ಕಮರೂರಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ


Team Udayavani, Sep 5, 2019, 11:07 AM IST

5-spectember-03

ಶಿವಮೊಗ್ಗ: ಸೊರಬ ತಾಲೂಕಿನ ಜಡೆ ಹೋಬಳಿಯ ಕಮರೂರಲ್ಲಿ ಪತ್ತೆಯಾಗಿರುವ ಶಾಸನಗಳು.

ಶಿವಮೊಗ್ಗ: ಸೊರಬ ತಾಲೂಕಿನ ಜಡೆ ಹೊಬಳಿಯ ಕಮರೂರು ಗ್ರಾಮದಲ್ಲಿ ವಿಜಯನಗರ ಕಾಲದ ಸ್ಮಾರಕ ಶಿಲ್ಪಗಳ ಶಾಸನಗಳು ಪತ್ತೆಯಾಗಿವೆ.

ಒಂದೇ ಸ್ಮಾರಕದಲ್ಲಿ ಒಂದು ಕಡೆ ಶಾಸನ ಶಿಲ್ಪ ಹಾಗೂ ಇನ್ನೊಂದು ಕಡೆ ಶಾಸನವಿರುವುದು ಕಂಡುಬರುತ್ತದೆ. ಇದು ಸಿಸ್ಟ್‌ ಶಿಲೆಯಿಂದ ಕೆತ್ತಲ್ಪಟ್ಟಿದ್ದು ಒಂದೂವರೆ ಅಡಿ ಅಗಲ ಮೂರೂವರೆ ಅಡಿ ಉದ್ದವಿದೆ. ಒಂದು ಕಡೆ ಮೂರು ಪಟ್ಟಿಕಗಳಿಂದ ಕೂಡಿದ್ದು ಮೊದಲನೇ ಹಾಗೂ ಎರಡನೇ ಪಟ್ಟಿಕೆಯಲ್ಲಿ ಏಳು ಸಾಲಿನ ಶಾಸನವನ್ನು ನೋಡಬಹುದಾಗಿದೆ. ಹಿಂಭಾಗದಲ್ಲಿ ಒಂಬತ್ತು ಸಾಲಿನ ಶಾಸನವನ್ನು ನೋಡಬಹುದಾಗಿದೆ.

ಮೊದಲ ಪಟ್ಟಿಕೆಯಲ್ಲಿ ರಾಜ ಅಥವಾ ರಾಜ ಪ್ರಮುಖನು ಅಥವಾ ಸ್ಥಳೀಯ ಅಧಿಕಾರಿಯು ಪಲ್ಲಕ್ಕಿಯಲ್ಲಿ ಕುಳಿತಿದ್ದು ಎರಡು ಜನ ಪಲ್ಲಕ್ಕಿಯನ್ನು ಹೊತ್ತುಕೊಂಡು ಹೋಗುತ್ತಿರುವುದು. ಒಬ್ಬನು ರಾಜ ಛತ್ರಿಯನ್ನು ಹಿಡಿದಿರುವುದು, ಮುಂಭಾಗದಲ್ಲಿ ಇನ್ನೊಬ್ಬನು ಕಮಂಡಲ ಹಿಡಿದು ಹೋಗುತ್ತಿರುವುದು ಕಂಡುಬರುತ್ತದೆ.

ಎರಡನೇ ಪಟ್ಟಿಕೆಯಲ್ಲಿ ಐದು ಜನ ಅಪ್ಸರೆಯವರು ತಮ್ಮ ತೋಳುಗಳ ಮೂಲಕ ಮರಣ ಹೊಂದಿದ ಪ್ರಮುಖನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಮೂರನೇ ಪಟ್ಟಿಕೆಯಲ್ಲಿ ಸ್ವರ್ಗಲೋಕದಲ್ಲಿ ಯತಿಯು ಶಿವಲಿಂಗ ಹಾಗೂ ನಂದಿಯನ್ನು ಪೂಜಿಸುತ್ತಿರುವುದು. ಮರಣ ಹೊಂದಿರುವನು ಅಂಜಲಿ ಮುದ್ರೆಯಲ್ಲಿ ಕುಳಿತಿರುವುದು ಮೇಲ್ಭಾಗದಲ್ಲಿ ಸೂರ್ಯಚಂದ್ರರನ್ನು ನೋಡಬಹುದು. ಅಂದರೆ ಸೂರ್ಯಚಂದ್ರರಿರುವರೆಗೆ ಈ ಶಾಸನ ಶಿಲ್ಪ ವ್ಯಕ್ತಿ ಶಾಶ್ವತ ಎಂದು ತಿಳಿಯಬಹುದಾಗಿದೆ.

ಈ ಶಾಸನವು ಗಣಪತಿ ಸ್ತುತಿಯಿಂದ ಆರಂಭಗೊಂಡಿದ್ದು ಕ್ರಿ.ಶ.1403 ರ ಅಂಗಿರಸ ಸಂವತ್ಸರದ ವೈಶಾಖ ಮಾಸ ಬಹುಳ8 ರ ಆರಂಭದಲ್ಲಿ ಹಾಕತಿಯಂಚಿ ನಾಯ್ಕರ ನಾಗೆಯ ಯಪ್ಪತ್ತ ನಾಯ್ಕರು ಸ್ವರ್ಗಸ್ಥರಾದಗ ಆತನ ಸಹೋದರ ಈ ಶಾಸನ ಶಿಲ್ಪವನ್ನು ಹಾಕಿಸಿರುವುದು ಕಂಡುಬರುತ್ತದೆ. ಇದು ವಿಜಯನಗರ ಅರಸ ಎರಡನೇ ಹರಿಹರನ ಕಾಲದ್ದಾಗಿದೆ.

ಹಿಂಭಾಗದ ಶಾಸನ: ಇದೇ ಶಾಸನ ಶಿಲ್ಪದ ಹಿಂಭಾಗದಲ್ಲಿ ಇನ್ನೊಂದು ಶಾಸನವು ಕಂಡುಬರುತ್ತದೆ. ಇದು ವಿಜಯನಗರ ಅರಸರ‌ ಕೊನೆಯ ಕಾಲದ್ದಾಗಿದೆ. ಶಾಸನದ ಮೇಲೆ ಶಂಖ, ಚಕ್ರ ಹಾಗೂ ನಾಮವನ್ನು ಕಾಣಬಹುದು. ಇದರ ಕೆಳಗೆ ಒಂಬತ್ತು ಸಾಲಿನ ಶಾಸನವನ್ನು ಕಾಣಬಹುದು.

ಈ ಶಾಸನದಲ್ಲಿ ಕಂಮರೂರ ಹನುಮಂತ ದೇವರಿಗೆ ಪೂಜಾ ವಿಧಿ- ವಿಧಾನಗಳನ್ನು ಸಂಪ್ರದಾಯಿಕವಾಗಿ ಮುಂದುವರಿಸಿಕೊಂಡು ಹೋಗಲು ಎರಡು ಹೊಲವನ್ನು ಈ ಹೊಲಗಳ ಭತ್ತ, ಅಡಕೆ ತೋಟ ಮೊದಲಾದವನ್ನು ಅನುಭವಿಸಿಕೊಂಡು ಹೋಗುವುದು. ಈ ಶಾಸನವನ್ನು ಯಾರಾದರೂ ಹಾಳು ಮಾಡಿದರೆ ಅವರ ಬಾಯಲ್ಲಿ ಹೆಂಡವನ್ನು ಹೊಯ್ಯುವುದು ಹಾಗೂ ಕತ್ತೆಯ ತುಣಿ (ಲಿಂಗ) ಯನ್ನು ಅವರ ಬಾಯಲ್ಲಿಡುವುದು ಎಂದು ಕೊನೆಯಲ್ಲಿ ಶಾಪಶಯವನ್ನು ಕೊಡಲಾಗಿದೆ.

ಎರಡು ಶಾಸನ ಶಿಲ್ಪಗಳ ಮಹತ್ವ: ಈ ಎರಡು ಶಾಸನಗಳು ವಿಜಯನಗರ ಕಾಲದವು ಆಗಿದ್ದು, ಇದರಲ್ಲಿ ಒಂದು ಶಾಸನ ರಾಜ ಪ್ರಮುಖ ಅಥವಾ ಸ್ಥಳಿಯ ಅಧಿಕಾರಿ ಸ್ವರ್ಗಸ್ಥನಾಗಿದ್ದರ ಬಗ್ಗೆ ತಿಳಿಸಿದರೆ ಇನ್ನೊಂದು ಶಾಸನವು ಹನುಮಂತ ದೇವರಿಗೆ ದಾನ ನೀಡಿರುವುದು ಕಂಡುಬರುತ್ತದೆ. ಇಲ್ಲಿ ಒಂದೇ ಕಲ್ಲಿನಲ್ಲಿ ಶೈವ ಹಾಗೂ ವೈಷ್ಣವ ಧರ್ಮದ ಶಾಸನವನ್ನು ಹಾಕಿಸಿರುವುದು ವಿಶೇಷವಾಗಿದೆ. ಎರಡು ಶಾಸನಗಳನ್ನು ಹಾಕಿಸಿರುವುದು ವಿಜಯನಗರ ಕಾಲದಲ್ಲಿ ಇವುಗಳ ಕಾಲದ ಅಂತರವು ಸುಮಾರು ಕಾಲವು 150 ವರ್ಷಗಳ ಅಂತರನ್ನು ಕಾಣಬಹುದು ಎಂದು ರಾಜ್ಯ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಆರ್‌. ಶೇಜೇಶ್ವರ ತಿಳಿಸಿದ್ದಾರೆ.

ಟಾಪ್ ನ್ಯೂಸ್

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Madikeri ಭಾಗದ ಅಪರಾಧ ಸುದ್ದಿಗಳು

Madikeri ಭಾಗದ ಅಪರಾಧ ಸುದ್ದಿಗಳು

ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Congress: ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.