ಅಟೋ ರಂಗದ ಕುಸಿತಕ್ಕೆ ಓಲಾ ಊಬರ್ ಗಳ ಕೊಡುಗೆ ಎಷ್ಟು – ಇಲ್ಲಿದೆ ಒಂದು ವಿಶ್ಲೇಷಣೆ

ಓಲಾ, ಊಬರ್‌ ಗಳಿಂದ ನಿಜಕ್ಕೂ ಕಾರು ಮಾರಾಟ ಕಡಿಮೆಯಾಗಿದೆಯೇ?

Team Udayavani, Sep 15, 2019, 7:34 PM IST

Ola-Uber-726

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕುಸಿಯುತ್ತಿರುವ ಆಟೋಮೊಬೈಲ್ ಕ್ಷೇತ್ರದ ಕುರಿತು ಹಲವು ವ್ಯಾಖ್ಯಾನಗಳು ಕೇಳಿಬಂದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಗರ ಪ್ರದೇಶಗಳಲ್ಲಿ ಓಲಾ, ಊಬರ್‌ ಗಳೇ ಓಡಾಡಲು ಹೆಚ್ಚು ಸೂಕ್ತ ಸೂಕ್ತ ಎಂಬ ಧೋರಣೆ ಜನರಲ್ಲಿ ಇರುವ ಕಾರಣ ಅವರು ವಾಹನ ಕೊಂಡುಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ವಿಶ್ಲೇಷಿಸಿದ್ದರು. ಆದರೆ ಇದಕ್ಕೆ ಪರ-ವಿರೋಧ ಹೇಳಿಕೆಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಖಾಸಗಿ ಕಾರು ಹೊಂದುವುದಕ್ಕಿಂತ ಈ ಕ್ಯಾಬ್ ಸೇವೆಗಳೇ ಅಗ್ಗವೇ? ಅಸಲಿ ವಿಚಾರವೇನು? ಇಲ್ಲಿದೆ ಮಾಹಿತಿ.

ಹೆಚ್ಚಿದ ಕ್ಯಾಬ್ ಸರ್ವೀಸ್
ಹಿಂದೆಂದಿಗಿಂತ ನಗರದಲ್ಲಿ ಟ್ಯಾಕ್ಸಿ-ಕ್ಯಾಬ್‌ ಗಳ ಸೇವೆ ಹೆಚ್ಚಾಗಿದೆ. ನಮಗೆ ಹೋಗಬೇಕಾದ ಸ್ಥಳಕ್ಕೆ ನಮ್ಮ ಕೈಯಲ್ಲಿರುವ ಮೊಬೈಲ್‌ ಮೂಲಕವೇ ಬುಕ್ಕಿಂಗ್ ಮಾಡುವ ವ್ಯವಸ್ಥೆ ಇದೆ. ಟ್ಯಾಕ್ಸಿ -ಕ್ಯಾಬ್‌ ಗಳು ಬೇಕಾದಷ್ಟು ಲಭ್ಯವಿರುವ ಕಾರಣ ಜನರು ಅವುಗಳಲ್ಲಿ ಹೆಚ್ಚು ಓಡಾಡಲು ಉತ್ಸುಕರಾಗಿದ್ದಾರೆ. ಪಾರ್ಕಿಂಗ್ ಕಿರಿಕಿರಿ, ದಂಡದ ಕಿರಿಕಿರಿ, ಸರ್ವೀಸ್, ನಿರ್ವಹಣೆ ಕಿರಿಕಿರಿ ಇಲ್ಲದ್ದರಿಂದ ಜನ ಕ್ಯಾಬ್‌ ಸೇವೆಗಳಿಗೆ ಜೈ ಅಂದಿರುವುದೂ ಹೌದು.

ಬೆಸ್ಟ್ ಯಾವುದು?
ಕಾರು ಖರೀದಿಸಿ, ಇನ್ಸೂರೆನ್ಸ್, ಎಮಿಷನ್ ಟೆಸ್ಟ್ ಅಂತ ಹಣ ಖರ್ಚು ಮಾಡಬೇಕು. ಇದರ ಉಸಾಬರಿ ಬೇಡ ಎಂದು ಕ್ಯಾಬ್‌ ನ ಮೊರೆ ಹೋಗುವವರೇ ಹೆಚ್ಚು. ಖಾಸಗಿ ಕಾರಿನ ನಿರ್ವಹಣೆಗಿಂತ ಕ್ಯಾಬ್ ಹೆಚ್ಚು ಅಗ್ಗ.

ಕಾರು ಉತ್ಪಾದಕರ ಮಾತು
ಮೆಟ್ರೋ ನಗರಗಳಲ್ಲಿ ಕ್ಯಾಬ್‌ ಸೇವೆಗಳಿಂದ ಯಾವ ತೊಂದರೆಯೂ ಎದುರಾಗಿಲ್ಲ. ಆದರೆ ಪರಿಸ್ಥಿತಿ ಹೀಗೇ ಮುಂದುವರಿದರೆ ಭವಿಷ್ಯದಲ್ಲಿ ದೊಡ್ಡ ಒಡೆತ ಬೀಳಲಿದೆ ಎಂದು ಮಹೀಂದ್ರ ಆ್ಯಂಡ್ ಮಹೀಂದ್ರದ ಮಾನ್ಯೇಜಿಂಗ್ ಡೈರೆಕ್ಟರ್ ಪವನ್ ಗೋನೆಕಾ ಅಭಿಪ್ರಾಯಪಡುತ್ತಾರೆ.

ಕ್ಯಾಬ್‌ ಗಳಿಗೆ ಹೊಸ ಕಾರು ಬಂದಿಲ್ಲ
ನಗರದಲ್ಲಿ ಸೇವೆ ನೀಡುತ್ತಿರುವ ಕ್ಯಾಬ್‌ ಗಳು ಹೆಚ್ಚಾಗಿದ್ದರೂ ಹೊಸದಾಗಿ ಖರೀದಿಸಿದ ಕಾರುಗಳು ಅವುಗಳಲ್ಲಿ ಕಂಡುಬರುತ್ತಿಲ್ಲ. ಹಳೆಯ ಕಾರುಗಳನ್ನೇ ಇಲ್ಲಿ ಬಳಸಲಾಗುತ್ತಿದೆ. ಸಮೀಕ್ಷೆಯ ಪ್ರಕಾರ ವೋಲಾ – ಊಬರ್ ಉದ್ಯಮಕ್ಕೂ ಪೆಟ್ಟು ಬಿದ್ದಿದೆ.

ಖರೀದಿ ಕಡಿಮೆ ಯಾಕೆ?
ಜನರು ತಮ್ಮ ವೈಯಕ್ತಿಕ ಕಾರಣಗಳಿಂದ ಹೊಸ ಕಾರು ಕೊಳ್ಳಲು ಮನಸ್ಸು ಮಾಡುತ್ತಿಲ್ಲ. ಇನ್ನು ಹೆಚ್ಚಿನವರು ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಮೊರೆ ಹೋಗುತ್ತಿದ್ದಾರೆ. ಉಳಿದವರು ಟ್ಯಾಕ್ಸಿ ವ್ಯವಸ್ಥೆಗಳನ್ನು ನೆಚ್ಚಿಕೊಂಡಿದ್ದಾರೆ.

ಯಾವುದು ಲಾಭ?

ಟ್ಯಾಕ್ಸಿ  ಕಂಪೆನಿಗಳಿಂದ 2.2 ಮಿಲಿಯನ್ ಉದ್ಯೋಗ ಸೃಷ್ಟಿ
ದೇಶದ ಆರ್ಥಿಕತೆಗೆ ಓಲಾ -ಉಬರ್‌ ಗಳಂತಹ ಕ್ಯಾಬ್ ಸೇವೆಗಳು ಸಹಾಯವಾಗುತ್ತದೆ ಎಂದು ಎನ್‌.ಎಸ್‌.ಎಸ್‌.ಒ. ವರದಿ ಹೇಳಿದೆ. ಇದು 2.2 ಮಿಲಿಯನ್ ಉದ್ಯೋಗ ಕೊರತೆಯನ್ನು ನೀಗಿಸಿದೆ. ಆಟೋ ಮೊಬೈಲ್ ವಲಯ ಕುಸಿತಕ್ಕೆ ಓಲಾ ಕಾರಣವಾಗುವುದಿಲ್ಲ ಎನ್ನಲಾಗಿದೆ.

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.