ಮಹಾನದಿಯಾಗಲಿ ಜೀವನ…
Team Udayavani, Oct 21, 2019, 5:39 AM IST
ಬದುಕು ನದಿ ಇದ್ದಂತೆ ಎನ್ನುವ ಮಾತಿದೆ. ಅದಕ್ಕೆ ಇರಬೇಕು, ಮಾನವನಿಗೂ ನದಿಗೂ ಬಿಡಿಸಲಾಗದ ನಂಟು. ಗಮನಿಸಿ ನೋಡಿ ನಾಗರಿಕತೆ ಆರಂಭವಾಗಿದ್ದೇ ನದಿ ದಂಡೆಯಲ್ಲಿ. ಮಾತ್ರವಲ್ಲ ಪ್ರಪಂಚದ ನಗರಗಳು ಹುಟ್ಟಿಕೊಂಡಿರುವುದು ನದಿ ದಡದಲ್ಲೇ.
ಸದಾ ಚಲನಶೀಲ
ನದಿ ಎನ್ನುವುದು ನಿರಂತರ ಚಲನೆ ಉಳ್ಳದ್ದು. ಏನೇ ಅಡೆ ತಡೆ ಎದುರಾದರೂ ಅವುಗಳನ್ನೆಲ್ಲ ದಾಟಿ ತನ್ನ ಗಮ್ಯದತ್ತ ಸಾಗುತ್ತಿರುತ್ತದೆ. ತನ್ನ ದಾರಿಯಲ್ಲಿ ಬಂಡೆ ಇರಲಿ ಪರ್ವತವೇ ಎದುರಾಗಲಿ ಅದನ್ನು ಕೊರೆದು ಚಲಿಸುತ್ತಲೇ ಇರುತ್ತದೆ. ಇದು ನಮ್ಮ ಬದುಕಿಗೆ ಪಾಠವಾಗಬಲ್ಲದು. ಬದುಕಿನ ನಿರಂತರ ಪ್ರಯಾಣದಲ್ಲಿ ಎದುರಾಗುವ ಹತಾಶೆ, ನೋವು, ಅವಮಾನದಂತಹ ಅನೇಕ ತೊಡರು ನಮ್ಮತನವನ್ನು ಇಲ್ಲವಾಗಿಸಲು ಪ್ರಯತ್ನಿಸಬಹುದು. ಇವುಗಳಿಗೆ ತಲೆಬಾಗಿ ಶರಣಾದರೆ ಸೋತಂತೆ. ಗುರಿ ತಲುಪುವ ಹಾದಿಯ ಮಧ್ಯದಲ್ಲೇ ಕುಸಿದು ಬಿದ್ದಂತೆ. ನಿರಂತರ ಪರಿಶ್ರಮಪಟ್ಟರೆ ನದಿ ಬಂಡೆಯನ್ನು ಕೊರೆದು ಮುನ್ನುಗ್ಗುವಂತೆ ನಾವೂ ಗೆಲುವಿನ ಗುರಿ ತಲುಪಬಹುದು.
ವಿವಿಧ ರೂಪ
ನದಿಯದ್ದು ವೈವಿಧ್ಯ ತುಂಬಿದ ರೂಪ. ಆರಂಭದಲ್ಲಿ ಸಣ್ಣ ತೊರೆಯಾಗಿ ಹರಿದು ಕ್ರಮೇಣ ವೇಗ, ಶಕ್ತಿ ಪಡೆದುಕೊಳ್ಳುತ್ತದೆ. ಗುಡ್ಡ ಎದುರಾದರೆ ಜಲಪಾತವಾಗಿ ಧುಮ್ಮಿಕ್ಕುತ್ತದೆ. ಪ್ರಪಾತ ಇದ್ದರೆ ಗುಪ್ತಗಾಮಿನಿಯಾಗಿ ಹರಿಯುತ್ತದೆ. ಮಳೆಗಾಲದಲ್ಲಿ ರೊಚ್ಚಿಗೆದ್ದರೆ ಬೇಸಗೆಯಲ್ಲಿ ನಿಧಾನವಾಗಿ ಸಮುದ್ರದತ್ತ ಸಾಗುತ್ತದೆ. ಒಟ್ಟಿನಲ್ಲಿ ಚಲನೆಯಿಂದ ವಿಮುಖವಾಗುವುದೇ ಇಲ್ಲ.
ನಮ್ಮ ಬದುಕು ನದಿಯಂತಾಗಲಿ
ನದಿಯಂತೆ ನಾವು ಇತರರ ಬಾಳಿಗೆ ನೆರವಾಗಬೇಕು. ಮಳೆಗಾಲದಲ್ಲಿ ನದಿ ತುಂಬಿ ಹರಿಯುವಂತೆ ಕೆಲವೊಮ್ಮೆ ನಮ್ಮ ಬದುಕು ಸಂತೋಷ, ಸಮೃದ್ಧಿಯಿಂದ ಕೂಡಿರುತ್ತದೆ. ಆದರೆ ಕಾಲ ಸರಿದು ಬೇಸಗೆ ಬಂದಾಗ ನದಿ ಬತ್ತುವಂತೆ ನಮಗೂ ನೋವು ಎದುರಾಗಬಹುದು. ಹಾಗಂತ ಕುಗ್ಗಿದರೆ ಜೀವನವೇ ತಟಸ್ಥವಾಗಿ ಬಿಡುತ್ತದೆ. ಬಂಡೆಯಂತೆ ಕಷ್ಟ ಇದ್ದಕ್ಕಿದ್ದಂತೆ ಅಡ್ಡಬರಬಹುದು. ಅದನ್ನು ಒಮ್ಮೆಲೆ ಒಡೆಯಲು ಸಾಧ್ಯವಾಗದಿರಬಹುದು. ಇನ್ನಷ್ಟು ಪರಿಶ್ರಮ ಹಾಕಿ ನಿರಂತರ ಪ್ರಯತ್ನ ನಡೆಸಿದರೆ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಎನ್ನುವುದಕ್ಕೆ ಸಾಕಷ್ಟು ಉದಾಹರಣೆ ಕಣ್ಣ ಮುಂದೆಯೇ ಇದೆ.
-ರಮೇಶ್ ಬಳ್ಳಮೂಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ