ಕ್ರಿಸ್ಮಸ್‌ ಆಚರಣೆಗೆ ಮೆರುಗು ನೀಡುವ ಗ್ರೀಟಿಂಗ್ಸ್‌ ಕಾರ್ಡ್‌


Team Udayavani, Dec 25, 2019, 3:13 AM IST

Christmas-cards-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಯಾವುದೇ ಪ್ರಮುಖ ಹಬ್ಬ ಆಚರಣೆಯ ಸಂದರ್ಭದಲ್ಲಿ ಶುಭಾಶಯ ಪತ್ರ ಅಥವಾ ಕಾರ್ಡ್‌ಗಳ ಮೂಲಕ ತಮ್ಮ ಹಿತೈಷಿಗಳಿಗೆ, ಬಂಧು ಬಾಂಧವರಿಗೆ, ಮಿತ್ರರಿಗೆ, ನೆಂಟರಿಷ್ಟರಿಗೆ ಹಬ್ಬದ ಶುಭಾಶಯ ಸಲ್ಲಿಸುವುದು ಸಂಪ್ರದಾಯ. ಕ್ರಿಸ್ಮಸ್‌ ಸಂದರ್ಭದಲ್ಲಿಯೂ ಇದು ಸಾಮಾನ್ಯ.

ಕ್ರಿಸ್ಮಸ್‌ ಸಂದರ್ಭದಲ್ಲಿ ವಿಶೇಷ ಗ್ರೀಟಿಂಗ್‌ ಕಾರ್ಡ್‌ಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಬೇರೆ ಬೇರೆ ಗ್ರಾತ್ರದ, ವಿನ್ಯಾಸದ ಗ್ರೀಟಿಂಗ್‌ ಕಾರ್ಡುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಸಂಗೀತದ ನಾದ ಹೊರಡಿಸುವ ಗ್ರೀಟಿಂಗ್‌ ಕಾರ್ಡುಗಳೂ ಇವೆ.

ಗ್ರೀಟಿಂಗ್‌ ಕಾರ್ಡ್‌ ಹಿನ್ನೆಲೆ
ಕ್ರಿ.ಶ.1837ರಲ್ಲಿ ಬ್ರಿಟನ್‌ನಲ್ಲಿ ರೋಲ್ಯಾಂಡ್‌ ಹಿಲ್‌ ಅವರು ಪ್ರಥಮವಾಗಿ ಪ್ರಾರಂಭಿಸಿದ ಪೆನ್ನಿಪೋಸ್ಟ್‌ ಎಂಬ ಶುಭಾಶಯ ಪತ್ರದ (ಗ್ರೀಟಿಂಗ್ಸ್‌ ಕಾರ್ಡ್‌) ಒಂದು ಅಪೂರ್ವ ಪದ್ದತಿ ಮುಂದೆ ಇಡೀ ಜಗತ್ತಿನಿನಲ್ಲೇ ಪ್ರಸಾರಗೊಂಡಿತು. ಅಂದಿನ ದಿನಗಳಲ್ಲಿ ಕೈಯಲ್ಲಿ ಸ್ವಲ್ಪ ಹಣ ಇದ್ದ ಶ್ರೀಮಂತ ವರ್ಗದ ಜನರು ಮಾತ್ರ ಶುಭಾಶಯ ಪತ್ರಗಳನ್ನು ಅವರ ಮೆಚ್ಚುಗೆಯ ಅಥವಾ ಅವರ ಕುಟುಂಬದ ಸದಸ್ಯರಿಗೆ, ಮಿತ್ರರಿಗೆ ಅಥವಾ ಅವರ ಮನಸ್ಸಿಗೆ ಯೋಗ್ಯ ಎಂದು ಅನಿಸಿದ ವ್ಯಕ್ತಿಗಳಿಗೆ ಕಳುಹಿಸುವ ರೂಢಿಯನ್ನು ಬೆಳೆಸಿಕೊಂಡಿದ್ದರು.

1840 ರ ತನಕ ಕ್ರಿಸ್ಮಸ್‌ ಶುಭಾಶಯ ಪತ್ರದ ಪರಿಚಯವೇ ಇರಲಿಲ್ಲ. ಇಂಗ್ಲಿಷ್‌ ಕಲಾವಿದ ವಿಲಿಯಂ ಎಡ್ಲಿನ್‌ ಅವರು ತಯಾರಿಸಿದ ಗ್ರೀಟಿಂಗ್‌ ಕಾರ್ಡ್‌ ಲಂಡನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್‌ ಎಂಬ ವಸ್ತು ಸಂಗ್ರಹಾಲಯದಲ್ಲಿದೆ. 1843ರಲ್ಲಿ ಜೆ.ಸಿ.ಹಾಕ್ಸ್‌ಲೇ ಎಂಬ ಕಲಾವಿದ ಸರ್‌ ಹೆನ್ರಿ ಕೋಲೆ ಅವರ ಜತೆ ಸೇರಿ ಮುದ್ರಣದ ಶುಭಾಶಯ ಪತ್ರವನ್ನು ತಯಾರಿಸಿದರು. ಅದರಲ್ಲಿ ‘ಎ ಮೆರ್ರಿ ಕ್ರಿಸ್ಮಸ್‌ ಆ್ಯಂಡ್‌ ಎ ಹ್ಯಾಪಿ ನ್ಯೂ ಇಯರ್‌’ ಎಂಬ ಪದಗಳನ್ನು ಬಳಸಲಾಯಿತು. ಈ ಶುಭಾಶಯ ಪತ್ರ ಆಕರ್ಷಕವಾಗಿತ್ತು.

ಇಂತಹ ಪತ್ರದಲ್ಲಿನ ಒಂದು ಚಿತ್ರದಲ್ಲಿ ಹಬ್ಬದ ಪ್ರಯುಕ್ತ ಎಲ್ಲರೂ ಪ್ರೀತಿಯಿಂದ ಹಂಚಿ ತಿನ್ನುವುದು, ಇನ್ನೊಂದರಲ್ಲಿ ಎಲ್ಲರೂ ಸೇರಿ ಕುಡಿಯುವುದು, ಮಗದೊಂದರಲ್ಲಿ ಮೈಯಲ್ಲಿ ಬಟ್ಟೆ ಇಲ್ಲದವರಿಗೆ ಬಟ್ಟೆ ಕೊಡುವುದು ಹೀಗೆ ಒಂದೊಂದು ಬಗೆಯ ಚಿತ್ರಗಳು ಇಂತಹ ಶುಭಾಶಯ ಪತ್ರಗಳಲ್ಲಿ ಮೂಡಿ ಬಂದಿವೆ.

ಈಗ ಮಾತ್ರ ಇವು ವಿಭಿನ್ನ ರೀತಿ, ರೂಪಗಳಲ್ಲಿವೆ. ಅಂತೂ ಕ್ರಿಸ್ಮಸ್‌ ಹಬ್ಬದ ಸಂಸ್ಕೃತಿ ಸಾರುವ, ಸಂಸ್ಕೃತಿಯನ್ನು ಎತ್ತಿ ಹಿಡಿಯವ ಕ್ರಿಸ್ಮಸ್‌ ಶುಭಾಶಯ ಪತ್ರಗಳು ಕ್ರಿಸ್ಮಸ್‌ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ. ಆದರೆ ಆಧುನಿಕ ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಗ್ರೀಟಿಂಗ್‌ ಕಾರ್ಡ್‌ಗಳ ಮಹತ್ವ ಸ್ವಲ್ಪ ಕಡಿಮೆಯಾಗಿದೆ. ಈಗ ಈಮೇಲ್‌, ಫೇಸ್‌ಬುಕ್‌, ಮೊಬೈಲ್‌ ಫೋನ್‌ನಲ್ಲಿ ವಾಟ್ಸಪ್‌ ಮೂಲಕ ಕ್ರಿಸ್ಮಸ್‌ ಶುಭಾಶಯಗಳ ವಿನಿಮಯ ನಡೆಯುತ್ತದೆ.

ಒಂದು ಕಾಲದಲ್ಲಿ ಕ್ರಿಸ್ಮಸ್‌ ಸಮೀಪಿಸುತ್ತಿದ್ದಂತೆ ಮಾರುಕಟ್ಟೆಯಲ್ಲಿ ಗ್ರೀಟಿಂಗ್‌ ಕಾರ್ಡ್‌ಗಳ ಮಾರಾಟ ಮತ್ತು ಖರೀದಿ ಜೋರಾಗಿ ನಡೆಯುತ್ತಿತ್ತು. ಭರ್ಜರಿ ವ್ಯಾಪಾರ ನಡೆಯುತ್ತಿತ್ತು. ಅಂಚೆ ಕಚೇರಿಯ ಬಾಕ್ಸ್‌ಗಳು ಗ್ರಿಟಿಂಗ್ಸ್‌ಗಳಿಂದ ತುಂಬಿ ತುಳುಕುತ್ತಿತ್ತು. ಅಂಚೆ ಬಟವಾಡೆಯಲ್ಲಿಯೂ ವ್ಯತ್ಯಯ ಉಂಟಾಗುತ್ತಿತ್ತು. ಆದರೆ ಈಗ ಈಮೇಲ್‌ ಯುಗದಲ್ಲಿ ಗ್ರೀಟಿಂಗ್‌ ಕಾರ್ಡ್‌ಗಳ ಪ್ರಮಾಣ ಕಡಿಮೆಯಾಗಿದ್ದರಿಂದ ಅಂಚೆ ಕಚೇರಿಗಳಲ್ಲಿ ಅಂತಹ ಒತ್ತಡಗಳು ಕಂಡು ಬರುತ್ತಿಲ್ಲ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.