ಗುಜರಿ ವ್ಯವಹಾರಕ್ಕೂ ಆರ್ಥಿಕ ಕುಸಿತದ ಬಿಸಿ!

ಎಲ್ಲ ಸಾಮಗ್ರಿಗಳ ಬೆಲೆ ಅರ್ಧಕ್ಕರ್ಧ ಇಳಿಕೆ; ವ್ಯವಹಾರ ಸಂಕಷ್ಟದಲ್ಲಿ

Team Udayavani, Nov 23, 2019, 4:06 AM IST

tt-20

ಮಂಗಳೂರು: ಆರ್ಥಿಕ ಕುಸಿತದ ಪರಿಣಾಮ ಗುಜರಿ ಸಾಮಗ್ರಿಗಳ ಮೇಲೂ ಉಂಟಾಗಿದ್ದು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಲ್ಕೈದು ತಿಂಗಳಿನಿಂದ ಎಲ್ಲ ಗುಜರಿ ಸಾಮಗ್ರಿಗಳ ಬೆಲೆ ಅರ್ಧಕ್ಕರ್ಧ ಇಳಿಕೆಯಾಗಿದ್ದು, ವ್ಯಾಪಾರ ಬಹುತೇಕ ನೆಲಕಚ್ಚಿದೆ. ಇದನ್ನು ವೃತ್ತಿಯಾಗಿಸಿಕೊಂಡ ಸುಮಾರು 50 ಸಹಸ್ರ ಜನರ ಬದುಕು ಹೈರಾಣಾಗುವ ಹಂತದಲ್ಲಿದೆ. ಗುಜರಿ ವ್ಯಾಪಾರವು ಸಂಗ್ರಾಹಕರಿಂದ ಹಿಡಿದು ಸಣ್ಣ, ಮಧ್ಯಮ, ದೊಡ್ಡ ವ್ಯಾಪಾರ- ಹೀಗೆ ಹಲವು ಹಂತಗಳಲ್ಲಿ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದೆ. ಮಂಗಳೂರಿನಲ್ಲಿ 150ಕ್ಕೂ ಅಧಿಕ ಗುಜರಿ ಅಂಗಡಿಗಳಿವೆ.

ಗುಜರಿ ಎಲ್ಲಿಗೆ ಹೋಗುತ್ತದೆ?
ಮಂಗಳೂರು ಸಹಿತ ದ.ಕ. ಜಿಲ್ಲೆಯಲ್ಲಿ ಸಂಗ್ರಹವಾಗುವ ಗುಜರಿ ಸಾಮಗ್ರಿಗಳ ಪೈಕಿ ಕಾರ್ಟನ್‌ ಬಾಕ್ಸ್‌ (ರಟ್ಟಿನ ಪೆಟ್ಟಿಗೆ) ಮತ್ತು ಪೇಪರ್‌ ಮಂಗಳೂರಿನ ತಲಪಾಡಿ ಮತ್ತು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ಹೋಗಿ ಸಂಸ್ಕರಣೆ ಆಗುತ್ತದೆ. ಹಳೆ ಕಬ್ಬಿಣದ ಸಾಮಗ್ರಿಗಳು ಗೋವಾ ಮತ್ತು ಮುಂಬಯಿಗೆ ಹೋದರೆ, ತಾಮ್ರ ಮತ್ತು ಹಿತ್ತಾಳೆ ಹುಬ್ಬಳ್ಳಿಗೆ ಸಾಗಾಟವಾಗುತ್ತದೆ. ಅಲ್ಲಿನ ಸಂಸ್ಕರಣ ಘಟಕಗಳಲ್ಲಿ ಸಂಸ್ಕರಣೆಯಾಗಿ ಮರುಬಳಕೆಯಾಗುತ್ತದೆ.

ಬೆಲೆ ಇಳಿಕೆಗೆ ಕಾರಣ ಏನು?
ಜಾಗತಿಕ ಮತ್ತು ದೇಶೀಯ ಮಟ್ಟದಲ್ಲಿ ಆಗಿರುವ ಆರ್ಥಿಕ ಹಿಂಜರಿತ ಗುಜರಿ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ. ಪ್ಲಾಸ್ಟಿಕ್‌ ನಿಷೇಧ ಆಗಿರುವುದರಿಂದ ಹಳೆ ಪೇಪರ್‌, ರಟ್ಟಿನ ಬಾಕ್ಸ್‌ ಮತ್ತಿತರ ಸಾಮಗ್ರಿಗಳ ದರ ಏರಬೇಕಿತ್ತು. ಆದರೆ ಹಾಗಾಗಿಲ್ಲ. ಗುಜರಿ ಸಾಮಗ್ರಿಗಳ ಸಂಸ್ಕರಣೆ ಮತ್ತು ಮರುಬಳಕೆ ಕಡಿಮೆಯಾಗಿದೆಯೇ ಅಥವಾ ಬೇರೆ ಕಾರಣ ಇದೆಯೇ ಎನ್ನುವುದು ತಿಳಿದು ಬಂದಿಲ್ಲ. ಜಿಎಸ್‌ಟಿ ಮತ್ತು ಸರಕಾರದ ವಿವಿಧ ನಿಯಮಗಳು, ದೊಡ್ಡ ಉದ್ಯಮಪತಿಗಳ ಪ್ರವೇಶ ಇತ್ಯಾದಿ ಕಾರಣಗಳನ್ನು ಗುಜರಿ ವ್ಯಾಪಾರಿಗಳು ನೀಡುತ್ತಾರೆ. ಆದರೆ ನೈಜ ಕಾರಣವೇನೆಂಬುದು ಮಾತ್ರ ಗೊತ್ತಾಗುತ್ತಿಲ್ಲ.

ನಗದು ಸಮಸ್ಯೆ?
ಈಗ ಜಿಎಸ್‌ಟಿ ಗುಜರಿ ವ್ಯಾಪಾರಕ್ಕೂ ಅನ್ವಯವಾ ಗುತ್ತಿದೆ. ಅದು ಜಾರಿಗೆ ಬಂದ ಬಳಿಕ ನಮಗೆ ನಗದು ಸಿಗುತ್ತಿಲ್ಲ. 2 ಸಾವಿರದಷ್ಟು ಕನಿಷ್ಠ ಮೊತ್ತವಾದರೂ ಬ್ಯಾಂಕ್‌ ಮೂಲಕವೇ ಬರಬೇಕು. ಚೆಕ್‌ ಆಗಿದ್ದರೆ ನಗದೀಕರಣಕ್ಕೆ 2-3 ದಿನ ಕಾಯಬೇಕು. ಚೆಕ್‌ ಪ್ರಸ್ತುತ ಪಡಿಸುವಾಗ ಆಧಾರ್‌ ಕಾರ್ಡ್‌ ನೀಡಬೇಕು. ಇದೆಲ್ಲವೂ ನಮಗೆ ಸಮಸ್ಯೆ ಎಂದು ಗುಜರಿ ವ್ಯಾಪಾರಿ ಖಲೀಲ್‌ ಮಾಲೆಮಾರ್‌ ತಿಳಿಸಿದ್ದಾರೆ.

ಗುಜರಿ ಉದ್ಯಮವು ಇತ್ತೀಚಿನ ದಿನಗಳಲ್ಲಿ ಒಂದೆಡೆ ಬೆಲೆ ಇಳಿಕೆಯಿಂದ ತತ್ತರಿಸುತ್ತಿದ್ದರೆ, ಇನ್ನೊಂದೆಡೆ ಪೈಪೋಟಿಯಿಂದ ನಷ್ಟ ಅನುಭವಿಸುತ್ತಿದೆ. ದೊಡ್ಡ ಉದ್ಯಮ ಸಂಸ್ಥೆಗಳ ಪ್ರವೇಶ, ಸರಕಾರದ ಹಲವು ನಿಯಮಗಳನ್ನು ಹೇರುತ್ತಿರುವುದು ಗುಜರಿ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಜತೆಗೆ ವಿಪರೀತ ದರ ಇಳಿಕೆಯೂ ಆಗಿದೆ. ಇದರಿಂದಾಗಿ ಗುಜರಿಯವರ ಬದುಕು ಕೂಡ ಗುಜರಿಯಂತಾಗಿದೆ.
-ಖಲೀಲ್‌ ಮಾಲೆಮಾರ್‌, ಗುಜರಿ ವ್ಯಾಪಾರಿ

ಗುಜರಿ ಸಾಮಗ್ರಿಗಳಿಗೆ 5 ತಿಂಗಳ ಹಿಂದೆ ಇದ್ದ ಮತ್ತು ಈಗಿನ ದರಗಳನ್ನು ಹೋಲಿಸಿದಾಗ ಕುಸಿತದ ತೀವ್ರತೆ ಸ್ಪಷ್ಟವಾಗುತ್ತದೆ.

– ಹಿಲರಿ ಕ್ರಾಸ್ತಾ

ಟಾಪ್ ನ್ಯೂಸ್

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.