ಏನಿದು ಪಿಂಕ್ ಬಾಲ್ ಟೆಸ್ಟ್‌ : ಭಾರತದಲ್ಲಿ ಬಳಸಲು ಭಯವೇಕೆ? 


ಕೀರ್ತನ್ ಶೆಟ್ಟಿ ಬೋಳ, Nov 11, 2019, 4:50 PM IST

pink-ball

ಕಳೆದ ಕೆಲ ದಿನಗಳಿಂದ ಭಾರತ ತಂಡದಲ್ಲಿ ಬದಲಾವಣೆಯ ಪರ್ವ ನಡೆಯುತ್ತಿದೆ. ಸೌರವ್ ಗಂಗೂಲಿ ಬಿಸಿಸಿಐ ಚುಕ್ಕಾಣಿ ಹಿಡಿದ ನಂತರ ಹಲವಷ್ಟು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಅದರಲ್ಲೊಂದು ಪಿಂಕ್ ಬಾಲ್ ಟೆಸ್ಟ್‌ .

ಸಾಮಾನ್ಯವಾಗಿ ಟೆಸ್ಟ್‌ ಕ್ರಿಕೆಟ್‌ ನಲ್ಲಿ ಕೆಂಪು ಬಣ್ಣದ ಬಾಲ್ ಗಳನ್ನು ಬಳಸಿದರೆ, ನಿಗದಿತ ಓವರ್ ಕ್ರಿಕೆಟ್ ನಲ್ಲಿ ಬಿಳಿ ಬಣ್ಣದ ಚೆಂಡನ್ನು ಬಳಸಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಎರಡು.  ಟೆಸ್ಟ್ ಕ್ರಿಕೆಟ್ ನಲ್ಲಿ ಆಟಗಾರರು ಬಿಳಿ ಬಣ್ಣದ ಸಮವಸ್ತ್ರ ಧರಿಸುವುದರಿಂದ ಬಿಳಿ ಬಣ್ಣದ ಚೆಂಡು ಬಳಸಿದರೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ ಎಂಬ ಕಾರಣಕ್ಕೆ ಹೀಗೆ ಕೆಂಪು ಬಣ್ಣದ ಚೆಂಡನ್ನು ಬಳಸಲಾಗುತ್ತದೆ. ಅದೇ ರೀತಿ ಏಕದಿನ ಪಂದ್ಯದಲ್ಲಿ ಆಟಗಾರರು ಬಣ್ಣದ ಸಮವಸ್ತ್ರ ಧರಿಸುವ ಕಾರಣಕ್ಕೆ ಬಿಳಿ ಚೆಂಡು ಬಳಸಲಾಗುತ್ತಿದೆ. ಕೆಂಪು ಬಣ್ಣದ ಚೆಂಡಿನ ಸೀಮ್ ಸುಮಾರು 80 ಓವರ್ ಹಾಳಾಗದೇ ಉಳಿಯಬಲ್ಲದು. ಆದರೆ ಬಿಳಿ ಚೆಂಡಿನ ಸೀಮ್ ಬೇಗನೆ ಹಾಳಾಗಿ ಹೋಗುತ್ತದೆ.

ಯಾಕೆ ಗುಲಾಬಿ ಬಣ್ಣದ ಚೆಂಡು ? 

ಕ್ರಿಕೆಟ್ ನಲ್ಲಿ ಗುಲಾಬಿ ಬಣ್ಣದ ಚೆಂಡಿನ ಬಳಕೆ ಇದೇ ಮೊದಲೇನಲ್ಲ. ಈ ಹಿಂದೆ ಇಂಗ್ಲೆಂಡ್, ಆಸ್ಟ್ರೇಲಿಯಾ, ದುಬೈನಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳು ನಡೆದಿವೆ. ಭಾರತದಲ್ಲೂ ಬೆರಳೆಣಿಕೆಯ ಪಿಂಕ್ ಬಾಲ್ ಮ್ಯಾಚ್ ನಡೆದಿವೆ ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಿಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಟೆಸ್ಟ್ ಕ್ರಿಕೆಟ್ ನ ಹಗಲು- ರಾತ್ರಿ ಪಂದ್ಯದಲ್ಲಿ ಮಾತ್ರ ಪಿಂಕ್ ಬಾಲ್ ಬಳಸಲಾಗುತ್ತದೆ. ಟೆಸ್ಟ್‌ ಪಂದ್ಯದಲ್ಲಿ ಬಳಸುವ ಕೆಂಪು ಬಣ್ಣದ ಚೆಂಡು ರಾತ್ರಿ ಸರಿಯಾಗಿ ಗೋಚರಿಸುವುದಿಲ್ಲ ಎಂಬ ಕಾರಣಕ್ಕೆ ಪಿಂಕ್ ಚೆಂಡಿನೊಂದಿಗೆ ಆಡಲಾಗುತ್ತದೆ.

ಮೊದಲು ಪಿಂಕ್ ಬಾಲ್ ಗಳಿಗೆ ಬಿಳಿ ಬಣ್ಣದ ನೂಲಿನಿಂದ ಹೊಲಿಯಲಾಗುತ್ತಿತ್ತು. (ಸೀಮ್) ಆದರೆ ಮೊದಲ ಕೆಲವು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ಬಿಳಿ ನೂಲು ಸರಿಯಾಗಿ ಕಾಣುವುದಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಐಸಿಸಿ ಬಿಳಿ ನೂಲಿನ ಬದಲು ಕಪ್ಪು ನೂಲಿನ ಮೊರೆ ಹೋಯಿತು. ( ಚೆಂಡಿನ್ನು ಸ್ವಿಂಗ್ ಮಾಡಲು ಸೀಮ್ ಅತೀ ಮುಖ್ಯ)

ಭಾರತದಲ್ಲಿ ಪಿಂಕ್ ಬಾಲ್ 
ಭಾರತದಲ್ಲಿ ಈ ಮೊದಲು ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಉಪಯೋಗಿಸಲಾಗಿತ್ತು. ಬೆಂಗಾಲ್ ಸೂಪರ್ ಲೀಗ್ ನಲ್ಲೂ ಬಳಸಲಾಗಿತ್ತು. ( ಸೌರವ್ ಗಂಗೂಲಿ ಬೆಂಗಾಲ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿದ್ದ ಸಮಯ ) ಸದ್ಯ ಭಾರತ ತಂಡದಲ್ಲಿರುವ ಚೇತೇಶ್ವರ್ ಪೂಜಾರ, ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ರಿಷಭ್ ಪಂತ್ ಮತ್ತು ಕುಲದೀಪ್ ಯಾದವ್ ಮಾತ್ರ ಪಿಂಕ್ ಬಾಲ್ ನಲ್ಲಿ ಆಡಿದ ಅನುಭವ ಹೊಂದಿದ್ದಾರೆ.

ಇದುವರೆಗೆ ಒಟ್ಟು 11 ಡೇ ನೈಟ್ ಪಂದ್ಯಗಳು ನಡೆದಿದ್ದು, ಅವೆಲ್ಲಾ ಆಯಾ ದೇಶದ ಬೇಸಿಗೆ ಕಾಲದಲ್ಲಿ ನಡೆದಿದೆ. ಆದರೆ ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ  ನಡೆಯುತ್ತಿರುವ ಈ  ಪಂದ್ಯ ಮೊದಲ ಚಳಿಗಾಲದ ಡೇ ನೈಟ್ ಪಂದ್ಯ ಎನ್ನುವುದು ವಿಶೇಷ.

ಇಬ್ಬನಿ ತಬ್ಬಿದರೆ?

ನೀವು ಹಗಲು ರಾತ್ರಿ ಏಕದಿನ ಪಂದ್ಯದಲ್ಲಿ ಗಮನಿಸಿರಬಹುದು. ಬೌಲರ್ ಗಳು ಆಗಾಗ ತಮ್ಮ ಕರವಸ್ತ್ರದಿಂದ ಚೆಂಡನ್ನು ಒರೆಸುತ್ತಿರುತ್ತಾರೆ. ಇದಕ್ಕೆ ಕಾರಣ ರಾತ್ರಿ ಪಾಳಿಯಲ್ಲಿ ಬೀಳುವ ಇಬ್ಬನಿ. ಇದು ಬೌಲರ್ ಗಳ ಪಾಲಿಗೆ ಶಾಪವಿದ್ದಂತೆ. ಇಬ್ಬನಿಯಿಂದ ಒದ್ದೆಯಾದ ಚೆಂಡನ್ನು ಬಿಗಿಯಾಗಿ ಹಿಡಿಯಲಾಗುವುದಿಲ್ಲ. ಸರಿಯಾಗಿ ಸ್ಪಿನ್‌ ಮಾಡಲು ಕಷ್ಟ . ಕೈಯಿಂದ ಜಾರುತ್ತದೆ. ಚೆಂಡು ಕೂಡ ಬೇಗನೆ ಹಾಳಾಗುತ್ತದೆ. ಚಳಿಗಾಲದಲ್ಲಿ ಇಬ್ಬನಿ ಜಾಸ್ತಿ ಬೀಳುವುದರಿಂದ ಹಗಲು ರಾತ್ರಿಯ ಪಂದ್ಯದಲ್ಲಿ ಚೆಂಡನ್ನು 80 ಓವರ್ ಸರಿಯಾದ ಆಕಾರದಲ್ಲಿ ಕಾಪಾಡುವುದು ಕೂಡಾ ಸವಾಲಿನ ಕೆಲಸವೇ ಸರಿ.

ಏನಿದು ಎಸ್ ಜಿ  ಬಾಲ್
ವಿಶ್ವದಾದ್ಯಂತ ಪ್ರಮುಖ ಮೂರು ಕ್ರಿಕೆಟ್ ಚೆಂಡು ತಯಾರಿಕಾ ಕಂಪನಿಗಳಿವೆ. ಡ್ಯೂಕ್, ಕುಕಬುರಾ ಮತ್ತು ಎಸ್ ಜಿ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್‌ ನಲ್ಲಿ ಡ್ಸೂಕ್ಸ್ ಬಾಲ್ ಗಳನ್ನು ಬಳಸಿದರೆ, ಆಸ್ಟ್ರೇಲಿಯಾ , ನ್ಯೂಜಿಲೆಂಡ್‌ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕುಕಬುರಾ ಚೆಂಡನ್ನು ಬಳಸಲಾಗುತ್ತದೆ. ಇನ್ನು ಭಾರತ ಮತ್ತು ಏಷ್ಯಾದ ದೇಶಗಳಲ್ಲಿ ಎಸ್ ಜಿ ಚೆಂಡಿನಲ್ಲಿ ನಿಗದಿತ ಓವರ್ ಮತ್ತು ಟೆಸ್ಟ್ ಕ್ರಿಕೆಟ್ ಆಡಲಾಗುತ್ತದೆ. ಆಯಾ ವಾತಾವರಣಕ್ಕೆ ಹೊಂದಿಕೊಳ್ಳುವ ಗುಣವಿರುವ ಚೆಂಡನ್ನೇ ಇಲ್ಲಿ ಬಳಸಲಾಗುತ್ತದೆ.

ಇದುವರೆಗೆ ಎಸ್ ಜಿ ಪಿಂಕ್ ಚೆಂಡಿನಲ್ಲಿ ಟೆಸ್ಟ್ ಪಂದ್ಯ ನಡೆದಿಲ್ಲ. ದುಲೀಪ್ ಟ್ರೋಫಿಯಲ್ಲೂ ಕುಕಬುರಾ ಚೆಂಡನ್ನೇ ಬಳಸಲಾಗಿತ್ತು. ಆದರೆ ಈ ಬಾರಿ ಎಸ್ ಜಿ ಚೆಂಡಿನಿಂದ ಆಡಲಾಗುತ್ತದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಎಸ್ ಜಿ ಕೆಂಪು ಚೆಂಡನ್ನು ಬಳಸುವುದರ ಕಾರಣಕ್ಕೆ  ಹಗಲು ರಾತ್ರಿ ಪಂದ್ಯಕ್ಕೂ ಎಸ್ ಜಿ ಚೆಂಡನ್ನೇ ಬಳಸಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.

ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಟೆಸ್ಟ್ ಕ್ರಿಕೆಟ್ ನ ಗತ ವೈಭವ ಮರಳಿ ತರುವ ಪ್ರಯತ್ನಗಳಲ್ಲಿ ಒಂದಾಗಿರುವ ಡೇ ನೈಟ್ ಟೆಸ್ಟ್ ಗೆ ಭಾರತವೂ ಸಜ್ಜಾಗಿದೆ. ಸದ್ಯ ಟೆಸ್ಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಹೇಗೆ ಈ ಹೊಸ ಮಾದರಿಗೆ ಹೊಂದಿಕೊಳ್ಳುತ್ತದೆ ಎಂದು ಕಾಲವೇ ಉತ್ತರಿಸಬೇಕು.

ಕೀರ್ತನ್ ಶೆಟ್ಟಿ ಬೋಳ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.