ಬದುಕಿಗೆ ಭರವಸೆಯ ಹೊಸ ಹುರುಪನ್ನು ತುಂಬುವ ಕ್ರಿಸ್ ಮಸ್ ಹಬ್ಬ !


Team Udayavani, Dec 25, 2019, 1:12 PM IST

badukige

ಕಣ್ಣು ಮುಚ್ಚಿ ಬಿಡುವುದರೊಳಗೆ ವರ್ಷದ ಕೊನೆಯ ತಿಂಗಳ ಜೊತೆಗೆ ಕ್ರಿಸ್ ಮಸ್ ಹಬ್ಬವು ಬಂದೇ ಬಿಟ್ಟಿತು. ಕ್ರಿಸ್ ಮಸ್ ಎಂದ ಕೂಡಲೇ ಬಗೆಯ ಬಗೆಯ ಅಲಂಕಾರಗಳು, ಕೇಕ್, ಸಿಹಿ ತಿನಿಸುಗಳು, ವೈನ್, ಉಡುಗೊರೆಯನ್ನು ತರುವ ಸಾಂತಾ ಕ್ಲಾಸ್ ಹೀಗೆ ಹಲವು ಚಿತ್ರಣಗಳು ನೆನಪಾಗುವುದು ಸಹಜ. ಇನ್ನು ಮಕ್ಕಳಂತೂ ಈ ಹಬ್ಬದಲ್ಲಿ ಬಹಳ ಸಂಭ್ರಮಿಸುತ್ತಾರೆ. ಗಿಡ್ಡನೆಯ, ಬಿಳಿ ಗಡ್ಡದ, ಮುಖದ ತುಂಬಾ ನಗು ತುಂಬಿದ, ದೊಡ್ಡ ಹೊಟ್ಟೆಯ, ಕೆಂಪು ಟೋಪಿ ಧರಿಸಿದ ಸಾಂತಾಕ್ಲಾಸ್  ಉಡುಗೊರೆಯನ್ನು ತರುತ್ತಾನೆ ಎಂದು ಕಾಯುತ್ತಾ ಕುಳಿತಿರುತ್ತಾರೆ.

ಈ ಹಬ್ಬ ಎಂದರೆ ಕಣ್ಮುಂದೆ ಬರುವುದು ಸಾಲು ಸಾಲು ಕ್ರಿಸ್‌ ಮಸ್ ಟ್ರೀಗಳ ಝಲಕ್, ಬೆಳಕಿನ ಚಿತ್ತಾರ, ಹೊಸ ಬಟ್ಟೆಯನ್ನು ಧರಿಸಿದ ಮಕ್ಕಳು ಮತ್ತು ಯುವಕ-ಯುವತಿಯರು. ಚರ್ಚ್ ಗಳಲ್ಲಿನ ಪ್ರಾರ್ಥನೆ, ಗಂಟೆಗಳ ಸದ್ದು, ಶುಭಾಶಯಗಳ ವಿನಿಮಯ, ಗ್ರೀಟಿಂಗ್ ಕಾರ್ಡ್ ಗಳು, ಮತ್ತು ಕೇಕ್‌ಗಳು. ಇವು  ಹಬ್ಬದ ಮೆರುಗನ್ನು ಬಹಳ  ಹೆಚ್ಚಿಸುತ್ತದೆ.  ಹೇಳಿ ಕೇಳಿ ವರ್ಷದ ಕೊನೆಯ ವಾರದಲ್ಲಿ ಬರುವ ಈ ಹಬ್ಬದ  ಸೊಬಗನ್ನು ಸವಿಯಲು ಕ್ರೈಸ್ತ ಬಾಂಧವರು ವರ್ಷ ಪೂರ್ತಿಯಾಗಿ ಕಾಯುವುನ್ನು ಕಾಣಬಹುದು.  ಕ್ರಿಸ್ ಮಸ್ ಹಬ್ಬದ ಪ್ರತಿಯೊಂದು ಆಚರಣೆಯ ಹಿಂದೆಯೂ ಒಂದೊಂದು ಅರ್ಥವಿದೆ. ಕ್ರಿಸ್‌ಮಸ್ ಟ್ರೀ ಯನ್ನು ಸುಂದರವಾಗಿ ಅಲಂಕರಿಸುವುದರ ಹಿಂದೆ ಬದುಕಿಗೆ  ಸಂದೇಶವನ್ನು ಸಾರುವ ವಿಷಯವು ಅಡಗಿದೆ. ಚಳಿಗಾಲದಲ್ಲಿ ಕ್ರಿಸ್‌ಮಸ್ ಟ್ರೀಗಳು  ಹಸಿರಿನಿಂದ ಕಂಗೊಳಿಸುವ ಕಾರಣ ಹೊಸ ಜೀವನಕ್ಕೆ ಹೊಸ ಭರವಸೆಯನ್ನು ನೀಡುವಂತಾಗಲಿ ಎಂಬ ಅಂಶವನ್ನು ಒಳಗೊಂಡಿದೆ.

ಕ್ರಿಸ್‌ ಮಸ್ ಹಬ್ಬದ ಮತ್ತೊಂದು ವಿಶೇಷತೆ ನಂಬಿಕೆ ವಿಶ್ವಾಸದಿಂದ ಕೂಡಿದ ಮೇಣದ ಬತ್ತಿ. ವಿಶ್ವದ ಬೆಳಕು ಎಂದು ಕರೆಯುವ ಕ್ರಿಸ್ತನ ನೆನಪನ್ನು ಈ ಮೇಣದ ಬತ್ತಿಗಳು ಮೇಳೈಸುತ್ತವೆ ಎಂಬುದು  ಪ್ರತೀತಿ. ಹಿಂದಿನಿಂದಲೂ ಮೇಣದ ಬತ್ತಿಯನ್ನು ಉಪಯೋಗಿಸಿ ಅಲಂಕಾರವನ್ನು ಮಾಡುತ್ತಿದ್ದರು. ಆದರೆ ಈಗ ಆಧುನಿಕತೆಯೆಂಬುದು ಹಬ್ಬಗಳನ್ನು ಪ್ರವೇಶಿಸಿ, ಮೇಣದ ಬತ್ತಿಯ ಬದಲಾಗಿ ದೀಪಗಳ ಬಳಕೆಯನ್ನು ಕಾಣಬಹುದು.

ಈ ಹಬ್ಬದ ಹಿನ್ನಲೆಯನ್ನು ಗಮನಿಸಿದಾಗ ದೇವ  ಪುತ್ರ ಏಸು ಹುಟ್ಟಿದ ದಿನವನ್ನೇ ಕ್ರಿಸ್ ಮಸ್ ಆಗಿ  ಆಚರಿಸುವ  ಪದ್ದತಿ ಜನ್ಮ ತಾಳಿದೆ. ಮಧ್ಯರಾತ್ರಿಯಿಂದಲೇ  ಚರ್ಚ್ ನಲ್ಲಿ ಆಚರಣೆಗಳು ಪ್ರಾರಂಭವಾಗುತ್ತದೆ. ಕ್ರೈಸ್ತ  ಬಾಂಧವರೆಲ್ಲರೂ ಒಟ್ಟುಗೂಡಿ ಪ್ರಾರ್ಥನೆಯನ್ನು ಸಲ್ಲಿಸಿ, ಸಿಹಿತಿಂಡಿಯನ್ನು ಹಂಚುವುದರ ಮುಖೇನ, ಶುಭಾಯಶಗಳ ವಿನಿಮಯವನ್ನು ಮಾಡುತ್ತಾರೆ.

ಈ ಹಬ್ಬದಲ್ಲಿ ಹೆಚ್ಚು ಗಮನ ಸೆಳೆಯುವುದು ಗೋದಲಿ. ಇದು ಮುಖ್ಯವಾಗಿ ಏಸು ಜನನವನ್ನು ಸಾರುತ್ತದೆ. ಮನೆಯಲ್ಲಿ ವಿವಿಧ ಗೊಂಬೆಗಳನ್ನು ಬಳಸಿ, ಇನ್ನು ಕೆಲವರು ಜೀವಂತ ಅಂಶಗಳನ್ನು ಬಳಸಿ,  ಏಸುವಿನ ಜನನವನ್ನು ಸಂಭ್ರಮಿಸುತ್ತಾರೆ.  ಮೇರಿ, ಜೋಸೆಫ್, ಬಾಲ ಏಸು, ಮೇಕೆ, ಜನರು ,ಪ್ರಾಣಿಗಳು ಸೇರಿದಂತೆ ವಿವಿಧ ಬಗೆಯ ಗೋದಲಿಗಳನ್ನು ಸಿದ್ದ ಪಡಿಸುವುದು ವಿಶೇಷವೆನ್ನಬಹುದು.

ಹೀಗೆ ಎಲ್ಲರೂ ಜೊತೆ ಸೇರಿ ಆಚರಿಸುವ ಈ ಹಬ್ಬಕ್ಕೆ ಧರ್ಮಗಳ ಭೇದ ಭಾವವಿಲ್ಲ. ಕೈಸ್ತ ಬಾಂಧವರು ತಮ್ಮ ಹಬ್ಬದ ಕಳೆಯನ್ನು ಹೆಚ್ಚಿಸುವ ಸಲುವಾಗಿ ಇತರ ಧರ್ಮದವರಿಗೆ ಸಿಹಿ ಹಂಚುವುದರ ಮೂಲಕ ಏಸುವಿನ ಜನನದ ದಿನವನ್ನು ಆನಂದಿಸುತ್ತಾರೆ. ವರ್ಷದ ಕೊನೆಯ ವಾರದಲ್ಲಿ ಬರುವ ಈ ಹಬ್ಬವೂ ವಿಶ್ವದೆಡೆಲ್ಲೆ ಹೊಸದೊಂದು ಭಾಷ್ಯಕ್ಕೆ ಸಾಕ್ಷಿಯಾಗುತ್ತದೆ. ಹಬ್ಬದ ಸಡಗರ ಮುಗಿಯುತ್ತಿದ್ದಂತೆ ಅನೇಕ ದೇಶಗಳು ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಕಾಯುತ್ತಿರುತ್ತದೆ. ಒಟ್ಟಿನಲ್ಲಿ ಹೊಸವರ್ಷದ ಮುನ್ನವೇ ಬರುವ ಈ ಹಬ್ಬವೂ ಎಲ್ಲರ ಬದುಕಿಗೆ ಭರವಸೆಯೊಂದಿಗೆ ಹೊಸ ಹುರುಪನ್ನು ತುಂಬುವಂತಾಗಲಿ.

ಸಾಯಿನಂದಾ ಚಿಟ್ಪಾಡಿ

ದ್ವಿತೀಯ ಎಂ.ಸಿ.ಜೆ

ವಿವೇಕಾನಂದ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.