ಸ್ಟಾರ್‌ಗಿರಿ ತಪ್ಪಿಸೋಕೆ ಹಫ್ತಾ ಕೊಡೋ ಜನರಿದ್ದಾರೆ!

ಪೈರಸಿ ವಿರುದ್ಧ ಜಗ್ಗೇಶ್‌ ಕಿಡಿ

Team Udayavani, Sep 24, 2019, 3:04 AM IST

jaggesh

“ದೊಡ್ಡ ಸ್ಟಾರ್‌ಗಿರಿ ತಪ್ಪಿಸಲು ಇವನಿಗೆ ಹಫ್ತಾ ನೀಡಿದರೆ ಸಾಕು ಮಾಡಿ ಮುಗಿಸುತ್ತಾನೆ…’ ಇದು ನಟ ಜಗ್ಗೇಶ್‌ ಅವರ ಹೇಳಿಕೆ. ಅಷ್ಟಕ್ಕೂ ಜಗ್ಗೇಶ್‌ ಅವರು ಯಾವ ವಿಷಯಕ್ಕೆ, ಯಾರ ಕುರಿತಾಗಿ ಈ ಮಾತನ್ನು ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಜೋರಾಗಿ ಚರ್ಚೆಯಾಗುತ್ತಿರುವ ವಿಷಯವೆಂದರೆ ಅದು ಪೈರಸಿ. ಇದು ಹೊಸದೇನಲ್ಲ. ದುಡ್ಡಿನ ಆಸೆಗಾಗಿ ಕೆಲವರು ಚಿತ್ರಮಂದಿರದಲ್ಲಿ ಕುಳಿತು ಪೈರಸಿ ಮಾಡುತ್ತಿದ್ದರು. ಇದೀಗ ದೊಡ್ಡ ದಂಧೆಯಾಗಿಯೂ ಮಾರ್ಪಟ್ಟಿದೆ. ಇತ್ತೀಚೆಗೆ “ಪೈಲ್ವಾನ’ ಚಿತ್ರ ಪೈರಸಿಯಾಗಿರುವ ಬಗ್ಗೆಯೂ ಸಾಕಷ್ಟು ಆರೋಪಗಳು, ಪ್ರತಿಕ್ರಿಯೆಗಳು ಬಂದಿದ್ದವು. ಈಗ ಜಗ್ಗೇಶ್‌ ಕೂಡ ಅದಕ್ಕೆ ಧ್ವನಿಗೂಡಿಸಿ ಟ್ವೀಟ್‌ ಮಾಡಿದ್ದಾರೆ.

“ಉದ್ದೇಶಪೂರ್ವಕವಾಗಿ, ಇದೇ ಚಿತ್ರವನ್ನ, ಈ ನಟನ ಚಿತ್ರವನ್ನ ಪೈರಸಿ ಮಾಡುವುದು, ಆ ನಟನ ಸ್ಟಾರ್‌ಗಿರಿ ಬೀಳಿಸುವುದು ಎಲ್ಲವೂ ಬಿಸಿನೆಸ್‌ ರೀತಿ ನಡೆಯುತ್ತಿದೆ. ಒಬ್ಬ ಸಾಮಾನ್ಯ ತಮಿಳುನಾಡಿನ ಯುವಕ ಸಣ್ಣದ್ದಾಗಿ ಈ ಕೆಲಸ ಶುರುಮಾಡಿ, ಮಲೇಶಿಯಾಗೆ ಶಿಫ್ಟ್ ಆಗಿ ಇಂದು ವಿಶ್ವ ಸಿನಿಮಾರಂಗಕ್ಕೆ ತಲೆನೋವಾಗಿದ್ದಾನೆ! ದೊಡ್ಡ ಸ್ಟಾರ್‌ಗಿರಿ ತಪ್ಪಿಸಲು ಇವನಿಗೆ ಹಫ್ತಾ ನೀಡಿದರೆ ಸಾಕು ಮಾಡಿ ಮುಗಿಸುತ್ತಾನೆ. ಇವನನ್ನು ಸೇಡಿಗೆ ಬಳಸಿಕೊಂಡವರೆ, ಇವನಿಂದ ಸಂಕಷ್ಟಕ್ಕೆ ಈಡಾಗಿ ಇವನಿಗೆ ಲಂಚಕೊಟ್ಟು ತೊಂದರೆ ಕೊಡದಂತೆ ಕಾಲಿಗೆ ಬೀಳುತ್ತಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಅದೇನೆ ಇರಲಿ, ಪೈರಸಿ ಅನ್ನುವುದು ಹಿಂದಿನಿಂದಲೂ ಇದೆ. ಸಾಕಷ್ಟು ಇದರ ವಿರುದ್ಧ ಹೋರಾಟ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಈ ದಂಧೆ ನಡೆಸುವವರ ಬಗ್ಗೆ ಕಟ್ಟೆಚ್ಚರ ವಹಿಸಿ, ಯಾರೆಲ್ಲಾ ಇದರಲ್ಲಿದ್ದಾರೆ, ಎಲ್ಲೆಲ್ಲಿ ಪೈರಸಿ ಆಗುತ್ತದೆ ಎಂಬುದನ್ನು ಕಂಡು ಹಿಡಿಯಲೆಂದೇ ಒಂದು ತಂಡ ಕೂಡ ಚಿತ್ರರಂಗದಿಂದ ರಚನೆಯಾಗಿತ್ತು. ಆದರೆ, ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಆದರೂ, ಜಗ್ಗೇಶ್‌ ಅವರು ಮಾಡಿರುವ ಟ್ವೀಟ್‌ ಗಮನಿಸಿದರೆ, ಪೈರಸಿ ಎಂಬ ಭೂತ ಅಷ್ಟೊಂದು ಪವರ್‌ಫ‌ುಲ್‌ ಆಗಿದೆಯಾ ಎಂಬ ಪ್ರಶ್ನೆ ಕಾಡುವುದು ಸುಳ್ಳಲ್ಲ.

ಇದೊಂದು ದೊಡ್ಡ ಮಾಫಿಯಾ ಆಗಿದ್ದು, ಸಿನಿಮಾ ರಂಗದಲ್ಲಿರುವ ಜನರಿಗಷ್ಟೇ ಪೈರಸಿಯ ಪ್ರಭಾವ ಎಂಥದ್ದು, ಅದರಿಂದ ಎಷ್ಟೆಲ್ಲಾ ಸಮಸ್ಯೆಗಳುಂಟಾಗುತ್ತವೆ ಅನ್ನುವುದು ಗೊತ್ತು. ಸಾಮಾನ್ಯರಿಗೆ ಇದರ ಹಿಂದಿನ ರಹಸ್ಯ ಗೊತ್ತಿಲ್ಲ. ಈಗ ಜಗ್ಗೇಶ್‌ ಅವರು ಅಂಥದ್ದೊಂದು ರಹಸ್ಯ ಬಿಚ್ಚಿಟ್ಟಿದ್ದಾರೆ. ನಿಜವಾಗಿಯೂ ಇದರಿಂದ ಅದೆಷ್ಟೋ ಮಂದಿಗೆ ಕಂಟಕವಾಗುತ್ತಿದೆ. ಇನ್ನಾದರೂ, ಸಂಬಂಧಿಸಿದವರು ಈ ಪೈರಸಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಬೇಕಿದೆ. ಈಗ ಕನ್ನಡ ಚಿತ್ರಂಗದ ಬೆಳವಣಿಗೆ ಜೋರಾಗಿಯೇ ಇದೆ, ಇಂತಹ ಸಂದರ್ಭದಲ್ಲಿ ಪೈರಸಿ ಕಾಟ ಮತ್ತೆ ತಲೆಎತ್ತುತ್ತಿರುವುದು ಆತಂಕಕಾರಿ ವಿಷಯ.

ಟಾಪ್ ನ್ಯೂಸ್

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.