ಕುಮಟಳ್ಳಿ ವಿರುದ್ಧ ಸಿಡಿದೆದ್ದ ಬಿಜೆಪಿ ಕಾರ್ಯಕರ್ತರು


Team Udayavani, Nov 18, 2019, 3:07 AM IST

kumatalli

ಅಥಣಿ: ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಉಪಮುಖ್ಯ ಮಂತ್ರಿ ಲಕ್ಷ್ಮಣ ಸವದಿಗೆ ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಅವರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಈಗಿರುವ ಬಿಜೆಪಿ ಅಭ್ಯರ್ಥಿ ಕುಮಟಳ್ಳಿ ಅವರನ್ನು ಬೆಂಬಲಿಸದಿರಲು ನಿರ್ಧರಿಸಿದ್ದಾರೆ.

ಡಿಸಿಎಂ ಲಕ್ಷ್ಮಣ ಸವದಿ ಬೆಂಗಳೂರಿನಿಂದ ಅಥಣಿಗೆ ಬಂದಿಳಿಯುತ್ತಿದ್ದಂತೆ ಭಾನುವಾರ ಅವರ ನಿವಾಸ ಎದುರು ಜಮಾಯಿಸಿದ ಬೆಂಬಲಿಗರು ಟಿಕೆಟ್‌ಗಾಗಿ ಪಟ್ಟು ಹಿಡಿದು ಕುಳಿತರು. ಈ ವೇಳೆ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಕೂಡ ಸವದಿ ನಿವಾಸದೊಳಗೆ ಇದ್ದರು. ಕುಮಟಳ್ಳಿಗೆ ಟಿಕೆಟ್‌ ನೀಡಿದ್ದನ್ನು ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ ನಾವು ಬೆಂಬಲಿಸುವುದಿಲ್ಲ ಎಂದು ಬೆಂಬಲಿಗರು ಘೋಷಣೆ ಕೂಗಿದರು.

ಶೆಟ್ಟರ್‌ ಹಾಗೂ ಸವದಿ ಕಾರ್ಯಕರ್ತರ ಮನವೊಲಿಸಿಲು ಯತ್ನಿಸಿದರೂ ಪ್ರಯೋ ಜನವಾಗಲಿಲ್ಲ. ಅನೇಕ ವರ್ಷಗಳಿಂದ ಬಿಜೆಪಿಗೆ ಭದ್ರ ಬುನಾದಿ ಹಾಕಿರುವ ಕ್ಷೇತ್ರದಲ್ಲಿ ಸವದಿಗೆ ಟಿಕೆಟ್‌ ನೀಡದಿರುವುದು ಬೇಸರ ತಂದಿದೆ. ಬಿಜೆಪಿ ಬೆಳೆಸಿದ ಶ್ರೇಯಸ್ಸು ಸವದಿ ಅವರಿಗೆ ಸಲ್ಲುತ್ತದೆ. ಈಗ ಬಂದವರಿಗೆ ಟಿಕೆಟ್‌ ಕೊಟ್ಟಿದ್ದು ತಪ್ಪು. ಮೋದಿ ಹಾಗೂ ಯಡಿಯೂರಪ್ಪ ವಿರುದ್ಧ ಕೀಳಾಗಿ ಮಾತನಾಡಿರುವ ಮಹೇಶ ಕುಮಟಳ್ಳಿ ಈಗ ಬಿಜೆಪಿಗೆ ಬಂದು ಫೋಸ್‌ ಕೊಡುತ್ತಿದ್ದಾರೆ.

ಯಾವುದೇ ಕಾರಣಕ್ಕೂ ಮೂಲ ಬಿಜೆಪಿ ಕಾರ್ಯಕರ್ತರು ಹಾಗೂ ಸವದಿ ಬೆಂಬಲಿಗರು ಇದನ್ನು ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸವದಿ ಹಾಗೂ ಶೆಟ್ಟರ್‌ ಅವರನ್ನು ಹೊರಗೆ ಬಿಡದೆ ಮನೆ ಎದುರೇ ನಿಲ್ಲಿಸಿದರು. ಶೆಟ್ಟರ್‌ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಸವದಿ ಮನವೊಲಿಸಿ ಗೇಟ್‌ ಹೊರಗೆ ಶೆಟ್ಟರ್‌ ಅವರನ್ನು ಬಿಟ್ಟು ಕಾರಿನಲ್ಲಿ ಕಳುಹಿಸಿದರು.

ಸವದಿ ಅವರನ್ನು ಹೊರಗೆ ಬಿಡದಿದ್ದಾಗ ಕಾರ್ಯಕರ್ತರ ಕೈ ಮುಗಿದ ಸವದಿ, “ಬಿಡ್ರಪ್ಪಾ ಸಾಕು. ಪಕ್ಷದ ನಿರ್ಧಾರಕ್ಕೆ ತಲೆ ಬಾಗಬೇಕು’ ಎಂದು ಹೇಳಿ ಹೊರ ನಡೆದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ನಿವಾಸದ ಎದುರು ಲಕ್ಷ್ಮಣ ಸವದಿ ಪರ ಘೋಷಣೆ ಕೂಗಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ, ಶಾಸಕರಾದ ಪಿ.ರಾಜೀವ್‌, ದುರ್ಯೋಧನ ಐಹೊಳೆ ಸೇರಿ ಅನೇಕರು ಇದ್ದರು.

ಕುಮಟಳ್ಳಿಗೆ ಅಶ್ಲೀಲವಾಗಿ ನಿಂದನೆ: ಪ್ರತಿಭಟನೆ ವೇಳೆ ಕಿಡಿಗೇಡಿಗಳು ಕುಮಟಳ್ಳಿ ಅವರಿಗೆ ಅಶ್ಲೀಲವಾಗಿ ನಿಂದನೆ ಮಾಡಿದ್ದರಿಂದ ಕುಮಟಳ್ಳಿ ಕೆಲ ಸಮಯ ಮುಜಗರಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಯಿತು.

ಟಾಪ್ ನ್ಯೂಸ್

10-cow-trafficcking

Yelimale: ಅಕ್ರಮ ಗೋ ಸಾಗಾಟ ತಡೆದು ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ ಸ್ಥಳಿಯರು

9-exams

Exams: ಪರೀಕ್ಷೆ ಸವಾಲುಗಳು ಮಾತ್ರ ಬದುಕು ಅಲ್ಲ 

Ambati Rayudu’s Post Mocking RCB

IPL 2024: ಮತ್ತೆ ಆರ್ ಸಿಬಿ ಅಭಿಮಾನಿಗಳನ್ನು ಕೆಣಕಿದ ಅಂಬಾಟಿ ರಾಯುಡು

ʼಒಡೆಯʼ,ʼಕಾಟೇರʼದಂತೆ ಡಿಸೆಂಬರ್‌ನಲ್ಲೇ ʼಡೆವಿಲ್‌ʼ ರಿಲೀಸ್:‌ ಮತ್ತೆ ಮೋಡಿ ಮಾಡ್ತಾರ ಡಿಬಾಸ್?

ʼಒಡೆಯʼ,ʼಕಾಟೇರʼದಂತೆ ಡಿಸೆಂಬರ್‌ನಲ್ಲೇ ʼಡೆವಿಲ್‌ʼ ರಿಲೀಸ್:‌ ಮತ್ತೆ ಮೋಡಿ ಮಾಡ್ತಾರ ಡಿಬಾಸ್?

8-uv fusion

Life: ಬದುಕಿನ ಮುಂದಿನ ನಿಲ್ದಾಣ ಎಲ್ಲಿಗೊ…

Watch SHOLY Real Ending: ಶೋಲೆ ಸಿನಿಮಾದ ರಿಯಲ್‌ ಕ್ಲೈಮ್ಯಾಕ್ಸ್‌ ಬದಲಾಯಿಸಿದ್ದೇಕೆ?

Watch SHOLY Real Ending: ಶೋಲೆ ಸಿನಿಮಾದ ರಿಯಲ್‌ ಕ್ಲೈಮ್ಯಾಕ್ಸ್‌ ಬದಲಾಯಿಸಿದ್ದೇಕೆ?

ಜೋಶಿ

Bidar; ಈಗ ವಿಧಾನಸಭೆ ಚುನಾವಣೆ ನಡೆದರೆ ಕಾಂಗ್ರೆಸ್ ಗೆ 35 ಸ್ಥಾನವು ಸಿಗದು: ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜೋಶಿ

Bidar; ಈಗ ವಿಧಾನಸಭೆ ಚುನಾವಣೆ ನಡೆದರೆ ಕಾಂಗ್ರೆಸ್ ಗೆ 35 ಸ್ಥಾನವು ಸಿಗದು: ಜೋಶಿ

Yellapura: ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೆ ಮೃತ್ಯು

Yellapura: ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Tragedy: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ; ಓರ್ವ ಮೃತ್ಯು, ಚಾಲಕ ಪಾರು

Tragedy: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ; ಓರ್ವ ಮೃತ್ಯು, ಚಾಲಕ ಪಾರು

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ… ಗೃಹ ಸಚಿವರು ಅಸಹಾಯಕರಾಗಿದ್ದಾರೆ; ಕಾಗೇರಿ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ… ಗೃಹ ಸಚಿವರು ಅಸಹಾಯಕರಾಗಿದ್ದಾರೆ; ಕಾಗೇರಿ

ATM: 5000 ಬದಲು 4040… ಇಂಡಿಯಾ ಎಟಿಎಂ ನಲ್ಲಿ ಹಣ ಡ್ರಾ ಮಾಡಿದ ಶಿಕ್ಷಕಿಗೆ ಶಾಕ್ !

ಡ್ರಾ ಮಾಡಿದ್ದು 5000 ಬಂದಿದ್ದು 4040; ಇಂಡಿಯಾ ATM ನಲ್ಲಿ ಹಣ ಡ್ರಾ ಮಾಡಿದ ಶಿಕ್ಷಕಿಗೆ ಶಾಕ್

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

10-cow-trafficcking

Yelimale: ಅಕ್ರಮ ಗೋ ಸಾಗಾಟ ತಡೆದು ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ ಸ್ಥಳಿಯರು

9-exams

Exams: ಪರೀಕ್ಷೆ ಸವಾಲುಗಳು ಮಾತ್ರ ಬದುಕು ಅಲ್ಲ 

Ambati Rayudu’s Post Mocking RCB

IPL 2024: ಮತ್ತೆ ಆರ್ ಸಿಬಿ ಅಭಿಮಾನಿಗಳನ್ನು ಕೆಣಕಿದ ಅಂಬಾಟಿ ರಾಯುಡು

ʼಒಡೆಯʼ,ʼಕಾಟೇರʼದಂತೆ ಡಿಸೆಂಬರ್‌ನಲ್ಲೇ ʼಡೆವಿಲ್‌ʼ ರಿಲೀಸ್:‌ ಮತ್ತೆ ಮೋಡಿ ಮಾಡ್ತಾರ ಡಿಬಾಸ್?

ʼಒಡೆಯʼ,ʼಕಾಟೇರʼದಂತೆ ಡಿಸೆಂಬರ್‌ನಲ್ಲೇ ʼಡೆವಿಲ್‌ʼ ರಿಲೀಸ್:‌ ಮತ್ತೆ ಮೋಡಿ ಮಾಡ್ತಾರ ಡಿಬಾಸ್?

Dhruva Sarja ಫ್ಯಾನ್ಸ್‌ಗೆ ಡಬಲ್‌ ಧಮಾಕಾ; ಅಪ್‌ಡೇಟ್‌ ಕ್ಯೂನಲ್ಲಿ ಮಾರ್ಟಿನ್‌, ಕೆಡಿ

Dhruva Sarja ಫ್ಯಾನ್ಸ್‌ಗೆ ಡಬಲ್‌ ಧಮಾಕಾ; ಅಪ್‌ಡೇಟ್‌ ಕ್ಯೂನಲ್ಲಿ ಮಾರ್ಟಿನ್‌, ಕೆಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.