ಅದಮಾರು ಮಠದ ಒಳಾಂಗಣದಲ್ಲಿ ಮಳೆ ನೀರ ಕೊಯ್ಲು


Team Udayavani, Dec 10, 2019, 5:07 AM IST

ed-41

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮುಂದಿನ ಬಾರಿ ಪರ್ಯಾಯ ಪೂಜೆಯನ್ನು ನಿರ್ವಹಿಸಲಿರುವ ಅದಮಾರು ಮಠದ ಸ್ವಾಮೀಜಿಯವರು ತಮ್ಮ ಮಠದಲ್ಲಿ ಮಳೆ ನೀರು ಕೊಯ್ಲು ನಡೆಸಲು ಬೇಕಾದ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ.

ಮಠದ ಗರ್ಭಗುಡಿ ಸುತ್ತಲೂ ಇರುವ ಪೌಳಿಯ ನಡುವೆ ನಾಲ್ಕೂ ಕಡೆಗಳಿಂದ ಮಾಡಿನ ನೀರು ಕೆಳಗೆ ಬೀಳುವ ಅಂಗಣವಿದೆ. ಇದಕ್ಕೆ ಈ ಹಿಂದೆ ಎಲ್ಲ ಕಡೆ ಇರುವಂತೆ ಸಿಮೆಂಟ್‌ ಹಾಕಿದ ಕಾರಣ ನೀರು ಇಂಗದೆ ಹೊರಗೆ ಹೋಗುತ್ತಿತ್ತು. ಈಗ ಈ ಸಿಮೆಂಟ್‌ ನೆಲವನ್ನು ತೆಗೆದು ಎರಡೂವರೆ ಅಡಿ ಆಳದಲ್ಲಿ ಹೊಯಿಗೆ, ಜಲ್ಲಿಯನ್ನು ಹಾಕಿ, ಅದರ ಮೇಲೆ ಸುಮಾರು ಎರಡು ಇಂಚಿನ ಮೂರು ರಂಧ್ರಗಳಿರುವ ಇಟ್ಟಿಗೆಗಳನ್ನು ಕೂರಿಸಲಾಗುತ್ತಿದೆ.

ಆಳದಲ್ಲಿ ಅರ್ಧ ಅಡಿ ಮರಳು ಹಾಕಿ ಅದರ ಮೇಲೆ ಒಂದು ಅಡಿ ಜಲ್ಲಿಯನ್ನು ಹಾಕಿದ್ದಾರೆ. ಮರಳಿನೊಂದಿಗೆ ಶೇ.2ರಷ್ಟು ಸುಣ್ಣವನ್ನು ಬೆರೆಸಲಾಗಿದೆ. ಜಲ್ಲಿಯ ಮೇಲೆ ರಂಧ್ರವಿರುವ ಇಟ್ಟಿಗೆಗಳನ್ನು ಜೋಡಿಸುತ್ತಾರೆ. ಮಳೆಗಾಲದಲ್ಲಿ ನೀರು ಇಟ್ಟಿಗೆ ಮೇಲೆ ಬಿದ್ದು ಅದು ಭೂಮಿಯಲ್ಲಿ ಇಂಗುತ್ತದೆ. ಒಟ್ಟು ಸುಮಾರು 800 ಚದರಡಿ ಪ್ರದೇಶದಲ್ಲಿ ನೀರು ಇಂಗಿಸುವ ಪ್ರಯತ್ನ ನಡೆಸಲಾಗುತ್ತಿದೆ.

ಮನೆಮನೆಗಳಲ್ಲೂ ಪ್ರಯತ್ನ ಅಗತ್ಯ
ಎಲ್ಲರ ಮನೆಗಳ ಮುಂದಿನ/ಹಿಂದಿನ ಅಂಗಣ ಹಿಂದೆ ಮಣ್ಣಿನಿಂದ ಕೂಡಿರುತ್ತಿತ್ತು. ಒಂದೆರಡು ದಶಕಗಳ ಹಿಂದೆ ನೀರನ್ನು ಇಂಗಿಸುವ, ಪರಿಸರಪೂರಕ ಮಣ್ಣಿನ ಅಂಗಣ ಅಮಾನ್ಯವಾಗಿ ನೀರನ್ನು ಇಂಗಿಸದ, ಪರಿಸರನಾಶಕವಾದ ಸಿಮೆಂಟ್‌ ಅಂಗಣ ಮಾನ್ಯವಾಯಿತು. ಇತ್ತೀಚೆಗೆ ನೀರಿನ ಕೊರತೆ ಎದುರಾದಾಗ ಪರಿಸರಪೂರಕ ಮಣ್ಣಿನ ಅಂಗಣವನ್ನು ಅಮಾನ್ಯಗೊಳಿಸಿದ್ದು ತಪ್ಪು ಎಂಬ ಭಾವನೆ ಕ್ರಮೇಣ ತಿಳಿಯುತ್ತಿದೆ. ಹೀಗಾಗಿ ಮತ್ತೆ ಮಣ್ಣಿನ ಅಂಗಣಕ್ಕೆ ಮಾನ್ಯತೆ ಬರುತ್ತಿದೆ. ಈಗಿನಿಂದ ಮುಂದಿನ ಬೇಸಗೆಯೊಳಗೆ ತಮ್ಮ ತಮ್ಮ ಮನೆ ಪರಿಸರಕ್ಕೆ ಸರಿಹೊಂದುವ ಮಳೆ ನೀರು ಕೊಯ್ಲು ಕಾಮಗಾರಿಯನ್ನು ನಡೆಸಿದರೆ ಮುಂದಿನ ಮಳೆಗಾಲದ ನೀರಿನ ಕೊಯ್ಲು ಮಾಡಿ ಅದರ ಮುಂದಿನ ಬೇಸಗೆಯ ಪರದಾಟವನ್ನು ತಪ್ಪಿಸಬಹುದು.

ಈ ಹಿಂದೆ ಮಾಡಿನ ಮೂಲಕ ಬಂದ ಮಳೆ ನೀರು ಇಂಗದೆ ನೇರವಾಗಿ ತೋಡು ಸೇರುತ್ತಿತ್ತು. ಮಠದ ಗರ್ಭಗುಡಿ ಹೊರಗಿನ ಈ ಕಾಮಗಾರಿ ನಡೆಯುವ ಸುತ್ತಿನಲ್ಲಿಯೇ ಒಂದು ಬಾವಿ ಇದೆ. ಇದಲ್ಲದೆ ಇನ್ನೆರಡು ಬಾವಿಗಳು ಮಠದ ಆವರಣದಲ್ಲಿ ಇವೆ. ಮಳೆ ನೀರು ಇಂಗಿ ಯಾವುದಾದರೂ ಬಾವಿಗೆ ಹೋಗು ವಂತಾಗಿ ಜಲಸಮೃದ್ಧಿಯಾಗಲಿ ಎಂಬ ಮುಂದಾ ಲೋಚನೆಯಿಂದ ಈ ಕಾಮಗಾರಿ ನಡೆಸಲಾಗುತ್ತಿದೆ.
– ರಾಘವೇಂದ್ರ ರಾವ್‌, ವ್ಯವಸ್ಥಾಪಕರು, ಅದಮಾರು ಮಠ, ಉಡುಪಿ

ಅದಮಾರು ಮಠದ ಗರ್ಭಗುಡಿ ಹೊರಗಿನ ಪ್ರದೇಶದಲ್ಲಿ ಮೊದಲು ಮರಳು ಹಾಕಿ ಅದರ ಮೇಲೆ ಜಲ್ಲಿಯನ್ನು ಹಾಕಲಾಗಿದೆ. ಇನ್ನು ಮುಂದೆ ರಂಧ್ರವಿರುವ ಇಟ್ಟಿಗೆಗಳನ್ನು ಜೋಡಿಸಲಾಗುತ್ತಿದೆ.

ಟಾಪ್ ನ್ಯೂಸ್

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.