ರಾಜನಿಗೆ ಮೂರು ಪರೀಕ್ಷೆಗಳು


Team Udayavani, Feb 13, 2020, 5:45 AM IST

1621920610

ಮಂತ್ರಿ, ಸೈನಿಕರೊಂದಿಗೆ ಗುರು ಮಹಂತರ ಡೇರೆಗೆ ಹೋಗಿ, ರಾಜ ಗುರುಗಳನ್ನು ಆಸ್ಥಾನಕ್ಕೆ ಆಹ್ವಾನಿಸಿರುವ ಸಂಗತಿ ತಿಳಿಸಿದ. ಮಹಂತರು “ತನ್ನನ್ನು ನೋಡುವ ಇಚ್ಛೆಯಿದ್ದರೆ ರಾಜನನ್ನೇ ಇಲ್ಲಿಗೇ ಬರಲು ಹೇಳಿ’ ಎಂದರು.

ಕಂಪಲಾಪುರ ಎಂಬ ರಾಜ್ಯವನ್ನು ವೀರಸಿಂಹ ಎಂಬ ರಾಜನು ಆಳುತ್ತಿದ್ದನು. ರಾಜ್ಯವು ಸುಭಿಕ್ಷವಾಗಿತ್ತು. ಪ್ರಜೆಗಳು ನೆಮ್ಮದಿಯಿಂದ ಬದುಕುತ್ತಿದ್ದರು. ಆದರೆ ಇದೇ ಸಮಯದಲ್ಲಿ ರಾಜನ ಓರ್ವ ಸಣ್ಣವಯಸ್ಸಿನವಳೂ, ಸುಂದರಿಯೂ ಆದ ರಾಣಿ ಆಕಸ್ಮಿಕವಾಗಿ ತೀರಿಕೊಂಡುಬಿಟ್ಟಳು. ರಾಜನಿಗೆ ತುಂಬ ದುಃಖವಾಯಿತು. ಇದರಿಂದ ಹೊರಬರಬೇಕೆಂದರೆ ತಾನು ಜ್ಞಾನಿಯಾಗಬೇಕು ಮತ್ತು ರಾಜ್ಯಭಾರ ಮಾಡುತ್ತಲೇ ತಪಸ್ಸು ಮಾಡುತ್ತ ಮಾನವ ಜನುಮದ ಸಾಫ‌ಲ್ಯವನ್ನು ಕಾಣಬೇಕು ಎಂಬ ಇಚ್ಛೆಯುಂಟಾಯಿತು. ಅದಕ್ಕಾಗಿ ಓರ್ವ ಶ್ರೇಷ್ಠ ಗುರುವಿನ ಹುಡುಕಾಟದಲ್ಲಿ ಅವನು ತೊಡಗಿದ.

ಹೀಗಿರುವಾಗಲೇ ರಾಜ್ಯದ ಹೊರವಲಯದಲ್ಲಿ ಶಿವರಾಜ ಮಹಂತ ಎಂಬ ಒಬ್ಬ ಸಂತರು ಬೀಡುಬಿಟ್ಟಿರುವ ಸಂಗತಿ ಅವನ ಕಿವಿಗೆ ಬಿತ್ತು. ಕೂಡಲೆ ರಾಜನು ಅವರನ್ನು ಆಸ್ಥಾನಕ್ಕೆ ಕರೆತರುವಂತೆ ಮಂತ್ರಿಯನ್ನು ಕಳುಹಿಸಿದ. ಮಂತ್ರಿ ಸೈನಿಕರೊಂದಿಗೆ ಮಹಂತರ ಡೇರೆಗೆ ಹೋಗಿ ನಮಸ್ಕಾರ ಮಾಡಿ ರಾಜನ ಕೋರಿಕೆಯನ್ನು ತಿಳಿಸಿದ. ಮಹಂತರು “ತನ್ನನ್ನು ನೋಡುವ ಇಚ್ಛೆಯಿದ್ದರೆ ರಾಜನನ್ನು ಇಲ್ಲಿಗೇ ಬರಲು ಹೇಳಿ’ ಎಂದು ಹೇಳಿದರು.

ಮಂತ್ರಿ ರಾಜನ ಬಳಿ ತೆರಳಿ ಮಹಂತರ ಸಂದೇಶ ಮುಟ್ಟಿಸಿದರು. ರಾಜ ತಾನೊಬ್ಬನೇ ಕುದುರೆಯೇರಿ ಹೊರಟು ಮಹಂತರ ಡೇರೆಯ ಬಳಿಗೆ ಬಂದ. ಹೊರಗೆ ನಿಂತಿದ್ದ ಶಿಷ್ಯಂದಿರಿಗೆ “ಮಹಾರಾಜರು ದರ್ಶನಕ್ಕೆ ಬಂದಿದ್ದಾರೆ ಎಂದು ಗುರುಗಳಿಗೆ ತಿಳಿಸಿ’ ಎಂದು ಪ್ರಾರ್ಥಿಸಿಕೊಂಡ. ಶಿಷ್ಯರು ರಾಜನ ನಿವೇದನೆಯನ್ನು ಗುರುಗಳಿಗೆ ತಿಳಿಸಿದರು. “ರಾಜನನ್ನು ಒಳಗೆ ಕಳಿಸಿ’ ಎಂದರು ಗುರುಗಳು. ರಾಜ ಒಳಗೆ ಪ್ರವೇಶಿಸಿದ. ಅವನು ಮೂರು ಚಿಕ್ಕ ಚಿಕ್ಕ ಬಾಗಿಲುಗಳನ್ನು ದಾಟಿ ಹೋಗಬೇಕಾಗಿತ್ತು.
ರಾಜ ತಲೆಯನ್ನು ಬಗ್ಗಿಸಿಕೊಂಡು ಅದರೊಳಗೆ ತೂರಿ ಬರಬೇಕಾಯಿತು. ಗುರುಗಳ ಕೋಣೆ ಕಿರಿದಾಗಿತ್ತು. ಮೂಲೆಯಲ್ಲಿದ್ದ ಮಂಚದ ಮೇಲೆ ಗುರುಗಳು ಮಲಗಿದ್ದರು. ರಾಜನನ್ನು ಕಂಡ ಗುರುಗಳು ಮಲಗಿದ್ದಲ್ಲಿಂದಲೇ ಹೇಳಿದರು- “ಅದೋ ಅಲ್ಲಿ ಚಾದರ ಇದೆ. ಅದನ್ನು ತಂದು ನನಗೆ ಹೊದೆಸು. ಚಳಿಯಾಗುತ್ತಾ ಇದೆ’. ರಾಜ ಗುರುಗಳ ಮಾತನ್ನು ಪಾಲಿಸಿದ. ಚಾದರವನ್ನು ತಂದು ಗುರುಗಳಿಗೆ ಹೊದಿಸಿದ. ಅನಂತರ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ.

ಸ್ವಲ್ಪ ಸಮಯದ ನಂತರ ಕಣ್ಣುಬಿಟ್ಟ ಗುರುಗಳು ನಗುತ್ತ ಎದ್ದು ಕುಳಿತರು. ಗುರುಗಳಿಗೆ ಆರೋಗ್ಯ ಸರಿಯಿಲ್ಲವೇನೋ ಎಂದುಕೊಂಡಿದ್ದ ರಾಜನಿಗೆ ಅಚ್ಚರಿಯಾಯಿತು. ಗುರುಗಳು “ಕುಳಿತುಕೊ ರಾಜ. ನೀನೀಗ ಶಿಷ್ಯತ್ವ ಪಡೆಯಲು ಯೋಗ್ಯನಾಗಿದ್ದೀಯೆ. ಜ್ಞಾನವನ್ನು ಪಡೆಯುವ ಅರ್ಹತೆ ಪ್ರಾಪ್ತವಾಗಿದೆ. ನಮ್ಮ ಸೇವೆಗೂ ಒಬ್ಬ ಶಿಷ್ಯ ಬೇಕಾಗಿತ್ತು!’ ಎಂದು ದೊಡ್ಡದಾಗಿ ನಕ್ಕರು! “ಹುಷಾರಿಲ್ಲ ಎಂದಿರಿ?’ ರಾಜ ಕೇಳಿದ. “ಹಾಗೇನಿಲ್ಲ. ನಿನಗೆ ಮೂರು ಪರೀಕ್ಷೆಗಳನ್ನು ಒಡ್ಡಿದ್ದೆ. ಆ ಮೂರರಲ್ಲಿಯೂ ನೀನು ಉತ್ತೀರ್ಣನಾಗಿರುವೆ. ನಿಜವಾಗಿಯೂ ಶಿಷ್ಯನಲ್ಲಿ ಈ ಮೂರು ಗುಣಗಳು ಇರಬೇಕು. ಅವನೇ ಅರ್ಹನಾದ ಶಿಷ್ಯ. ಅದಾವುದೆಂದರೆ ಗುರುವಿನ ಬಳಿಗೇ ಶಿಷ್ಯನು ಹೋಗಬೇಕು, ಅದಕ್ಕೇ ನಿನ್ನನ್ನೇ ಇಲ್ಲಿಗೆ ಬರಹೇಳಿದ್ದು. ಎರಡನೆಯ ಗುಣ ದೇವರು, ಗುರು, ಹಿರಿಯರ ಬಳಿಗೆ ಹೋಗುವಾಗ, ಅಹಂಕಾರವನ್ನು ಕಳೆದುಕೊಂಡು ತಲೆತಗ್ಗಿಸಿ ವಿನಯಶೀಲತೆಯಿಂದ ಹೋಗಬೇಕು. ಈ ಕಾರಣಕ್ಕೇ ದೇಗುಲದ ಬಾಗಿಲು ಗಿಡ್ಡಕ್ಕಿರುತ್ತದೆ. ನೀನು ತಗ್ಗಿ ಬಗ್ಗಿ ಬಂದೆ. ಶಿಷ್ಯನಾದವನು ಗುರುಸೇವೆ ಮಾಡಬೇಕು. ನೀನು ರಜಾಯಿ ಹೊದೆಸಿದೆ. ಸೇವೆ ಮಾಡುವ ಶ್ರದ್ಧೆ- ಪ್ರೀತಿ ನಿನಗಿದೆಯೆಂದು ರುಜುವಾತುಪಡಿಸಿದೆ’ ಎಂದರು. ರಾಜಾ ವೀರಸಿಂಹನಿಗೆ ಸಂತರ ಮಾತುಗಳಿಂದ ಸಂತಸವಾಯಿತು. ಮಹಂತ ಶಿವರಾಜರ ಶಿಷ್ಯತ್ವ ಸ್ವೀಕರಿಸಿ ರಾಜ ಜ್ಞಾನಿಯಾದ. ದಕ್ಷತೆಯಿಂದ ರಾಜ್ಯವನ್ನು ಆಳಿದ.

– ವನರಾಗ ಶರ್ಮಾ

ಟಾಪ್ ನ್ಯೂಸ್

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.