ಇನ್ನೂ ಆರಂಭಗೊಳ್ಳದ “ನೈಜ’ ಮೀನುಗಾರಿಕೆ


Team Udayavani, Oct 10, 2019, 5:24 AM IST

minugarike

ಗಂಗೊಳ್ಳಿ: ಮೀನುಗಾರಿಕೆ ಋತು ಆರಂಭವಾಗಿ ಸರಿ ಸುಮಾರು ಎರಡು ತಿಂಗಳು ಕಳೆದರೂ, ಇನ್ನೂ ಗಂಗೊಳ್ಳಿ ಸಹಿತ ಹೆಚ್ಚಿನ ಬಂದರುಗಳಲ್ಲಿ ನೈಜ ಮೀನುಗಾರಿಕೆಯೇ ಆರಂಭವಾಗಿಲ್ಲ. ಒಂದೊಂದು ಬೋಟು, ದೋಣಿಗಳಿಗೆ ಕನಿಷ್ಠ ಅರ್ಧದಷ್ಟು ಕೂಡ ಆದಾಯ ಬಂದಿಲ್ಲ.

ಕಳೆದ ಆಗಸ್ಟ್‌ನಿಂದ ಈ ಬಾರಿಯ ಮೀನುಗಾರಿಕೆಗೆ ಇದ್ದ ನಿಷೇಧ ತೆರವಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಸುಮಾರು 2 ತಿಂಗಳ ಕಾಲ ಮೀನುಗಾರಿಕೆ ನಡೆಯುತ್ತಿದ್ದರೂ ಬಂಗುಡೆ, ಬೈಗೆ, ಅಂಜಲ್‌ನಂತಹ ಉತ್ತಮ ಬೆಲೆ ಸಿಗುವಂತಹ ಮೀನುಗಳು ಇನ್ನೂ ಸಿಕ್ಕಿಯೇ ಇಲ್ಲ. ಈ ಮತ್ಸÂಕ್ಷಾಮದಿಂದಾಗಿ ಮೀನುಗಾರರು ತತ್ತರಿಸಿ ಹೋಗಿದ್ದಾರೆ.

ಗಂಗೊಳ್ಳಿ ಮಾತ್ರವಲ್ಲದೆ ಮಲ್ಪೆ, ಮರವಂತೆ, ಕೋಡಿ – ಕನ್ಯಾನ, ಕೊಡೇರಿ, ಅಳ್ವೆಗದ್ದೆ, ಹೆಜಮಾಡಿ ಸೇರಿದಂತೆ ಎಲ್ಲ ಬಂದರುಗಳಲ್ಲಿ ಬೋಟು, ದೋಣಿಗಳಿಗೆ ಮತ್ಸÕÂಕ್ಷಾಮ ತಲೆದೋರಿದೆ. ಪ್ರತಿ ನಿತ್ಯ ಮೀನುಗಾರಿಕೆಗೆ ತೆರಳಿದರೂ, ಮೀನು ಸಿಗದೇ ಬರಿಗೈಯಲ್ಲೇ ವಾಪಸಾಗುತ್ತಿದ್ದಾರೆ.

ಡೀಸೆಲ್‌, ಸೀಮೆ ಎಣ್ಣೆಯಷ್ಟು ಇಲ್ಲ
ಕೆಲವು ಬೋಟು, ದೋಣಿಗಳಿಗಂತೂ ಕೆಲವು ಬಾರಿ ಡೀಸೆಲ್‌, ಸೀಮೆಎಣ್ಣೆಗೆ ಭರಿಸಿದಷ್ಟು ಹಣವೂ ಕೂಡ ಮೀನುಗಾರಿಕೆಗೆ ತೆರಳಿದಾಗ ಸಿಗುತ್ತಿಲ್ಲ ಎನ್ನುವ ಅಳಲನ್ನು ಮೀನುಗಾರರು ವ್ಯಕ್ತಪಡಿಸುತ್ತಾರೆ. ಇನ್ನೂ ಕೆಲವರಿಗೆ ಈವರೆಗೆ ಒಟ್ಟು 5 ಲಕ್ಷ ರೂ., 10 ಲಕ್ಷ ರೂ. ಆದರೆ ಅದರಲ್ಲಿ ಅರ್ಧಕ್ಕಿಂತಲು ಹೆಚ್ಚು ಹಣವನ್ನು ಡೀಸೆಲ್‌, ಸೀಮೆಎಣ್ಣೆಗೆ ಕೊಡಬೇಕಾಗುತ್ತದೆ.

ಬಂಗುಡೆ ಸೀಸನ್‌
ಇದು ಬಂಗುಡೆ ಹೇರಳವಾಗಿ ಸಿಗುವ ಸೀಸನ್‌. ಕರಾವಳಿಯಿಂದ ಹೊರ ದೇಶಕ್ಕೆ ರಫ್ತಾಗುವ ಮೀನುಗಳಲ್ಲಿ ಬಂಗುಡೆ ಮೀನಿಗೆ ಭಾರೀ ಬೇಡಿಕೆಯಿದೆ. ಆದರೆ ಗಂಗೊಳ್ಳಿಯಲ್ಲಿ ಇನ್ನೂ ಕೂಡ ಬಂಗುಡೆ ಸಿಕ್ಕಿಯೇ ಇಲ್ಲ. ಋತು ಆರಂಭವಾದ ಮೊದಲ ಒಂದೆರಡು ದಿನ ಬಿಟ್ಟರೆ, ಆ ಬಳಿಕ ಈವರೆಗೆ ಬಂಗುಡೆ ಮೀನು ಸಿಕ್ಕಿಯೇ ಇಲ್ಲ. ಮಾತ್ರವಲ್ಲ ಗಂಗೊಳ್ಳಿಯಲ್ಲಿ ಹೆಚ್ಚಾಗಿ ಸಿಗುವ ಬೈಗೆ (ಬೂತಾಯಿ), ಅಂಜಲ್‌ ಕೂಡ ಸಿಗುತ್ತಿಲ್ಲ. ಇಲ್ಲಿ ಈಗ ಸಿಗುತ್ತಿರುವುದು ಟ್ಯೂನಾ (ಕೇದರ), ಕಾರ್ಗಿಲ್‌ ಮೀನುಗಳು ಮಾತ್ರ.

ಕಾರಣವೇನು?
ಮತ್ಸಕ್ಷಾಮಕ್ಕೆ ಪ್ರಮುಖವಾಗಿ ಮೀನಿನ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವುದು, ಹವಾಮಾನ ವೈಪರೀತ್ಯ, ಕಾರ್ಗಿಲ್‌, ಜೆಲ್ಲಿ ಫಿಶ್‌ಗಳ ಹಾವಳಿ ಕೂಡ ಕಾರಣವಾಗಿವೆ. ಬಂಗುಡೆ ಸಮುದ್ರದ ತಳದಲ್ಲಿದೆ. ಆದರೆ ಮೇಲೆ ಬರುತ್ತಿಲ್ಲ. ಇದರಿಂದ ಬೋಟು, ದೋಣಿಗಳ ಬಲೆಗೆ ಬೀಳುತ್ತಿಲ್ಲ. ಇನ್ನೂ ಕೆಲ ದಿನಗಳಲ್ಲಿಯಾದರೂ ಬರಬಹುದು ಎನ್ನುವ ಆಶಾಭಾವನೆಯಲ್ಲಿ ಮೀನುಗಾರರಿದ್ದಾರೆ.

ಆಶಾದಾಯಕ ಋತುವಲ್ಲ
ಮೀನುಗಾರಿಕೆ ಹೋಗಿದ್ದಕ್ಕಿಂತಲೂ ಮೀನು ಇಲ್ಲ ಅಂತ ದಡದಲ್ಲಿ ನಿಲ್ಲಿಸಿದ್ದೇ ಹೆಚ್ಚು. ಕಳೆದ ಕೆಲ ವರ್ಷಗಳಿಗಿಂತ ಈ ಬಾರಿಯೇ ಋತು ಇಷ್ಟೊಂದು ನಷ್ಟದಲ್ಲಿ ಆರಂಭವಾಗಿರುವುದು.
– ರಮೇಶ್‌ ಕುಂದರ್‌,
ಪರ್ಸಿನ್‌ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ, ಗಂಗೊಳ್ಳಿ

ಉತ್ತಮ ಮೀನುಗಳೇ ಸಿಕ್ಕಿಲ್ಲ
ಈ ಬಾರಿ ದೋಣಿಗಳಿಗೆ ಕನಿಷ್ಠ ಅರ್ಧದಷ್ಟು ಕೂಡ ಆದಾಯ ಬರಲಿಲ್ಲ. ಇದು ಉತ್ತಮ ಮೀನು ಸಿಗುವ ಸೀಸನ್‌ ಆಗಿದ್ದರೂ, ಇನ್ನೂ ಸರಿಯಾಗಿ ಉತ್ತಮ ಮೀನುಗಳೇ ಸಿಕ್ಕಿಲ್ಲ.
– ಮಂಜು ಬಿಲ್ಲವ, ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ, ಗಂಗೊಳ್ಳಿ

ಲೆಕ್ಕಾಚಾರ ಹೇಗಿದೆ?
ಈ ಎರಡು ತಿಂಗಳಲ್ಲಿ ಒಂದೊಂದು ಬೋಟುಗಳಿಗೆ ಕನಿಷ್ಠವೆಂದರೂ 25 ಲಕ್ಷ ರೂ. ಆದಾಯ ಬರಬೇಕಿತ್ತು. ಆದರೆ ಈವರೆಗೆ ಬೋಟುಗಳಿಗೆ ಸಾಮಾನ್ಯವಾಗಿ 3-4 ಲಕ್ಷ ರೂ. ಅಷ್ಟೇ ಆಗಿದೆ. ಹೆಚ್ಚೆಂದರೆ ಕೆಲವು ಬೋಟುಗಳಿಗೆ 8-10 ಲಕ್ಷ ರೂ. ಸಿಕ್ಕಿದೆ. ಅದರಲ್ಲಿ ಅವರು ಅರ್ಧಕ್ಕಿಂತಲೂ ಹೆಚ್ಚು ಡೀಸೆಲ್‌ಗೆ ವ್ಯಯಿಸಿದ್ದಾರೆ. ಇನ್ನೂ ದೋಣಿಗಳದ್ದು ಇದೇ ಸ್ಥಿತಿ. ನಾಡದೋಣಿ ಮೀನುಗಾರಿಕೆ ಆರಂಭವಾಗಿ 3 ತಿಂಗಳಾಗಿದ್ದು, ಈ ವರೆಗೆ ಕನಿಷ್ಠ ಒಂದು ದೋಣಿಗೆ 1 ಕೋ.ರೂ. ಆದರೂ ಆದಾಯ ಸಿಗಬೇಕಿತ್ತು. ಆದರೆ ಈವರೆಗೆ ಒಂದೊಂದು ದೋಣಿಗೆ ಹೆಚ್ಚೆಂದರೆ 25 ಲಕ್ಷ ರೂ. ಅಷ್ಟೇ ಆಗಿದೆ.

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Hiliyana: ಮಗನ ಕುಡಿತದ ಚಟದಿಂದ ನೊಂದು ತಂದೆ ಆತ್ಮಹತ್ಯೆ

Hiliyana: ಮಗನ ಕುಡಿತದ ಚಟದಿಂದ ನೊಂದು ತಂದೆ ಆತ್ಮಹತ್ಯೆ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.