ಬಿ.ಎಡ್‌. ಪದವೀಧರನಿಂದ ಸಾವಯವ ಕೃಷಿಯಲ್ಲಿ ಸಾಧನೆ


Team Udayavani, Sep 11, 2019, 5:49 AM IST

organic-farming

ಸಿದ್ದಾಪುರ: ರೈತನ ಮಗನೊಬ್ಬ ಬಿ. ಎಡ್‌. ಪದವಿ ಪಡೆದು ಶಿಕ್ಷಕ ವೃತ್ತಿಗೆ ಹೋಗದೆ, ಕೃಷಿಯಲ್ಲಿ ಎನಾದರೂ ಸಾಧನೆ ಮಾಡಬೇಕೆಂಬ ಹಂಬಲದೊಂದಿಗೆ ಸಾವಯವ ಕೃಷಿಯಲ್ಲಿ ತೊಡಗಿಕೊಂದು ಸಾಧನೆ ಮಾಡಲು ಹೊರಟಿದ್ದಾರೆ.

ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಹೊಳೆ ಶಂಕರನಾರಾಯಣದ ಸಮೀಪದ ಬೆಚ್ಚಳ್ಳಿಯ ಕೃಷಿ ಕುಟುಂಬದಲ್ಲಿ ಹುಟ್ಟಿರುವ ರಾಜೇಂದ್ರ ಪೂಜಾರಿ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎಡ್‌. ಪದವಿ ಮುಗಿಸಿದ್ದಾರೆ. ಅವರಿಗೆ ಸರಕಾರಿ ಉದ್ಯೋಗ ಅರಸಿ ಬಂದರೂ, ಅದನ್ನು ಬಿಟ್ಟು ಕೃಷಿಯಲ್ಲಿ ಮುಂದುವರಿದಿದ್ದಾರೆ. ಪ್ರತಿ ಬುಧವಾರ ಸಿದ್ದಾಪುರ ಸಂತೆ ಮತ್ತು ಪ್ರತಿ ಶನಿವಾರ ಕುಂದಾಪುರ ಸಂತೆಯಲ್ಲಿ ತಾವು ಬೆಳೆದ ತರಕಾರಿ ಹಾಗೂ ಇತರ ಬೆಳೆಗಳನ್ನು ಮಾರುತ್ತಾರೆ.

ರಾಜೇಂದ್ರ ಪೂಜಾರಿ ಅವರ ತಂದೆ ಭೋಜ ಪೂಜಾರಿ ಹಾಗೂ ಅವರ ಕುಟುಂಬ ತರಕಾರಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಯಾವುದೇ ರಸಾಯನಿಕ ಔಷಧಗಳನ್ನು ಬಳಸದೆ ಸಾವಯವ ಗೊಬ್ಬರಗಳ ಬಳಕೆ ಮಾಡಿ, ಈ ಮೂಲಕ ಉತ್ತಮವಾದ ಫಸಲು ಪಡೆಯುತ್ತಿದ್ದಾರೆ. ಅವರು ಬೆಚ್ಚಳ್ಳಿ ಮಾತ್ರವಲ್ಲದೆ ಕಾವ್ರಾಡಿ ಗ್ರಾಮದ ಮುಂಭಾರಿನಲ್ಲಿಯೂ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ತಂದೆಯ ಕೃಷಿ ಕೈಂಕರ್ಯಕ್ಕೆ ಮಗನೂ ಮನಸ್ಸು ಮಾಡಿದ್ದು ಇತರ ಶಿಕ್ಷಿತ ವರ್ಗಕ್ಕೂ ಮಾದರಿಯಾಗಿದ್ದಾರೆ.

ರಾಜೇಂದ್ರ ಪೂಜಾರಿ ಅವರ ಇಡೀ ಕುಟುಂಬ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಈ ಮೂಲಕ ಉತ್ತಮ ಆದಾಯವನ್ನೂ ಗಳಿಸುತ್ತಿದ್ದಾರೆ. ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಬಾಳೆ, ಚಿಕ್ಕು, ದುಡ್ಲೆಕಾಯಿ, ದಿವೆಲ್ಸಿನಕಾಯಿ, ಕಾಳು ಮೆಣಸು, ಕಬ್ಬು. ತರಕಾರಿ ಬೆಳೆಗಳಾದ ಸುವರ್ಣಗಡ್ಡೆ, ಮರಸನಗಡ್ಡೆ, ಅನಾನಸು, ಪಪ್ಪಾಯಿ, ನುಗ್ಗೆಕಾಯಿ, ಆಮ್ಟೆಕಾಯಿ ಇದರಲ್ಲಿ ಸಿಹಿ ಮತ್ತು ಹುಳಿ, ಮರಗೆಣಸು, ಕೆಸು, ಬೆಂಡೆ, ಪಡವಲಕಾಯಿ, ಅಲಸಂಡೆ, ಇಬ್ಬುಡ್ಲ, ಮುಳ್ಳುಸೌತೆ, ಹಾಗಲಕಾಯಿ, ಸಾಂಬರ್‌ಸೌತೆ, ಹರಿವೆೆ ಸೊಪ್ಪು ಇದರಲ್ಲಿ ಕೆಂಪು ಮತ್ತು ಬಿಳಿ, ಬಸಳೆ ಸೊಪ್ಪು, ಮೆಣಸು, ಬದನೆಕಾಯಿ, ಸಿಹಿ ಮತ್ತು ಬೂದು ಗುಂಬಾಳಕಾಯಿ, ತೊಂಡೆಕಾಯಿ, ಅವಡೆ, ಶುಂಠಿ ಇತ್ಯಾದಿಗಳನ್ನು ಇವರ ತೋಟದಲ್ಲಿ ನಾವು ಕಾಣಬಹುದಾಗಿದೆ.

– ಸತೀಶ್‌ ಆಚಾರ್‌ ಉಳ್ಳೂರ್‌

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.