ಸಚಿವ ಸೋಮಣ್ಣ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ : ಈಶ್ವರ್ ಖಂಡ್ರೆ
Team Udayavani, Jan 10, 2020, 3:22 PM IST
ಬೆಂಗಳೂರು: ವಸತಿ ಯೋಜನೆಯ ಬಗ್ಗೆ ಈಗಾಗಲೇ ಧ್ವನಿ ಎತ್ತಿದೆ 16 ಲಕ್ಷ ಮನೆಗಳಿಗೆ ನಮ್ಮ ಸರ್ಕಾರ ಅನುಮತಿ ಕೊಟ್ಟಿತ್ತು 3 ಲಕ್ಷ ಮನೆಗಳು ಇನ್ನೂ ನಿರ್ಮಾಣ ಹಂತದಲ್ಲಿಯೇ ಇವೆ ಆದರೆ ಇಲ್ಲಿಯವರೆಗೆ ಹಣ ಬಿಡುಗಡೆಯಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು,ವಸತಿ ಸಚಿವ ಸೋಮಣ್ಣ 211 ಕೋಟಿ ಬಿಡುಗಡೆ ಅಂತ ಹೇಳ್ತಾರೆ ಆದರೆ ಇನ್ನೂ ಯಾವುದೇ ಹಣ ಬಿಡುಗಡೆಯಾಗಿಲ್ಲ ಬಡವರು ತಾವಿದ್ದ ಜಾಗ ಕೆಡವಿ ಮನೆ ಕಟ್ತಿದ್ದಾರೆ ಬೀದಿಬದಿಯಲ್ಲಿ ಜೀವನ ಸಾಗಿಸಿ ಕಟ್ಟುತ್ತಿದ್ದಾರೆ ನ್ಯಾಯಯುತವಾಗಿ ಬರಬೇಕಾದ ಹಣವೂ ಅವರಿಗೆ ಸಿಕ್ಕಿಲ್ಲ ಇದರ ಬಗ್ಗೆ ಧ್ವನಿ ಎತ್ತಿದರೆ ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂದರು.
ನನ್ನ ಕ್ಷೇತ್ರಕ್ಕೆ 10 ಅಧಿಕಾರಿಗಳನ್ನ ತನಿಖೆಗೆ ಕಳಿಸಿದ್ದಾರೆ ಬಾಲ್ಕಿ ಪುರಸಭೆಗೆ ತನಿಖೆಗೆ ಕಳಿಸಿದ್ದಾರೆ ಸಚಿವ ಸೋಮಣ್ಣ ಉತ್ತಮ ಕೆಲಸ ಮಾಡಿದ್ದಾರೆ ಒಂದು ಕ್ಷೇತ್ರಕ್ಕೆ ತನಿಖೆ ಮಾಡ್ತಿದ್ದಾರೆ 224 ಕ್ಷೇತ್ರಗಳಲ್ಲೂ ತನಿಖೆ ಮಾಡಿಸಿ, ಅಕ್ರಮದ ಬಗ್ಗೆ ನ್ಯಾಯಾಂಗ ತನಿಖೆ ಮಡೆಸಬೇಕು ಬಡವರ ಮನೆ ನಿರ್ಮಾಣ ಸ್ಥಗಿತಗೊಳಿಸಿದರೆ ಹೇಗೆ ಜನರ ಶಾಪ ನಿಮಗೆ ತಟ್ಟದೆ ಬಿಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಸೋಮಣ್ಣ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ದ್ವೇಷದ ರಾಜಕಾರಣ ಮೊದಲು ಕೈಬಿಡಿ ಬಡವರ ಯೋಜನೆಗೆ ಹಣ ಬಿಡುಗಡೆ ಮಾಡಿ ಎಂದರು.