ಬಲಾಡ್ಯ ಭಾರತದೆದುರು ಪಾಕ್‌ ಜೂನಿಯರ್


Team Udayavani, Nov 29, 2019, 12:01 AM IST

pak-juniors

ನುರ್‌ ಸುಲ್ತಾನ್‌ (ಕಜಾಕ್‌ಸ್ಥಾನ್‌): ನಾಟಕೀಯ ಬೆಳವಣಿಗೆಗಳ ಬಳಿಕ ಕೊನೆಗೂ ಭಾರತ-ಪಾಕಿಸ್ಥಾನ ನಡುವಿನ ಡೇವಿಸ್‌ ಕಪ್‌ ಟೆನಿಸ್‌ ಮುಖಾಮುಖೀಗೆ ಕಾಲ ಕೂಡಿ ಬಂದಿದೆ. ಶುಕ್ರವಾರ ಹಾಗೂ ಶನಿವಾರ ತಟಸ್ಥ ತಾಣವಾದ ಕಜಾಕ್‌ಸ್ಥಾನದ ನುರ್‌ ಸುಲ್ತಾನ್‌ನಲ್ಲಿ ಈ ಸೆಣಸಾಟ ಸಾಗಲಿದೆ.
ಅನುಭವದ ಮಾನದಂಡದ ಪ್ರಕಾರ ಭಾರತ ಅತ್ಯಂತ ಬಲಿಷ್ಠವಾದರೆ, ಪಾಕಿಸ್ಥಾನ ಜೂನಿಯರ್ ಆಟಗಾರರನ್ನೇ ಹೆಚ್ಚು ಅವಲಂಬಿಸಬೇಕಿದೆ. ಇಲ್ಲಿ ಗೆದ್ದವರು ಮುಂದಿನ ವರ್ಷ ಕ್ರೊವೇಶಿಯಾ ವಿರುದ್ಧ ವರ್ಲ್ಡ್ ಗ್ರೂಪ್‌ ಕ್ವಾಲಿಫೈಯರ್‌ ಸ್ಪರ್ಧೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಮೂಲ ವೇಳಾಪಟ್ಟಿ ಪ್ರಕಾರ ಭಾರತ-ಪಾಕಿಸ್ಥಾನ ನಡುವಿನ ಈ ಪಂದ್ಯಾವಳಿ ಸೆಪ್ಟಂಬರ್‌ನಲ್ಲೇ ಇಸ್ಲಾಮಾ ಬಾದ್‌ನಲ್ಲಿ ನಡೆಯಬೇಕಿತ್ತು. ಆದರೆ ಭದ್ರತೆ ಹಾಗೂ ಹದಗೆಟ್ಟ ರಾಜಕೀಯ ಕಾರಣಗಳಿಂದ ಭಾರತ ಇಲ್ಲಿ ಆಡಲು ನಿರಾಕರಿಸಿತು. ಅಂತಿಮವಾಗಿ ಪಾಕ್‌ ವಿರೋಧದ ನಡುವೆಯೂ ಇದನ್ನು ತಟಸ್ಥ ತಾಣದಲ್ಲಿ ಆಡಲು ನಿರ್ಧರಿಸಲಾಯಿತು.

ಭಾರತ ಸಂತುಲಿತ ತಂಡ
ಭಾರತ ಅನುಭವಿ ಹಾಗೂ ಯುವ ಆಟಗಾರರ ನ್ನೊಳಗೊಂಡ ಸಂತುಲಿತ ತಂಡ. ಹಿರಿಯಣ್ಣ ಲಿಯಾಂಡರ್‌ ಪೇಸ್‌ ಜತೆಗೆ ಸುಮಿತ್‌ ನಾಗಲ್‌, ರಾಮ್‌ಕುಮಾರ್‌ ರಾಮನಾಥನ್‌ ಅವರಂಥ ಪ್ರತಿಭಾನ್ವಿ ತರಿದ್ದಾರೆ. ಆದರೆ ಪಾಕಿಸ್ಥಾನ ಅಗ್ರ ಆಟಗಾರರಾದ ಐಸಮ್‌ ಉಲ್‌ ಹಕ್‌ ಖುರೇಶಿ, ಅಖೀಲ್‌ ಖಾನ್‌ ಗೈರಲ್ಲಿ ಕಣಕ್ಕಿಳಿಯುತ್ತಿದೆ. ಪಂದ್ಯಾವಳಿಯನ್ನು ಸ್ಥಳಾಂತರಿಸಿದ ಕಾರಣ ಇವರೆಲ್ಲ ಕೂಟದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇಲ್ಲವಾದರೆ ಕನಿಷ್ಠ ಡಬಲ್ಸ್‌ ಮುಖಾಮುಖೀಯಾದರೂ ಫೈಟ್‌ ಕಾಣುತ್ತಿತ್ತೋ ಏನೋ!

ಭಾರತದ ಆಟಗಾರರಿಗೆ ಧಾರಾಳ ಗ್ರ್ಯಾನ್‌ಸ್ಲಾಮ್‌ ಅನುಭವವಿದ್ದರೆ, ಪಾಕ್‌ ಟೆನಿಸಿಗರು ಇನ್ನೂ ಐಟಿಎಫ್ ಫ್ಯೂಚರ್ ಹಂತದಲ್ಲೇ ಇದ್ದಾರೆ. ಹೀಗಾಗಿ ಪಾಕ್‌ ಆಟಗಾರರ ಪಾಲಿಗೆ ಈ ಸ್ಪರ್ಧೆ ಕಲಿಕೆಗೆ ಮಾತ್ರ ಅಂದರೂ ತಪ್ಪಿಲ್ಲ.

ಡಬಲ್ಸ್‌ನಲ್ಲಿ ಲಿಯಾಂಡರ್‌ ಅವರೊಂದಿಗೆ ಜೀವನ್‌ ನೆಡುಂಚೆಜಿಯನ್‌ ಕಣಕ್ಕಿಳಿಯಲಿದ್ದಾರೆ. ಚೆನ್ನೈನ ಈ ಎಡಗೈ ಟೆನಿಸಿಗ ಡೇವಿಸ್‌ ಕಪ್‌ ಆಡುತ್ತಿರುವ ಭಾರತದ 75ನೇ ಆಟಗಾರನಾಗಲಿದ್ದಾರೆ.

ಜಯದ ನಿರೀಕ್ಷೆಯಲ್ಲಿ ಸುಮಿತ್‌
ಸಿಂಗಲ್ಸ್‌ನಲ್ಲಿ ಸೆಣಸಲಿರುವ ಸುಮಿತ್‌ ನಾಗಲ್‌ ಮೊದಲ ಡೇವಿಸ್‌ ಕಪ್‌ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೂ ಮುನ್ನ ಅವರು ಸ್ಪೇನ್‌ (2016) ಮತ್ತು ಚೀನ (2018) ಎದುರಿನ ಸ್ಪರ್ಧೆಯಲ್ಲಿ ಸೋಲನುಭವಿಸಿದ್ದರು. ನಾಗಲ್‌ ಶುಕ್ರವಾರದ ದ್ವಿತೀಯ ಸಿಂಗಲ್ಸ್‌ನಲ್ಲಿ ಹುಜೈಫ‌ ಅಬ್ದುಲ್‌ ರೆಹಮಾನ್‌ ಅವರನ್ನು ಎದುರಿಸುವರು.

ಮತ್ತೋರ್ವ ಸಿಂಗಲ್ಸ್‌ ಆಟಗಾರ ರಾಮಕುಮಾರ್‌ ರಾಮನಾಥನ್‌ ಡೇವಿಸ್‌ ಕಪ್‌ನಲ್ಲಿ 7-7 ದಾಖಲೆ ಹೊಂದಿದ್ದಾರೆ. ಶುಕ್ರವಾರದ ಮೊದಲ ಪಂದ್ಯದಲ್ಲಿ ಇವರು ಮೊಹಮ್ಮದ್‌ ಶೋಯಿಬ್‌ ವಿರುದ್ಧ ಆಡಲಿದ್ದಾರೆ. 17ರ ಹರೆಯದ ಶೋಯಿಬ್‌ 2019ರ ಋತುವಿನಲ್ಲಿ ಒಂದೂ ಪಂದ್ಯವನ್ನಾಡಿಲ್ಲ.

ಪಾಕ್‌ ಯುವ ಆಟಗಾರರ ತಂಡ. ಅವರು ಬಲಿಷ್ಠ ಭಾರತದ ವಿರುದ್ಧ ಆಡಲಿದ್ದಾರೆ. ಹೀಗಾಗಿ ಕಳೆದುಕೊಳ್ಳುವಂಥದ್ದೇನೂ ಇಲ್ಲ. ಕೊನೆಯ ಕ್ಷಣದ ತನಕ ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಪಾಕಿಸ್ಥಾನವನ್ನು ವೈಟ್‌ವಾಶ್‌ ಮಾಡುವುದೇ ನಮ್ಮ ಗುರಿ.
– ರೋಹಿತ್‌ ರಾಜ್‌ಪಾಲ್‌, ಭಾರತ ತಂಡದ ನಾಯಕ

ಟಾಪ್ ನ್ಯೂಸ್

Arecanut ಚಾಲಿ ಅಡಿಕೆ ಧಾರಣೆ ಏರಿಕೆ; 500 ರೂ. ಹೊಸ್ತಿಲಿನಲ್ಲಿ ಸಿಂಗಲ್‌, ಡಬ್ಬಲ್‌ ಚೋಲ್‌

Arecanut ಚಾಲಿ ಅಡಿಕೆ ಧಾರಣೆ ಏರಿಕೆ; 500 ರೂ. ಹೊಸ್ತಿಲಿನಲ್ಲಿ ಸಿಂಗಲ್‌, ಡಬ್ಬಲ್‌ ಚೋಲ್‌

ರಸ್ತೆ ಬದಿ ತ್ಯಾಜ್ಯ ರಾಶಿ ಬೀಳದಂತೆ ಕ್ರಮ ಕೈಗೊಳ್ಳಿ : ಪಿಡಿಒಗಳಿಗೆ ಜಿ.ಪಂ. ಸಿಇಒ ಸೂಚನೆ

ರಸ್ತೆ ಬದಿ ತ್ಯಾಜ್ಯ ರಾಶಿ ಬೀಳದಂತೆ ಕ್ರಮ ಕೈಗೊಳ್ಳಿ : ಪಿಡಿಒಗಳಿಗೆ ಜಿ.ಪಂ. ಸಿಇಒ ಸೂಚನೆ

4 ದಿನ ಎಲ್ಲೋ ಅಲರ್ಟ್‌; ಸಿಡಿಲಿನಿಂದ ಕೂಡಿದ ಮಳೆ ಸಾಧ್ಯತೆ

Rain 4 ದಿನ ಎಲ್ಲೋ ಅಲರ್ಟ್‌; ಸಿಡಿಲಿನಿಂದ ಕೂಡಿದ ಮಳೆ ಸಾಧ್ಯತೆ

ಒಂದೇ ಮಳೆಗೆ ತುಂಬಿ ಹರಿದ ಮೃತ್ಯುಂಜಯ ನದಿ

ಒಂದೇ ಮಳೆಗೆ ತುಂಬಿ ಹರಿದ ಮೃತ್ಯುಂಜಯ ನದಿ

Wind-Rain: ವಿವಿಧೆಡೆ ಉರುಳಿ ಬಿದ್ದ ಮರಗಳು

Wind-Rain: ವಿವಿಧೆಡೆ ಉರುಳಿ ಬಿದ್ದ ಮರಗಳು

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ಅಥ್ಲೆಟಿಕ್ಸ್ ದಿನ;ದೇಶದ ಕ್ರೀಡಾಪಟುಗಳಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಿಂದ ಗೌರವ

ವಿಶ್ವ ಅಥ್ಲೆಟಿಕ್ಸ್ ದಿನ;ದೇಶದ ಕ್ರೀಡಾಪಟುಗಳಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಿಂದ ಗೌರವ

RIshab Panth

RCB ವಿರುದ್ಧ ನಾನು ಆಡಿದ್ದರೆ…: ಬಿಸಿಸಿಐ ನಿರ್ಧಾರದ ವಿರುದ್ಧ ಪಂತ್ ಅಸಮಾಧಾನ

PBKS vs RR: ಎರಡನೇ ತವರಲ್ಲಿ ಪ್ಲೇ ಆಫ್ಗೆ ಕಾದಿದೆ ರಾಜಸ್ಥಾನ್‌ ರಾಯಲ್ಸ್‌

PBKS vs RR: ಎರಡನೇ ತವರಲ್ಲಿ ಪ್ಲೇ ಆಫ್ಗೆ ಕಾದಿದೆ ರಾಜಸ್ಥಾನ್‌ ರಾಯಲ್ಸ್‌

Head Coach: BCCI keen on roping Stephen Fleming

Head Coach: ಫ್ಲೆಮಿಂಗ್‌ ಮೇಲೆ ಬಿಸಿಸಿಐ ಒಲವು?

T20 World Cup: India to play semifinal in Guyana if they reach semis

T20 World Cup: ಭಾರತ ಉಪಾಂತ್ಯಕ್ಕೇರಿದರೆ ಗಯಾನದಲ್ಲಿ ಪಂದ್ಯ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Arecanut ಚಾಲಿ ಅಡಿಕೆ ಧಾರಣೆ ಏರಿಕೆ; 500 ರೂ. ಹೊಸ್ತಿಲಿನಲ್ಲಿ ಸಿಂಗಲ್‌, ಡಬ್ಬಲ್‌ ಚೋಲ್‌

Arecanut ಚಾಲಿ ಅಡಿಕೆ ಧಾರಣೆ ಏರಿಕೆ; 500 ರೂ. ಹೊಸ್ತಿಲಿನಲ್ಲಿ ಸಿಂಗಲ್‌, ಡಬ್ಬಲ್‌ ಚೋಲ್‌

ರಸ್ತೆ ಬದಿ ತ್ಯಾಜ್ಯ ರಾಶಿ ಬೀಳದಂತೆ ಕ್ರಮ ಕೈಗೊಳ್ಳಿ : ಪಿಡಿಒಗಳಿಗೆ ಜಿ.ಪಂ. ಸಿಇಒ ಸೂಚನೆ

ರಸ್ತೆ ಬದಿ ತ್ಯಾಜ್ಯ ರಾಶಿ ಬೀಳದಂತೆ ಕ್ರಮ ಕೈಗೊಳ್ಳಿ : ಪಿಡಿಒಗಳಿಗೆ ಜಿ.ಪಂ. ಸಿಇಒ ಸೂಚನೆ

4 ದಿನ ಎಲ್ಲೋ ಅಲರ್ಟ್‌; ಸಿಡಿಲಿನಿಂದ ಕೂಡಿದ ಮಳೆ ಸಾಧ್ಯತೆ

Rain 4 ದಿನ ಎಲ್ಲೋ ಅಲರ್ಟ್‌; ಸಿಡಿಲಿನಿಂದ ಕೂಡಿದ ಮಳೆ ಸಾಧ್ಯತೆ

ಒಂದೇ ಮಳೆಗೆ ತುಂಬಿ ಹರಿದ ಮೃತ್ಯುಂಜಯ ನದಿ

ಒಂದೇ ಮಳೆಗೆ ತುಂಬಿ ಹರಿದ ಮೃತ್ಯುಂಜಯ ನದಿ

Wind-Rain: ವಿವಿಧೆಡೆ ಉರುಳಿ ಬಿದ್ದ ಮರಗಳು

Wind-Rain: ವಿವಿಧೆಡೆ ಉರುಳಿ ಬಿದ್ದ ಮರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.