಸಂಗ್ರಹಿಸುತ್ತದೆ. ಇನ್ನು ಮುಂದೆ ಎರಡನೇ ಮೆಟ್ಟಿಲು ಹತ್ತಬೇಕು. ಅದಕ್ಕಾಗಿ ಎಲ್ಲವನ್ನೂ ತೊರೆದು ಏಕಾಂತಕ್ಕೆ ತೆರಳುತ್ತದೆ. ಸುತ್ತ ಪೊರೆಯೊಂದನ್ನು ನಿರ್ಮಿಸಿಕೊಂಡು ಪೊರೆ ಹುಳವಾಗಿ ಬದಲಾಗುತ್ತದೆ. ಮೂರನೇ ಹಂತವನ್ನು ತಲುಪುವ ಕಂಬಳಿ ಹುಳ ಈಗ ತನ್ನ ಆಕಾರವನ್ನೆಲ್ಲಾ ಕರಗಿಸುತ್ತದೆ. ಅದಕ್ಕೆ ಜೀವ ಇದೆ ಎಂಬುದನ್ನೂ ನಂಬಲಾಗದ ಸ್ಥಿತಿಗೆ ಬಂದು ಬಿಡುತ್ತದೆ.

ಚಿಟ್ಟೆಯಾಗುವ ಪ್ರಕ್ರಿಯೆಯ ಪ್ರಮುಖ ಹಂತ. ಒಂದೊಂದೇ ಅಂಗಗಳು ಬೆಳೆಯಲಾರಂಭಿಸುತ್ತವೆ. ಈ ಹಂತದಲ್ಲಿ ಕಂಬಳಿ ಹುಳ ತುಂಬಾ ನೋವು ಅನುಭವಿಸಬೇಕಾಗುತ್ತದೆ. ಜತೆಗೆ ಹೊರ ಜಗತ್ತಿನೊಂದಿಗಿನ ಸಂಪರ್ಕವೇ ಕಡಿದು ಹೋಗಿರುತ್ತದೆ. ಆಹಾರ ಇಲ್ಲ, ಕೇವಲ ನೋವು ಮಾತ್ರ. ಇದನ್ನು ಹಲ್ಲು ಕಚ್ಚಿ ನುಂಗಿಕೊಂಡರೆ ಸುಂದರ ಚಿಟ್ಟೆಯಾಗಿ ರೂಪಾಂತರವಾಗಿತ್ತದೆ. ಹೆಮ್ಮೆಯಿಂದ ತಲೆ ಎತ್ತ ಹಾರತೊಡಗಿದರೆ ಅಸಹ್ಯ ಎಂದು ಹೀಗಳೆದವರು ಚೆಲುವಿಗೆ ಮನಸೋತು ಮೂಗಿನ ಮೇಲೆ ಬೆರಳಿಡುತ್ತಾರೆ.

ನಮಗೂ ಆದರ್ಶವಾಗಲಿ
ಇಲ್ಲಿ ನಾವು ಕಲಿಯಬೇಕಾದ ಪಾಠ ಬಹಳಷ್ಟಿದೆ. ಇಂದಿಗೆ ಅಂದುಕೊಂಡು ನಾಳೆ ಗುರಿ ಮುಟ್ಟುತ್ತೇವೆ ಎನ್ನಲು ಸಾಧ್ಯವಿಲ್ಲ. ಅದಕ್ಕೆ ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಜತೆಗೆ ಕಲ್ಲು-ಮುಳ್ಳಿನ ಹಾದಿ ಕ್ರಮಿಸಬೇಕಾಗುತ್ತದೆ. ಇದಕ್ಕೆಲ್ಲ ಸಿದ್ಧರಿದ್ದರಷ್ಟೇ ನಾವು ಇತಿಹಾಸವಾಗುತ್ತೇವೆ. ವಿದ್ಯಾರ್ಥಿ ಜೀವನದಲ್ಲಿ ಬರೆ ಮೋಜು-ಮಸ್ತಿ ಅಂದುಕೊಂಡರೆ ಭವಿಷ್ಯದಲ್ಲಿ ಕೊರಗಬೇಕಾಗುತ್ತದೆ. ಮನೋರಂಜನೆಯಷ್ಟೇ ಮಹತ್ವ ಕಲಿಕೆಗೂ ನೀಡಿದರೆ, ಪರಿಶ್ರಮಪಟ್ಟರೆ,ಗೆಲವು ಒಲಿಯುವುದರಲ್ಲಿ ಸಂದೇಹವಿಲ್ಲ.

-   ರಮೇಶ್‌ ಬಳ್ಳಮೂಲೆ

ಟಾಪ್ ನ್ಯೂಸ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.