ಐಟಿ,ಇಡಿಯಿಂದ ಚಿದಂಬರಂಗೆ ಮಾನಸಿಕ ಕಿರುಕುಳ: ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ : ಖರ್ಗೆ
Team Udayavani, Dec 4, 2019, 1:31 PM IST
ಬೆಂಗಳೂರು: ಕೋರ್ಟ್ ಬಹಳ ವಿಳಂಬವಾಗಿ ತೀರ್ಪು ನೀಡಿದೆ. ಚಿದಂಬರಂ ಮೂರು ತಿಂಗಳಿಂದ ಜೈಲು ವಾಸ ಮಾಡಿದ್ದಾರೆ. ಅವರು ಒಬ್ಬ ಆರ್ಥಿಕ ತಜ್ಞ, ರಾಜಕೀಯ ಧುರೀಣ, ಕಾನೂನು ತಜ್ಞ ಆಗಿದ್ದಾರೆ. ಅವರಿಗೆ ಮಾನಸಿಕವಾಗಿ ಹಿಂಸೆ ಕೊಡೋ ಕೆಲಸ ನಡೆದಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಐಟಿ,ಇಡಿ ಯಿಂದ ಚಿದಂಬರಂ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ತಡವಾಗಿಯಾದ್ರೂ ಉತ್ತಮ ತೀರ್ಪು ಬಂದಿದೆ. ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಚಿದಂಬರಂ ಉತ್ತಮ ವ್ಯಕ್ತಿತ್ವ ಹೊಂದಿದವರು ಎಂದರು.
ಆಪರೇಶನ್ ಕಮಲದ ವಿಚಾರ ನನಗೆ ತಿಳಿದಿಲ್ಲ. ಬಿಜೆಪಿಗೆ, ಜೆಡಿಎಸ್, ಕಾಂಗ್ರೆಸ್ ಗೆ ಎಷ್ಟು ಸೀಟು ಬರುತ್ತದೆಯೆಂದು ಡಿ.9ರ ಬಳಿಕ ಗೊತ್ತಾಗುವುದು ಎಂದು ಇದೆ ವೇಳೆ ತಿಳಿಸಿದರು.
ದಲಿತ ಮುಖಂಡ ಎಂದಿದ್ದಕ್ಕೆ ಸಿಟ್ಟಾದ ಖರ್ಗೆ
ಯಾಕೆ ದಲಿತ ಅಂತಾ ಹೇಳುವುದು ? ಒಬ್ಬ ಕಾಂಗ್ರೆಸ್ ಮೆನ್ ಅಂತಾ ಹೇಳಿ ಸಾಕು ಎಂದು ಕಿಡಿಕಾರಿದ್ದಾರೆ. ಡಿ.9 ರ ಬಳಿಕ ಫಲಿತಾಂಶ ನೋಡಿ ಹೈಕಮಾಂಡ್ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಜನರ ಒಲವು ಕಾಂಗ್ರೆಸ್ ನತ್ತ ಇದೆ. ಹಾಗಾಗಿ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.