ಮೌನದೊಳಗೊಂದು ಹೊಸ ಜೀವನ


Team Udayavani, Dec 9, 2019, 5:57 AM IST

mouna-kanive

ವಸಂತ ಬದುಕಿನ ಹಾದಿಯುದ್ದಕ್ಕೂ ವಿಧವಿಧದ ಬಣ್ಣಗಳ ಚಿತ್ತಾರ, ಭಾವ ಜಗತ್ತನ ನಂಬಿಕೆಯ ಹಾದಿಯಲ್ಲಿ ಮೌನದ ಆಗಮನ. ಹೊಸ ಪರ್ವದ ನವ ಭಾವನೆಗಳ ಜತೆಯಲ್ಲಿ ಒಂಟಿತನದಲ್ಲೂ ಜೀವ ಕಳೆ ತುಂಬುವ ಸಂಗಾತಿ. ನೂರು ನೋವುಗಳನ್ನು ಕಾಣದೂರಿನ ಬೆಟ್ಟದಲ್ಲಿ ಬಚ್ಚಿಟ್ಟರೂ ಮರುಕಳಿಸಿತು ಅದೇ ಹಳೆ ನೆನಪುಗಳ ಸಾಲು. ನೀ ಮರುಕ ಪಡಿದಿರು ಎನುತಾ ಬೆನ್ನು ತಟ್ಟಿ ಬಡಿದೆಬ್ಬಿಸಿ ಮುನ್ನಡೆ ಎಂದಿದೆ ಈ ಮೌನ.

ಕಳೆದು ಹೋದ ಏಳು ಬೀಳುಗಳ ಮರೆವಿನಂಚಿನಲ್ಲಿ,ಹೊಸ ರೂಪಿನಂತೆ ಕಾಡುತ್ತಿರುವ ಹೊಟ್ಟೆಕಿಚ್ಚಿನ ಮರಿಗಳು ಕವಲೊಡೆದು ದ್ವೇಷ ಸಾಧಿಸುವಲ್ಲಿಯೂ ಕಣಿವೆಯ ಹಾದಿಯಲ್ಲಿಯೂ ಸಾಧನೆ ಸಾಧ್ಯ ಎಂದಿದೆ ಮೌನ. ಸೇರು ನಿನ್ನಯ ನಾಳೆಗಳ ಅಣೆಕಟ್ಟು ನಾನಿರುವೆ ಎಂದಿಗೂ ಯಾರಿಲ್ಲದಿರಲು ನಿನ್ನ ಜತೆ ಇನ್ನಾರು ಬೇಕು. ಸಾಧಿಸಲು ನೀ ಅಂದುಕೊಂಡಿರುವುದನು. ಸಾಗುತಲಿರುವುದು ವಸಂತ ಬದುಕಿನ ಹಾದಿ ಮತ್ತೂಂದು ತಿರುವಿನಂಚು ತಲುಪುವವರೆಗೂ ಸಾಗುತಿರಲಿ ನಿನ್ನಯ ಹಾದಿ ಎನುವ ಒಂದೇ ಜೀವ ನಿನ್ನಯ ಮೌನ. ಜನರ ಜೀವನಕ್ಕೆ ಹತ್ತಿರದ ಸಂಗಾತಿ ನೀನಲ್ಲದೇ ಇರಲು ಬೇರಾರೂ ಇಲ್ಲ. ಹಾಗಾದರೆ ಕೆಲ ಸಂದರ್ಭದಲ್ಲಿ ನೀ ಮನವ ತಾಳಿ ಮೌನಕ್ಕು ಇನ್ನೊಂದು ಅರ್ಥ ಬೆಸೆಯುವಂತೆ ಮಾಡುವೆ. ಮನದ ಮೂಲೆಯಲಿ ಮಾಸದಂತೆ ಮರಗಟ್ಟಿ ನಿಂತ ನೋವು ಮರೆಸಿ ಹೊಸ ಚಿಗುರು ಮೂಡುವಂತೆ ಮಾಡುತಿದೆ ಮನಸೊಳಗಿನ ಮೌನ. ಒಂಟಿತನವೆಂದು ಎಂದಿಗೂ ಮರುಗದಿರಿ, ರಾತ್ರಿ ಬಾನಲಿ ಮೂಡು ಬೆಳಕು ಒಂದು ಹೊಸ ನಗುವ ಚೆಲ್ಲಿ ಮಂದಹಾಸವನ್ನು ಮೂಡಿಸೋ ಹಾಗೆ ಮೌನ ನಿಮ್ಮೊಳಗಿನ ಭಾವನೆಗಳನ್ನು ಓದಿ ಮಗದೊಂದು ಸಾರ್ಥಕತೆಯ ಜೀವನವನ್ನು ರೂಪಿಸಲು ಸಹಕರಿಸುತ್ತದೆ.

ಬಾಳಿನ ಪಯಣವೆಂದರೆ ಕೇವಲ ಖುಷಿಯೊಂದಲ್ಲ, ಇಲ್ಲಿ ಅನೇಕ ಅಡೆತಡೆಗಳು ಎದುರಾದಾಗ ಒಮ್ಮೆ ಯೋಚಿಸಿ. ಮನಸ್ಸನ್ನು ಪ್ರಶ್ನಿಸಿ ಉತ್ತರಗಳು ತನ್ನಿಂದ ತಾನಾಗಿಯೇ ಕಣ್ಣಮುಂದೆ ಮಿಂಚಿನಂತೆ ಬರುತಿರುತ್ತವೆ. ಆ ನೆನಪುಗಳ ಸಾಲು ಮಾಡಿರುವ ತಪ್ಪುಗಳ ಸಮರ್ಥನೆಯೊಂದಿಗೆ ಬಯಸದೇ, ಬಂದಿರುವ ಕಷ್ಟ -ನೋವು ನೋವಿನಂತೆ ಕಾಣದು. ಮುಂದಾಗುವ ಬದಲಾವಣೆಯನ್ನು ತೋರಿ ನವೀನ ಆಸೆಗಳ ಜತೆ ಹೊಸದೊಂದು ಬದುಕು ರೂಪುಗೊಳ್ಳುತ್ತದೆ. ಇಲ್ಲಿ ಮೌನದ ಪಾತ್ರ ಅತೀ ಮುಖ್ಯ. ಒಂದು ಹೆಜ್ಜೆ ಮುನ್ನಡೆಯಲು ಜೀವನದ ಆಗು ಹೋಗುಗಳ ಸಾಲಲ್ಲಿ ಆಪತಾºಂಧವನಂತೆ ಜತೆಗಿರುತ್ತದೆ. ಮೌನದೊಳಗೊಂದು ಹೊಸ ಜೀವನ, ಹೊಸ ಸಾಧನೆ ಪ್ರತಿಬಾರಿಯೂ ರೂಪುಗೊಳ್ಳುತ್ತದೆ.

-   ವಿಜಿತಾ, ಬಂಟ್ವಾಳ

ಟಾಪ್ ನ್ಯೂಸ್

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.