ಮನುಜ ಕುಲವನ್ನು ನರಕಯಾತನೆಯಿಂದ ರಕ್ಷಿಸಿದ ಆ ಮಗು


Team Udayavani, Dec 25, 2019, 7:30 AM IST

sz-38

ಬಹುಶಃ ದೇವರ ರೂಪ ಧರಿಸಿ ಭೂಮಿಗೆ ಇಳಿದರೆ ಸಾಮಾನ್ಯ ಜನರು ನಂಬಲಾರರು, ನಂಬಿದರೂ ದೇವರಿಂದ ದೂರವೇ ಉಳಿಯುವರು ಎನ್ನುವ ಕಾರಣದಿಂದಾಗಿ ಮನುಷ್ಯ ರೂಪದಲ್ಲಿ ಹುಟ್ಟಿ, ಮನುಷ್ಯರ ಹಾಗೆ ಬಾಳಿ, ಅವರೊಂದಿಗೆ ಬೆರೆತು, ಅವರು ಪಡುವಂತಹ ಕಷ್ಟಗಳಲ್ಲಿ ಭಾಗಿಯಾಗಿ, ಅವರು ಉಣ್ಣುವುದನ್ನು ಉಂಡು, ಅವರು ಉಡುವುದನ್ನು ಉಟ್ಟು ಸನ್ಮಾರ್ಗದೆಡೆಗೆ ಅವರ ಮನ ಪರಿವರ್ತನೆ ಮಾಡಿ ಸ್ವರ್ಗದ ದಾರಿಯನ್ನು ತೋರಿಸುವುದು ದೇವರ ನಿರ್ಧಾರವಾಗಿತ್ತು.

ಮಗು ಸಾಕ್ಷಾತ್‌ ದೇವರ ಸ್ವರೂಪವೆಂದು ನಂಬಿಕೊಂಡು ಬಂದವರು ನಾವು. ಮಗುವಿನ ಹೃದಯ ನಿರ್ಮಲ, ಮನಸ್ಸು ನಿಷ್ಕಳಂಕ, ಆಲೋಚನೆ ಶುದ್ಧ. ಮಗುವಿಗಿಲ್ಲ ಅಹಂಕಾರ. ಮಗುವಿನ ಮಾತು ಅಷ್ಟೇ ಪರಿಶುದ್ಧ. ಮಗುವಿನೊಡನೆ ಪ್ರತಿಯೊಬ್ಬರ ಸಂಬಂಧ ಅದು ದೈವದರ್ಶನವೇ ಸರಿ. ಮಗುವಿನೊಡನೆ ಒಡನಾಟ ಅದು ಸ್ವರ್ಗಿಯ ಅನುಭವ. ಮಗುವಿನ ಮಮತೆ, ಪ್ರೀತಿಗಿಲ್ಲ ಕೀಳು ಮೇಲೆಂಬ ಭಾವನೆ. ಅದರ ನಿಷ್ಕಳಂಕ ಮನಸ್ಸಿಗಿಲ್ಲ ಶ್ರೀಮಂತ ಬಡವನೆಂಬ ಧೋರಣೆ. ಅದರ ನೋಟಕ್ಕೆ ಎಲ್ಲವೂ ಸಮಾನ ಹಾಗೂ ಎಲ್ಲವೂ ಸ್ವಚ್ಛಂದ.

ಎರಡು ಸಾವಿರ ವರ್ಷಗಳ ಹಿಂದೆ ಮಾತೆ ಕನ್ಯಾ ಮರಿಯಮ್ಮ ಹಾಗೂ ಜೋಸೆಫ್ರಿಗೆ ಹುಟ್ಟಿದ ಮಗು ಯೇಸು ಕೂಡ ಇಂತದ್ದೇ ಸ್ವಭಾವವನ್ನು ಹೊತ್ತುಕೊಂಡು ತಾಯಿಯ ಗರ್ಭದಿಂದ ಭೂಮಿಗೆ ಬಂದವನು. ಆದರೆ ಈ ಮಗು ಇನ್ನೂ ಹೆಚ್ಚಿನ ವಿಶೇಷತೆಯನ್ನು ಹುಟ್ಟಿನಿಂದಲೇ ಹೊಂದಿತ್ತು. ಆ ಮಗು ದೈವಶಕ್ತಿಯಿಂದ ಕೂಡಿತ್ತು. ಇದಕ್ಕೆ ಕಾರಣ ದೇವರಿಗೆ ಮನುಷ್ಯರ ಮೇಲಿದ್ದ ಪ್ರೀತಿ. ತಾನು ಸೃಷ್ಟಿಸಿದ ಮಾನವರು ಭೂಲೋಕದಲ್ಲಿ ಅನಾಚಾರ, ಸ್ವೇಚ್ಛಾಚಾರ, ಭೋಗ, ಪಾಪ ಹಾಗೂ ಇನ್ನಿತರ ಚಟುವಟಿಕೆಗಳಿಂದ ನರಕದ ಹಾದಿಯನ್ನು ಹಿಡಿಯುತ್ತಿರುವುದು ಅವನಿಗೆ ಸಹಿಸಲ ಸಾಧ್ಯವಾಯಿತು. ದೈವಶಕ್ತಿಯೊಂದೇ ಅವರನ್ನು ಪಾಪದ ಕೂಪದಿಂದ ರಕ್ಷಿಸಲು ಸಾಧ್ಯ ಎಂಬುದರ ಅರಿವು ಅವನಿಗಿತ್ತು. ಆದುದರಿಂದ ತಾನೇ ಸ್ವತಃ ಭೂಮಿಗಿಳಿದು ಮನುಜ ಕುಲವನ್ನು ನರಕ ಯಾತನೆಯಿಂದ ರಕ್ಷಿಸುವ ಕೆಲಸವನ್ನು ಆರಂಭಿಸಿದ. ಬಹುಶಃ ದೇವರ ರೂಪ ಧರಿಸಿ ಭೂಮಿಗೆ ಇಳಿದರೆ ಸಾಮಾನ್ಯ ಜನರು ನಂಬಲಾರರು, ನಂಬಿದರೂ ದೇವರಿಂದ ದೂರವೇ ಉಳಿಯುವರು ಎನ್ನುವ ಕಾರಣದಿಂದಾಗಿ ಮನುಷ್ಯ ರೂಪದಲ್ಲಿ ಹುಟ್ಟಿ, ಮನುಷ್ಯರ ಹಾಗೆ ಬಾಳಿ, ಅವರೊಂದಿಗೆ ಬೆರೆತು, ಅವರು ಪಡುವಂತಹ ಕಷ್ಟಗಳಲ್ಲಿ ಭಾಗಿಯಾಗಿ, ಅವರು ಉಣ್ಣುವುದನ್ನು ಉಂಡು, ಅವರು ಉಡುವುದನ್ನು ಉಟ್ಟು ಸನ್ಮಾರ್ಗದೆಡೆಗೆ ಅವರ ಮನ ಪರಿವರ್ತನೆ ಮಾಡಿ ಸ್ವರ್ಗದ ದಾರಿಯನ್ನು ತೋರಿಸುವುದು ದೇವರ ನಿರ್ಧಾರವಾಗಿತ್ತು.

ಅಂತೆಯೇ ಆಯಿತು. ಇದೊಂದು ಪವಾಡ. ಪವಾಡ ಪವಾಡವಾಗಿಯೇ ಉಳಿಯುತ್ತದೆ. ಏಕೆಂದರೆ ಅದು ಕಲ್ಪನಾತೀತ. ಹಲವಾರು ವ್ಯಕ್ತಿಗಳು ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ. “ಅದು ಹೇಗೆ ಸಾಧ್ಯ. ಗಂಡ ಹೆಂಡತಿ ಸಂಧಿಸದೆ ಮಗು ಹುಟ್ಟಲು ಸಾಧ್ಯವೇ?’ ಇನ್ನೊಂದು ಕಡೆ ದೇವರಿಗೆ ಅಸಾಧ್ಯವಾದುದು ಏನೂ ಇಲ್ಲ ಎಂಬುದನ್ನ ನಂಬಿಕೊಂಡು ಬಂದವರು ನಾವು. ಆದುದರಿಂದ ಪವಿತ್ರಾತ್ಮನ ಶಕ್ತಿಯಿಂದ ಮಾತೆ ಮೇರಿಯಮ್ಮ ಗರ್ಭಿಣಿಯಾದಳು. ಗೋದಲಿಯಲ್ಲಿ ಪ್ರಸವ ವೇದನೆಯನ್ನು ಅನುಭವಿಸಿ ಗಂಡು ಮಗುವಿಗೆ ಜನ್ಮ ನೀಡಿದಳು ಹಾಗೂ ಆ ಮಗುವಿಗೆ ಏಸು ಎಂದು ಹೆಸರಿಟ್ಟರು. ಆ ಜನನದಿಂದ ದೇವರಿಗೆ ಮನುಕುಲದ ಮೇಲಿರುವ ಪ್ರೀತಿ ರುಜುವಾಯಿತು. ಜಗತ್ತಿನಾದ್ಯಂತ ಈ ಪವಾಡದ ಜನನವನ್ನು ಕ್ರಿಸ್ಮಸ್‌ ಹಬ್ಬವಾಗಿ ಆಚರಿಸಿ ಏಸು ಕ್ರಿಸ್ತನ ಜನನವನ್ನು ಸಂಭ್ರಮಿಸುತ್ತೇವೆ.

ದೇವರು ಕನ್ಯಾ ಮರಿಯಮ್ಮಳನ್ನು ಏಸುವಿನ ತಾಯಿಯಾಗಿ ಆಯ್ಕೆ ಮಾಡಿದ ರೀತಿಯೇ ಒಂದು ಅದ್ಭುತ ಸನ್ನಿವೇಶ. ತನ್ನ ಸ್ಥಾನದಲ್ಲಿ ತನ್ನ ಮಗನನ್ನು ಭೂಮಿಗೆ ಕಳುಹಿಸುವ ಸಂದೇಶವನ್ನು ಕನ್ಯಾ ಮರಿಯಮ್ಮಳಿಗೆ ನೀಡುವ ಸಲುವಾಗಿ ದೇವರು ಅವನ ದೂತನನ್ನು ನಿಯೋಜಿಸಿದರು. ಆ ದೂತ ಕನ್ಯಾ ಮರಿಯಮ್ಮಳಿಗೆ ಪ್ರತ್ಯಕ್ಷವಾಗಿ ದೇವರ ಸಂದೇಶವನ್ನು ಸಾರುತ್ತಾನೆ. “ನೀನು ಭಾಗ್ಯವಂತಳು. ಪವಿತ್ರಾತ್ಮನ ಶಕ್ತಿಯಿಂದ ನೀನು ಒಂದು ಗಂಡು ಮಗುವಿಗೆ ಜನ್ಮ ನೀಡುವಿ. ಆತನಿಗೆ ಏಸು ಎಂದು ನಾಮಕರಣ ಮಾಡುವಿಯಂತೆ’. ಈ ಸಂದೇಶದಿಂದ ಒಮ್ಮೆ ವಿಚಲಿತಳಾದ ಕನ್ಯಾ ಮರಿಯಮ್ಮ ತನ್ನನ್ನೇ ದೇವರ ಅಪೇಕ್ಷೆಗೆ ಅರ್ಪಿಸಿ ಅವನ ಇಷ್ಟದಂತೆ ಆಗಲಿ ಎಂದು ಮನುಕುಲವನ್ನು ರಕ್ಷಿಸಲು ಹುಟ್ಟುವ ಮಗುವಿನ ತಾಯಿಯಾಗಲು ಒಪ್ಪುತ್ತಾಳೆ.

ಅ ಮಗು ಏಸು ತನ್ನ ದೈವಾತ್ಮವನ್ನು ಹುಟ್ಟಿನಿಂದಲೇ ತೋರಿಸಿ ಕೊಡುತ್ತಾನೆ. ಅವನು ಹುಟ್ಟುವಾಗ ಮೂವರು ಶ್ರೀಮಂತ ರಾಜರು ಅವನನ್ನು ನೋಡಲು ಹೋಗುವಾಗ ಅವರಿಗೆ ದಾರಿ ತೋರಿಸಿದ್ದು ಆಕಾಶದಲ್ಲಿ ಹೊಳೆಯುತ್ತಿದ್ದ ಒಂದು ನಕ್ಷತ್ರ. ಬಾಲಕ ಏಸುವನ್ನು ದೇವಾಲಯಕ್ಕೆ ಅರ್ಪಣೆ ಮಾಡಿದಂತಹ ಸಂದರ್ಭದಲ್ಲಿ ಬಾಲ ಏಸು ತನ್ನ ಹೆತ್ತವರಿಂದ ದೂರವಾಗುತ್ತಾನೆ. ಹೆತ್ತವರು ಆತಂಕಗೊಂಡು ಬಾಲಕನನ್ನು ಅರಸಿ ದೇವಾಲಯಕ್ಕೆ ಹಿಂತಿರುಗಿದಾಗ ಬಾಲಕ ಏಸು ಆ ದೇವಾಲಯದಲ್ಲಿ ಹಿರಿಯರೊಡನೆ ದೇವರ ರಾಜ್ಯದ ಬಗ್ಗೆ ಗಹನ ಚರ್ಚೆಯಲ್ಲಿ ತೊಡಗಿದ್ದ. ಅನಂತರ ಆತನಿಗೆ ಮೂವತೂರು ವರ್ಷಗಳು ತುಂಬುವ ತನಕ ಕುಟುಂಬದೊಂದಿಗೆ ಖಾಸಗಿ ಬದುಕು. ಮೂವತೂ¾ರು ವರ್ಷ ತುಂಬುತ್ತಲೇ ಸಾರ್ವಜನಿಕ ಬದುಕು ಆರಂಭಿಸಿ ದೇವರು ಅವನಿಗೋಸ್ಕರ ನಿರ್ಧರಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡತೊಡಗಿದ. ಮನುಷ್ಯರಿಗೆ ಸ್ವರ್ಗದ ದಾರಿಯನ್ನು ತೋರಿಸುವ ಕೆಲಸವನ್ನು ಕೈಗೆತ್ತಿಕೊಂಡು ತನ್ನವರಿಂದಲೇ ದ್ವೇಷಕ್ಕೊಳಗಾದ. ಶಿಲುಬೆಯ ಮರಣದೊಂದಿಗೆ ಅವನ ಜೀವನ ಅಂತ್ಯಗೊಂಡಿತು. ಆದರೆ ಅವನ ಸಾವು ಮನುಕುಲಕ್ಕೆ ಹೊಸ ಹುರುಪು ನೀಡಿತು. ಇದಕ್ಕಿಂತಲೂ ಮಿಗಿಲಾಗಿ ಅವನ ಹುಟ್ಟು ಮನುಕುಲಕ್ಕೆ ಹೊಸ ಆಶಾಕಿರಣ ನೀಡಿತು. ಇನ್ನೇನೊ ಕತ್ತಲಲ್ಲಿ ನಾವು ಮುಳುಗುತ್ತೇವೆ ಎನ್ನುವಾಗ ಅ ಮಗುವಿನ ಕೂಗು ನಮಗೆಲ್ಲರಿಗೆ ಪುನರ್ಜನ್ಮವನ್ನು ನೀಡಿತು. ಆ ಮಗು ಕ್ರೆçಸ್ತರು ಆರಾಧಿಸುವಂತಹ ಏಸು ಕ್ರಿಸ್ತ.

ಕ್ರಿಸ್ಮಸ್‌ ಹಬ್ಬವು ಪ್ರೀತಿ, ಮಮತೆ, ಸಂತೋಷ ಹಾಗೂ ಸಹೋದರತ್ವ ಸಾರುವ ಹಬ್ಬವಾಗಿದೆ. ಇಡೀ ವಿಶ್ವವೇ ಈ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಏಸು ಸಾರಿದ ಪ್ರೀತಿಯ ಸಂದೇಶ ನೆಲೆಮಾಡಲಿ ಎಂಬ ಹಾರೈಕೆ.

ಡಾ| ವಿನ್ಸೆಂಟ್‌ ಆಳ್ವ

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.