ದೇವತೆ ನೀಡಿದ ವರಗಳು


Team Udayavani, Jan 16, 2020, 5:45 AM IST

GOD

ಒಂದು ಊರಲ್ಲಿ ಒಬ್ಬ ಹುಡುಗನಿದ್ದ. ಚಿಕ್ಕಂದಿನಲ್ಲೇ ಒಳ್ಳೆಯ ಗುಣ ಬೆಳೆಸಿಕೊಂಡಿದ್ದ. ತನಗೆ ಏನಾದರೂ ಸಿಕ್ಕಿದರೆ ಎಲ್ಲರೊಂದಿಗೆ ಹಂಚಿಕೊಳ್ಳುವ ಮನಸ್ಸು ಅವನದು. ಒಂದು ಸಲ ಈ ಹುಡುಗ ದಾರಿಯಲ್ಲಿ ಹೋಗುತ್ತಿದ್ದಾಗ ಮರದ ಮೇಲಿದ್ದ ಹಕ್ಕಿಯೊಂದು ಆರ್ತನಾದ ಮಾಡುವುದು ಕೇಳಿಸಿತು. ಏನೆಂದು ನೋಡಿದರೆ ಗೂಡಿನಲ್ಲಿದ್ದ ಅದರ ಮರಿ ಕೆಳಗೆ ಬಿದ್ದು ಮೇಲೆ ಹೋಗಲಾರದೆ ಒದ್ದಾಡುತ್ತಿತ್ತು. ಹುಡುಗ ಕನಿಕರದಿಂದ ಮರಿಯನ್ನು ಹೂವಿನಂತೆ ಎತ್ತಿ ಮರದ ಮೇಲಿದ್ದ ಗೂಡಿಗೆ ಸೇರಿಸಿ ಬಂದ.

ಆಕಾಶದಲ್ಲಿ ಸಾಗುತ್ತಿದ್ದ ದೇವತೆಯೊಬ್ಬಳು ಹುಡುಗನ ದಯಾಗುಣವನ್ನು ನೋಡಿ ಮೆಚ್ಚಿಕೊಂಡಳು. ಆಕಾಶದಿಂದಲೇ ಅವನನ್ನು ಕರೆದು, “ನಿನ್ನ ಕರುಣೆ ಕಂಡು ಆನಂದವಾಗಿದೆ. ಇದೋ ನಿನಗೊಂದು ದನವನ್ನು ಕೊಡುತ್ತೇನೆ. ಇದರ ಕೆಚ್ಚಲಿನಿಂದ ಹಾಲಲ್ಲ, ಬಂಗಾರದ ನಾಣ್ಯಗಳು ಬರುತ್ತವೆ’ ಎಂದಳು. “ನನ್ನ ನೆರೆಮನೆಯಲ್ಲಿ ಒಬ್ಬ ಕಡು ಬಡವನಿದ್ದಾನೆ. ಇದನ್ನು ಅವನಿಗೆ ಕೊಟ್ಟರೆ ಹಾಲು ಮಾರಾಟದಿಂದ ಜೀವನ ನಡೆಸಲು ಸುಲಭವಾಗುತ್ತದೆ. ದನವನ್ನು ಅವನಿಗೇ ಕೊಡಿ’ ಎಂದ ಹುಡುಗ.

ದೇವತೆ, “ನಿನ್ನ ಈ ಪರೋಪಕಾರೀ ಗುಣದಿಂದಾಗಿ ಸ್ವರ್ಗದ ಒಂದು ಮೆಟ್ಟಿಲನ್ನು ಏರಿದ್ದೀಯಾ. ತಗೋ ನಿನಗೆ ಹಾರುವ ಚಪ್ಪಲಿಯನ್ನು ಕೊಡುತ್ತಿದ್ದೇನೆ. ಇದನ್ನು ಮೆಟ್ಟಿದರೆ ಆಕಾಶದಲ್ಲಿ ಹಾರುತ್ತಾ ಬೇಕಾದಲ್ಲಿಗೆ ಹೋಗಬಹುದು’ ಎಂದಳು. ಹುಡುಗ ಅದನ್ನು ಒಬ್ಬ ಹೆಳವನಿಗೆ ಕೊಡಿಸಿದ. ಹೀಗೆ ದೇವತೆ ಕರುಣಿಸಿದ ಹಲವು ಅಮೂಲ್ಯ ವಸ್ತುಗಳನ್ನು ಬೇರೆಯವರಿಗೆ ಕೊಡಿಸುವಾಗ ಅವನು ಒಂದೊಂದಾಗಿ ಸ್ವರ್ಗದ ಮೆಟ್ಟಿಲನ್ನು ಹತ್ತುತ್ತ ದೇವತೆಯ ಬಳಿಗೆ ತಲಪಬೇಕಿತ್ತು. ಆದರೆ ಅವನಿನ್ನೂ ನಿಂತಲ್ಲೇ ನಿಂತಿದ್ದ. ದೇವತೆ ಅಸಹನೆಯಿಂದ, “ನಿನ್ನ ಊರಿನ ಪ್ರತಿಯೊಬ್ಬನಿಗೂ ನಿನ್ನ ಸಲುವಾಗಿ ಒಳ್ಳೆಯ ವಸ್ತುಗಳನ್ನೆಲ್ಲ ಕೊಟ್ಟೆ. ಆದರೂ ನೀನು ತೃಪ್ತನಾಗಿಲ್ಲ ಅಲ್ಲವೆ? ಮೆಟ್ಟಿಲುಗಳನ್ನೇರುತ್ತ ಮೇಲೆ ಸ್ವರ್ಗಕ್ಕೆ ಬರಲು ನಿನಗಿಷ್ಟವಿಲ್ಲವೆ?’ ಕೇಳಿದಳು.

ಹುಡುಗ ದುಃಖದಿಂದ, “ನನ್ನಿಂದ ಉಪಕಾರ ಪಡೆದ ಎಲ್ಲರೂ ನನ್ನ ಬಳಿಯೇ ನಿಂತಿದ್ದಾರೆ. ನಾನು ಒಂದು ಮೆಟ್ಟಲು ಏರಿದ ಕೂಡಲೇ ನನ್ನನ್ನು ಎಳೆದು ಕೆಳಗೆ ಹಾಕುತ್ತಿದ್ದಾರೆ. ಹೀಗಾಗಿ ಮೇಲೆ ಬರಲು ನನ್ನಿಂದಾಗುತ್ತ ಇಲ್ಲ’ ಎಂದು ಹೇಳಿದ. ದೇವತೆಗೆ ವ್ಯಥೆಯಾಯಿತು. “ಕೃತಘ್ನರಾದ ಮನುಷ್ಯರೇ; ನಿಮಗೆಂದಿಗೂ ಇನ್ನೊಬ್ಬರ ಒಳಿತನ್ನು ಸಹಿಸುವ ಶಕ್ತಿಯಿಲ್ಲ. ಬೇರೆಯವರ ಒಳ್ಳೆಯ ಗುಣ ನೋಡಿ ಕಲಿಯುವುದಿಲ್ಲ. ಮುಂದೆ ಬರುವವರನ್ನು ಕಾಲು ಹಿಡಿದು ಕೆಳಗೆಳೆಯುವ ಪ್ರವೃತ್ತಿಯಿಂದಾಗಿ ತೃಪ್ತಿ ಎಂಬುದು ನಿಮಗೆ ಜೀವನದಲ್ಲಿ ಸಿಗದೇ ಹೋಗಲಿ’ ಎಂದು ಶಪಿಸಿದಳು.

– ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

18-

UV Fusion: ತೇರು ಬೀದಿಗೆ ಬಂದಿದೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.