ಭರವಸೆಯ ಬೆಳಕು ಆರದಿರಲಿ…


Team Udayavani, Dec 16, 2019, 5:28 AM IST

Kirulekhana-3

ಪ್ರತಿಯೊಬ್ಬರಲ್ಲೂ ಒಂದು ಸಣ್ಣ ಮಗುವಿನ ಗುಣ ಅಡಕವಾಗಿರುತ್ತದೆ. ಬೆಳಗ್ಗಿನ ಸೂರ್ಯ ಉದಯಿಸಿದರೂ, ಮೋಡಗಳ ಮರೆಯಲ್ಲಿ ಕಾಣದೇ ಇರಬಹುದು. ಆದರೆ ಆತನ ಕಿರಣಗಳು ಸಣ್ಣ ಅಲೆಯಂತೆ ಪ್ರಕಾಶಿಸುತ್ತವೆ. ಹಾಗೆಯೇ ಬದುಕು ಒಂದು ಅಲೆಯಂತೆ. ಅಲ್ಲಿ ಮೋಡಗಳಂತೆ ಅಡ್ಡಗಟ್ಟುವವರು ಅದೆಷ್ಟು ಜನರಿದ್ದರೂ ಬೆನ್ನೆಲುಬಾಗಿ ಒಬ್ಬರಾದರೂ ಇದ್ದೇ ಇರುತ್ತಾರೆ.

ನಾಳೆ ಎಂಬುದು ತಾಯಿ ಹೊಟ್ಟೆಯಲ್ಲಿನ ಮಗುವಿನಂತೆ. ಸಣ್ಣಪುಟ್ಟ ಯಶಸ್ಸು ಸಾಧನೆಯ ಹಾದಿಯಲ್ಲಿ ಹೊಸ ಚೈತನ್ಯ ನೀಡುತ್ತದೆ. ನಕಾರಾತ್ಮಕ ಬದಲಾವಣೆಗಳಾದರೂ ಇಂತಹ ಕಥೆಗಳು ನಮ್ಮಲ್ಲಿ ಸಕಾರಾತ್ಮಕ ಭಾವನೆಯನ್ನು ಬೆಳೆಸಲು ಸಹಾಯಕ.

ಇಂದಿನ ಯುವಜನತೆ ಹೇಗೆಂದರೆ ಯಾವುದೇ ವಿಷಯವನ್ನು ತಿಳಿಯದೆ ಇದರಲ್ಲಿ ತಾನೂ ಸೇರಿಕೊಳ್ಳುವುದು. ಅದರಿಂದಾಗುವ ಸಮಸ್ಯೆ ಏನು ಎಂದು ಸಹ ಯೋಚನೆ ಮಾಡುವ ತಾಳ್ಮೆ ಅವರಲ್ಲಿರದು. ಒಟ್ಟಿನಲ್ಲಿ ತಾನೂ ಎಲ್ಲರಂತೆ ಇರಬೇಕೆನ್ನುವುದು ಒಂದು. ಇಲ್ಲಿ ಅವರ ಮನಸ್ಥಿತಿ ಅವರನ್ನು ತಾಳ್ಮೆಯಿಂದ ಯೋಚಿಸಲು ಎಂದಿಗೂ ಬಿಡುವುದಿಲ್ಲ. ಇಲ್ಲಿ ಸಮಯ ಅನ್ನೋದು ಎಷ್ಟು ಮುಖ್ಯವೆಂದರೆ ಅದಕ್ಕಿರುವಷ್ಟು ಪ್ರೀತಿ ಕಾಳಜಿ ಇನ್ನಾವುದಕ್ಕೂ ತಿಳಿದಿಲ್ಲ.

ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫ‌ಲವೇನು ಎನ್ನುವಂತೆ, ಏನಾದರೂ ಮಾಡುವ ಮೊದಲು ತಾಳ್ಮೆಯಿಂದ ಯೋಚಿಸಿ ನಿರ್ಧರಿಸಿದರೆ ಉತ್ತಮ ಬದುಕು ರೂಪಿಸಬಹುದು. ಪ್ರತಿಯೊಬ್ಬರಿಗೂ ಜೀವನದಲ್ಲಿ ನಡೆಯುವ ಘಟನೆಗಳು ಇನ್ನೊಬ್ಬರ ಸಾಧನೆಗೆ ಮುನ್ನುಡಿಯಾಗಲೂಬಹುದು.

ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಘಟನೆಗಳು ಇನ್ನೊಬ್ಬರ ಸಾಧನೆಗೆ ಶ್ರೀಕಾರವಾಗಲೂಬಹುದು. ನಮ್ಮಲ್ಲಿರುವ ಸಾಮರ್ಥ್ಯಕ್ಕೆ ತಕ್ಕದಾದ ಬೆಲೆ ಸಿಗಬೇಕಾದರೆ ಪರಿಶ್ರಮದ ಜತೆಗೆ ಶ್ರದ್ಧೆಯೂ ಅತ್ಯಗತ್ಯ. ಯುವಜನತೆ ಯೋಚಿಸುವ ಮೊದಲೇ ನಿರ್ಧರಿಸುತ್ತದೆ. ಈ ನಿರ್ಧಾರದಿಂದ ಆನಂದಕ್ಕಿಂತ ಆತುರತೆಯ ಘಟನೆಗಳೇ ಹೆಚ್ಚಾಗಿ ನಡೆಯುತ್ತದೆ. ಯಾವುದೇ ವಿಷಯವಾಗಿರಲಿ ಮೊದಲು ಆಲೋಚಿಸಬೇಕು. ಬಳಿಕ ಚಿಂತಿಸಬೇಕು. ಕೊನೆಗೆ ನಿರ್ಧಾರ ಕೈಗೊಳ್ಳುವ ಗುಣವನ್ನು ಹೊಂದಿರಬೇಕು, ಇಲ್ಲವಾದಲ್ಲಿ ಬದುಕು ಕಷ್ಟವಾಗುತ್ತದೆ.

ಅಂದುಕೊಂಡಂತೆ ಆಗಬೇಕಿಲ್ಲ
ಸಂಬಂಧಗಳು ಉಳಿಯಬೇಕಾದರೆ ಭಾವನೆಗಳ ಕುರಿತು ಕಾಳಜಿ,ಗೌರವ,ಪ್ರೀತಿ ಇರಬೇಕು.ಆದರೆ ಇತ್ತೀಚಿನ ದಿನಗಳಲ್ಲಿ ಇದು ಕ್ಷೀಣಿಸುತ್ತಿದೆ.ಮುಖ್ಯವಾಗಿ ಈ ಹವ್ಯಾಸ ಉದ್ಯೋಗದ ವಿಚಾರಗಳಲ್ಲಿ ಇಲ್ಲವಾದಲ್ಲಿ ಬದುಕು ಕಷ್ಟವೆನಿಸುತ್ತದೆ. ಎಲ್ಲವೂ ನಾವು ಅಂದುಕೊಂಡಂತೆಯೆ ಆಗುವುದಿಲ್ಲ. ಅತಿ ಶಿಸ್ತಿನಿಂದ ಎಲ್ಲವನ್ನೂ ಮಾಡುವೆನೆಂದರೆ ಕೆಲವೊಂದು ಬಾರಿ ಹಾಸ್ಯಾಸ್ಪದವಾಗಿ ಪರಿಣಮಿಸುವುದುಂಟು. ಅಂದುಕೊಂಡ ಉದ್ದೇಶ ಈಡೇರದೇ ಇರಲು ಇದೂ ಒಂದು ಕಾರಣವಾಗಲೂಬಹುದು. ನಾವು ಪರರ ಹಿತವನ್ನು ಬಯಸುವುದಾದರೆ ನಮ್ಮ ಹಿತ ಕಾಯುವವರೂ ಅನೇಕರಿರುತ್ತಾರೆ.

-ವಿಶು ಅಮೀನ್‌

ಟಾಪ್ ನ್ಯೂಸ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.