ಕ್ರಿಸ್ಮಸ್‌ ಆಚರಣೆಗೆ ರಂಗು ನೀಡುವ ಕ್ರಿಸ್ಮಸ್‌ ಟ್ರೀ


Team Udayavani, Dec 25, 2019, 2:53 AM IST

Christmas-02-730

ಚಿತ್ರ: ಆಸ್ಟ್ರೋ ಮೋಹನ್

ಕ್ರಿಸ್ಮಸ್‌ ಸಂದರ್ಭದಲ್ಲಿ ಕ್ರೈಸ್ತರ ಮನೆ ಅಥವಾ ಮನೆ ಆವರಣದಲ್ಲಿ, ಚರ್ಚ್‌ ಮತ್ತು ಇತರ ಪ್ರಾರ್ಥನಾ ಮಂದಿರಗಳಲ್ಲಿ ಸ್ಥಾಪಿಸಲಾಗುವ ಹಚ್ಚ ಹಸುರಿನ ಮರ ಕ್ರಿಸ್ಮಸ್‌ ಟ್ರೀ.
ಅದು ಕೃತಕ ಮರ ಆಗಿರಬಹುದು ಅಥವಾ ನೈಜ ಮರವೂ ಆಗಿರಬಹುದು. ಆದರೆ ಇವತ್ತಿನ ಕಾಲದಲ್ಲಿ ಕೃತಕವಾಗಿ ತಯಾರಿಸಿದ ಮಾರುಕಟ್ಟೆಯಲ್ಲಿ ಲಭಿಸುವ ಕೃತಕ ಮರವೇ ಬಹುತೇಕ ಎಲ್ಲೆಡೆ ರಾರಾಜಿಸುತ್ತಿದೆ. ಮಾರುಕಟ್ಟೆಯಲ್ಲಿ ದೇಶ ವಿದೇಶಗಳ ಕ್ರಿಸ್ಮಸ್‌ ಟ್ರೀಗಳು ಸಾಕಷ್ಟು ಪ್ರಾಮಾಣದಲ್ಲಿ ಲಭ್ಯವಿವೆ.

ಕ್ರಿಸ್ಮಸ್‌ ಟ್ರೀ ಹಿನ್ನೆಲೆ
ಕ್ರಿಸ್ಮಸ್‌ ಟ್ರಿಯೊಂದಿಗೆ ಕ್ರಿಸ್ಮಸ್‌ ಆಚರಿಸುವ ಸಂಪ್ರದಾಯ ಉತ್ತರ ಯುರೋಪ್‌ನಲ್ಲಿ ಮೊದಲು ಆರಂಭವಾಯಿತು ಎಂದು ಕೆಲವು ಉಲ್ಲೇಖಗಳಿಂದ ತಿಳಿದು ಬರುತ್ತದೆ. ಮಧ್ಯಕಾಲೀನ ಲಿವೋನಿಯಾದಲ್ಲಿ (ಪ್ರಸ್ತುತ ಎಸ್ತೋನಿಯಾ ಮತ್ತು ಲಾತ್ವಿಯಾ) ಈ ಸಂಪ್ರದಾಯ ಬೆಳೆದು ಬಂದಿತ್ತು. ಆಧುನಿಕ ಜರ್ಮನಿಯ ಪ್ರಾರಂಭಿಕ ಘಟ್ಟದಲ್ಲಿ ಅಂದರೆ 16 ನೇ ಶತಮಾನದಲ್ಲಿ ಪ್ರೊಟೆಸ್ಟೆಂಟ್‌ ಜರ್ಮನರು ಅಲಂಕೃತ ಮರಗಳನ್ನು ತಮ್ಮ ಮನೆಗೆ ತರುತ್ತಿದ್ದರು. ಹಾಗೆ ಕ್ರಮೇಣ ಈ ಪದ್ಧತಿ ಜನಪ್ರಿಯತೆ ಗಳಿಸಿಕೊಂಡಿದೆ.

ಮರವನ್ನು ಸಾಂಪ್ರದಾಯಿಕವಾಗಿ ಬಣ್ಣದ ಕಾಗದಗಳಿಂದ ತಯಾರಿಸಿದ ಗುಲಾಬಿ ಹೂವು, ಸೇಬು ಹಣ್ಣು, ತೆಳು ಕಾಗದ, ಬೇಗಡೆ ಇತ್ಯಾದಿಗಳಿಂದ ಅಲಂಕರಿಸಲಾಗುತ್ತಿತ್ತು. 18 ನೇ ಶತಮಾನದ ವೇಳೆಗೆ ಮರದಲ್ಲಿ ಮೇಣದ ಬತ್ತಿ ಇರಿಸಿ ಉರಿಸುವ ಸಂಪ್ರದಾಯವಿದ್ದು, ಕಾಲಕ್ರಮೇಣ ವಿದ್ಯುತ್‌ ಶಕ್ತಿಯ ಆವಿಷ್ಕಾರ ಆದ ಬಳಿಕ ವಿದ್ಯುತ್‌ ದೀಪಗಳಿಂದ ಅಲಂಕರಿಸುವ ಸಂಪ್ರದಾಯ ರೂಢಿಗೆ ಬಂತು.

ಇವತ್ತಿನ ಕಾಲದಲ್ಲಿ ಕ್ರಿಸ್ಮಸ್‌ ಮರಕ್ಕೆ ಮಾಲೆ, ಬಲೂನ್‌, ಬೇಗಡೆ ಮತ್ತಿತರ ಸಾಂಪ್ರದಾಯಿಕ ಆಭರಣಗಳನ್ನು ಜೋಡಣೆ ಮಾಡಲಾಗುತ್ತಿದೆ. ಮರದ ತುದಿಯಲ್ಲಿ ದೇವ ದೂತ ಗ್ಯಾಬ್ರಿಯೆಲ್‌ ಪ್ರತಿಮೆ ಅಥವಾ ಬೆತ್ಲೆಹೇಮ್‌ನ ತಾರೆಯನ್ನು ಪ್ರತಿನಿಧಿಸುವ ನಕ್ಷತ್ರವನ್ನು ಅಳವಡಿಸಲಾಗುತ್ತಿದೆ.

ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಕ್ರಿಸ್ಮಸ್‌ ಟ್ರೀಯನ್ನು ಕ್ರಿಸ್ಮಸ್‌ ದಿನಕ್ಕಿಂತ ಒಂದು ತಿಂಗಳ ಮೊದಲು ಅಂದರೆ ಪೂರ್ವ ಸಿದ್ಧತೆಯ ಆರಂಭದ ದಿನ (ಅಡ್ವೆಂಟ್‌) ದಂದೇ ಸ್ಥಾಪಿಸಲಾಗುತ್ತಿದೆ. ಭಾರತದಲ್ಲಿ ಸಾಮಾನ್ಯವಾಗಿ ಕ್ರಿಸ್ಮಸ್‌ ಹಬ್ಬಕ್ಕೆ ಒಂದು ವಾರ ಇರುವಾಗ ಕ್ರಿಸ್ಮಸ್‌ಟ್ರೀ ಇರಿಸುವ ಸಂಪ್ರದಾಯ ಚಾಲ್ತಿಯಲ್ಲಿದೆ. ಹಚ್ಚ ಹಸಿರಿನ ಮರಗಳು, ರೀದ್‌ಗಳು, ಮಾಲೆಗಳು ಶಾಶ್ವತ ಬದುಕಿನ ಸಂಕೇತ. ಇವುಗಳನ್ನು ಬಳಕೆ ಮಾಡುವ ಪದ್ಧತಿ ಪುರಾತನ ಈಜಿಪ್ಟ್, ಚೀನಾ ಮತ್ತು ಹಿಬ್ರೂ ಜನಾಂಗದವರಲ್ಲಿತ್ತು.

ಕ್ರೈಸ್ತ ಧರ್ಮ ಬರುವ ಮೊದಲು ಯುರೋಪಿನ ಜನರು ವೃಕ್ಷಗಳನ್ನು ಆರಾಧಿಸುತ್ತಿದ್ದರು ಹಾಗೂ ಈ ಜನರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಾಗ ಈ ವೃಕ್ಷಾರಾಧನೆಯ ಪದ್ಧತಿಯನ್ನು ಉಳಿಸಿಕೊಂಡು ಬಂದರು. ಅಲ್ಲದೆ ಸ್ಕ್ಯಾಂಡಿನೇವಿಯನ್‌ ಸಂಪ್ರದಾಯದಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಪ್ರೇತವನ್ನು ಓಡಿಸಲು ಕ್ರಿಸ್ಮಸ್‌ ಸಂದರ್ಭದಲ್ಲಿ ಹಚ್ಚ ಹಸಿರಿನ ಮರವನ್ನು ನೆಟ್ಟು ಅದರಲ್ಲಿ ಹಕ್ಕಿಗಳು ವಾಸವಿರುವಂತೆ ನೋಡಿಕೊಳ್ಳುತ್ತಿದ್ದರು.

ಫ್ರಾಂಕೊ – ಪ್ರಶ್ಯನ್‌ ಯುದ್ಧದ ಸಂದರ್ಭದಲ್ಲಿ ಜರ್ಮನ್‌ ಸೈನಿಕರು ತಮ್ಮ ನೆಲೆಗಳಲ್ಲಿ ಮತ್ತು ಮಿಲಿಟರಿ ಆಸ್ಪತ್ರೆಗಳಲ್ಲಿ ಕ್ರಿಸ್ಮಸ್‌ ಟ್ರೀಗಳನ್ನು ಸ್ಥಾಪಿಸಿದ್ದು, ಇದು ಬಹಳಷ್ಟು ಜನಪ್ರಿಯತೆ ಪಡೆದಿತ್ತು. ಹೀಗೆ ಕ್ರಿಸ್ಮಸ್‌ ಟ್ರೀ ಗೆ ಬಹಳಷ್ಟು ಹಿನ್ನೆಲೆ ಇದೆ. ಆದರೆ ಈ ಕ್ರಿಸ್ಮಸ್‌ ಟ್ರೀ ಚರ್ಚ್‌ ಆವರಣದ ಒಳಗೆ ಪ್ರವೇಶ ಪಡೆದದ್ದು 20 ನೇ ಶತಮಾನದ ಬಳಿಕ ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಕೃತಕ ಕ್ರಿಸ್ಮಸ್‌ ಟ್ರೀ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ಇದೊಂದು ಭರ್ಜರಿ ವ್ಯಾಪಾರದ ಮಾರಾಟದ ವಸ್ತುವೂ ಆಗಿದೆ.

ಟಾಪ್ ನ್ಯೂಸ್

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಸಿಹಿತಿಂಡಿ ನೀಡದ್ದಕ್ಕೆ ಮದುವೆಯೇ ರದ್ದು!

Madikeri ಸಿಹಿತಿಂಡಿ ನೀಡದ್ದಕ್ಕೆ ಮದುವೆಯೇ ರದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.