ಕೋಟಿಕುಳಂ ರೈಲ್ವೇ ಮೇಲ್ಸೇತುವೆ ಕಾರ್ಯ ಸ್ಥಗಿತ

ಕೇರಳ ಸರಕಾರದ ಪಾಲು ಶೇ.50 ವೆಚ್ಚ ನೀಡದಿರುವುದು ಕಾರಣ: ಶ್ರೀಕಾಂತ್‌

Team Udayavani, Feb 20, 2020, 10:50 PM IST

20KSDE1

ಕಾಸರಗೋಡು: ಕೋಟಿಕುಳಂ ರೈಲ್ವೇ ಮೇಲ್ಸೇತುವೆಯ ನಿರ್ಮಾಣ ಕಾರ್ಯ ಸ್ಥಗಿತಗೊಳ್ಳಲು ಕಾರಣ ನಿರ್ಮಾಣದ ಶೇ. 50 ವೆಚ್ಚವನ್ನು ರಾಜ್ಯ ಸರಕಾರವು ನೀಡದಿರುವುದೇ ಕಾರಣವೆಂದು ಬಿ.ಜೆ.ಪಿ.ಜಿಲ್ಲಾಧ್ಯಕ್ಷ,ನ್ಯಾಯವಾದಿ ಕೆ. ಶ್ರೀಕಾಂತ್‌ ಆರೋಪಿಸಿದ್ದಾರೆ.

2005- 2006ರ ಆರ್ಥಿಕ ವರ್ಷದಲ್ಲಿ ಪ್ರಾರಂಭಗೊಳ್ಳಬೇಕಾದ ನಿರ್ಮಾಣ ಕಾರ್ಯ ಇದುವರೆಗೂ ಮುಂದೂಡಲು ರಾಜ್ಯ ಸರಕಾರದ ಅನಾಸ್ಥೆಯೇ ಪ್ರಮುಖ ಕಾರಣವೆಂದು ಶ್ರೀಕಾಂತ್‌ ತಿಳಿಸಿದರು. ಮೇಲ್ಸೇತುವೆಯ ನಿರ್ಮಾಣ ಕಾರ್ಯಕ್ಕೆ ತಗಲುವ ವೆಚ್ಚದಲ್ಲಿ ಶೇ. 50‌ಕ್ಕಿಂತ ಹೆಚ್ಚು ಕೇಂದ್ರ ರೈಲ್ವೇ ಇಲಾಖೆ ಭರಿಸುತ್ತದೆ. ಬಾಕಿ ಬರುವಂತಹ ವೆಚ್ಚವನ್ನು ರಾಜ್ಯ ಸರಕಾರ ಭರಿಸಬೇಕಾದದ್ದು. ಈ ಮೊತ್ತವನ್ನು ರೈಲ್ವೇಗೆ ರಾಜ್ಯ ಸರಕಾರವು ಇದುವರೆಗೂ ಹಸ್ತಾಂತರಿಸಲಿಲ್ಲ. 2005-2006ರ ಆರ್ಥಿಕ ವರ್ಷದಿಂದಲೇ ಕೋಟಿಕುಳಂ ರೈಲ್ವೇ ಮೇಲ್ಸೇತುವೆ ನಿರ್ಮಾಣ ಕಾರ್ಯಕ್ಕಾಗಿ ರೈಲ್ವೇ ಇಲಾಖೆ ಸಜ್ಜಾಗಿತ್ತು. 2010-2011ರ ಆರ್ಥಿಕ ವರ್ಷದಿಂದ ರೈಲ್ವೇ 5.47 ಕೋಟಿ ರೂಪಾಯಿ ನಿಗಾ ಇರಿಸಿತ್ತು. ಆದರೆ ರಾಜ್ಯ ಸರಕಾರವು ಇದಕ್ಕೆ ಪೂರಕವಾದ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ.

ನಿಜಸ್ಥಿತಿ ಇದಾದುದರಿಂದ ಮೇಲ್ಸೇ ತುವೆಯ ನಿರ್ಮಾಣದ ಎಲ್ಲ ಮೊತ್ತವನ್ನು ಹಾಗೂ ಖರ್ಚನ್ನು ರಾಜ್ಯ ಸರಕಾರವು ಭರಿಸಬೇಕು. ಅದಕ್ಕಾಗಿ 19 ಕೋಟಿ ರೂಪಾಯಿ ರಾಜ್ಯ ಸರಕಾರ ನಿಗಾ ಇರಿಸಲಾಗಿದೆ ಎಂದೂ ಇದು ರೈಲ್ವೇಯ ತಾಂತ್ರಿಕ ಕಾರಣಗಳಿಂದಾಗಿ ನಿರ್ಮಾಣ ಕಾರ್ಯಗಳನ್ನು ಪ್ರಾರಂಭಗೊಳಿಸಲು ಸಾಧ್ಯವಾಗಿಲ್ಲವೆಂದು ಉದುಮ ಶಾಸಕ ಕೆ. ಕುಂಞಿರಾಮನ್‌ ಅವರ ಆರೋಪ ಆಧಾರ ರಹಿತವಾಗಿದೆ ಎಂದು ಶ್ರೀಕಾಂತ್‌ ವ್ಯಕ್ತಗೊಳಿಸಿದರು.

ಅಪ್ರೋಚ್‌ ರೋಡ್‌ ಕಾಮ ಗಾರಿ ನಿರ್ಮಿಸಬೇಕಾದದ್ದು ರಾಜ್ಯ ಸರಕಾ ರದ ಹೊಣೆಗಾರಿಕೆಯಾಗಿದ್ದು ಆ ಕೆಲಸ ಕಾರ್ಯಗಳನ್ನು ಇನ್ನೂ ಪ್ರಾರಂಭಗೊಳಿ ಸಲಿಲ್ಲ. ರಾಜ್ಯ ಸರಕಾರದ ಅಡಚಣೆಗಳನ್ನು ಮರೆಯಾಗಿರಿಸಿಕೊಂಡು ಉದುಮ ಶಾಸಕರು ಅಪಪ್ರಚಾರ ನಡೆಸುತಿದ್ದಾರೆ. ರೈಲ್ವೇ ಮೇಲ್ಸೇತುವೆಯ ಕೆಲಸ ಕಾರ್ಯಗಳಿಗೆ ಅಡಚಣೆಗಳನ್ನು ಉಂಟುಮಾಡಿದ್ದಲ್ಲಿ ರಾಜ್ಯ ಸರಕಾರಕ್ಕೆ ವಿರುದ್ಧವಾಗಿ ಬೃಹತ್‌ ಪ್ರತಿಭಟನೆಗಳಿಗೆ ನೇತೃತ್ವ ನೀಡುವೆವು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

2018-2019
ವರ್ಷದಲ್ಲಿ
2018-2019 ವರ್ಷದಲ್ಲಿ 16.70 ಕೋಟಿ ರೂಪಾಯಿ ನಿರ್ಮಾಣ ವೆಚ್ಚಕ್ಕಾಗಿ ನಿಗದಿಪಡಿಸಿತ್ತು. ಇದಕ್ಕೆ ದೇಶೀಯ ರೈಲ್ವೇ ಸುರಕ್ಷಾ ನಿಧಿಯಿಂದ 5.31 ಕೋಟಿ ರೂಪಾಯಿಯನ್ನು ಇರಿಸಲಾಗಿತ್ತು. ನಿರ್ಮಾಣ ಮೊತ್ತದ ರಾಜ್ಯ ಸರಕಾರದ ಪಾಲು 5.47 ಕೋಟಿ ರೊ. ರೈಲ್ವೇಗೆ ಹಸ್ತಾಂತರಿಸಬೇಕಾಗಿತ್ತು. ಆದರೆ ಇದಕ್ಕಾಗಿ ಎಡರಂಗ ಸರಕಾರ ತಯಾರಾಗಲಿಲ್ಲ. ಯೋಜನೆಯು ಜಾರಿಗೊಳಿಸಲು 2005-2006ರಿಂದ 2018-2019ರ ವರೆಗೆ ನಿರ್ಮಾಣ ಮೊತ್ತವನ್ನು ಇರಿಸಲಾಗಿದ್ದು ರಾಜ್ಯ ಸರಕಾರದ 50 ಶೇಕಡಾ ಪಾಲು ನೀಡದುದರಿಂದ ನಿರ್ಮಾಣ ಕಾರ್ಯಗಳು ನಡೆಯಲಿಲ್ಲ. ಇನ್ನು ನಿರ್ಮಾಣ ನಡೆಯಲು ಎಸ್ಟಿಮೇಟ್‌ ನವೀಕರಿಸಬೇಕಾಗಿದೆ. ರಾಜ್ಯ ಸರಕಾರದ ಪಾಲನ್ನು ರೈಲ್ವೇಗೆ ನೀಡಿದರೆ ನಿರ್ಮಾಣ ಕಾರ್ಯ ಕೈಗೊಳ್ಳ‌ಲು ರೈಲ್ವೇ ಸಿದ್ಧವಾಗಿದೆ.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.