ಸ್ಚಚ್ಛತೆ ಮರೆತ ಕಾರಟಗಿ ಪುರಸಭೆ
Team Udayavani, Mar 2, 2020, 4:09 PM IST
ಕಾರಟಗಿ: ಸ್ಚಚ್ಛತೆಗೆ ಆದ್ಯತೆ ನೀಡಿ ಎಂದು ದಿನನಿತ್ಯ ಪಟ್ಟಣದ ಜನತೆಗೆ ತಿಳಿಹೇಳುವ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಕಚೇರಿಯಲ್ಲೇ ಸ್ಚಚ್ಛತೆ ಕಾಪಾಡುವುದನ್ನು ಮರೆತಿದ್ದಾರೆ.
ಹೌದು. ಪುರಸಭೆ ಕಚೇರಿ ಹಿಂಬದಿಯಲ್ಲಿ ಸಿಬ್ಬಂದಿಗಾಗಿ ನಿರ್ಮಿಸಿದ ಶೌಚಾಲಯ, ಮೂತ್ರಾಲಯದ ನೀರು ಒಳಚರಂಡಿ ಸೇರುತ್ತಿಲ್ಲ. ಶೌಚಾಲಯಗಳ ಕೊಳಚೆ ನೀರು ಕಚೇರಿ ಹಿಂಬದಿಯಲ್ಲಿ ಮಡುಗಟ್ಟಿ ನಿಂತ್ತಿದ್ದು, ಸುತ್ತಲಿನ ಪರಿಸರದಲ್ಲಿ ದುರ್ವಾಸನೆ ಬೀರುತ್ತಿದೆ. ಅಲ್ಲದೇ ಮಡುಗಟ್ಟಿ ನಿಂತ ನೀರು ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗುತ್ತಿದ್ದು, ಖಾಸಗಿ ನಿವೇಶನಗಳಿಗೆ ತೆರಳುವ ರಸ್ತೆಗೆ ತಲುಪಿದೆ. ಶೌಚಾಲಯದ ಕೊಳಚೆ ನೀರು ಚರಂಡಿಗೆ ಸೇರುವಂತೆ ಅಥವಾ ಇಂಗು ಗುಂಡಿ ವ್ಯವಸ್ಥೆಯನ್ನೂ ಮಾಡಿಲ್ಲ.
ನಿತ್ಯ ಬಳಕೆ ಮಾಡಿದ ನೀರು ನೇರವಾಗಿ ನೆಲಕ್ಕೆ ಬಿದ್ದು ರಸ್ತೆಗೆ ಹರಿಯುತ್ತಿದೆ. ಕೊಳಚೆ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಇವೆ. ಅಲ್ಲದೇ ದುರ್ವಾಸನೆ ಅಸಹನೀಯ ಎನಿಸಿದೆ. ಕಚೇರಿ ಹಿಂದಿರುವ ಖಾಸಗಿ ನಿವೇಶನಗಳನ್ನು ಸುತ್ತಮುತ್ತಲಿನ ಜನ ಬಯಲು ಶೌಚಾಲಯಕ್ಕೆ ಬಳಸುತ್ತಿದ್ದಾರೆ.
ಪುರಸಭೆ ಕಚೇರಿಯ ಹಿಂಬದಿಯಲ್ಲಿ ಹಲವು ಮನೆಗಳು ನಿರ್ಮಾಣವಾಗಿವೆ. ಆದರೆ ಬೆಳಗಿನ ಜಾವ ಹಾಗೂ ಸಂಜೆ ಕತ್ತಲಾದ ನಂತರ ಮಹಿಳೆಯರು ಶೌಚಕ್ಕೆ ತೆರಳುತ್ತಿದ್ದಾರೆ. ಇದೆಲ್ಲ ಪುರಸಭೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ತಿಳಿದಿದ್ದರು ಕೂಡ ಕಚೇರಿ ಸುತ್ತಲಿನ ಪರಿಸರ ಸ್ವತ್ಛತೆಗೆ ಆದ್ಯತೆ ನೀಡುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ. ಪಟ್ಟಣದ 21ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಪುರಸಭೆ ಸದಸ್ಯರು ಕಾರಟಗಿ ಪುರಸಭೆಯ ಪ್ರಥಮ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದಾರೆ. ಆದರು ಕೂಡ ವಾರ್ಡ್ ಸ್ಚಚ್ಛತೆಯ ಬಗ್ಗೆ ಗಮನಹರಿಸಿಲ್ಲ ಎನ್ನುತ್ತಾರೆ ವಾರ್ಡ್ ಜನತೆ. ಕೊಳಚೆ ನೀರು ರಸ್ತೆಗೆ ಹರಿಬಿಡಬೇಡಿ ಎಂದು ಹೇಳುವ ಪುರಸಭೆ ಸಿಬ್ಬಂದಿ ತಮ್ಮ ಕಚೇರಿಯಲ್ಲಿ ಸ್ಚಚ್ಛತೆಗೆ ಮೊದಲ ಆದ್ಯತೆ ನೀಡಿ, ನಂತರ ಸಾರ್ವಜನಿಕರಲ್ಲಿ ಸ್ವತ್ಛತೆ ಕುರಿತು ಅರಿವು ಮೂಡಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪುರಸಭೆಗೆ ಸಂಬಂಧಿಸಿದ ಶೌಚಾಲಯಗಳ ಕೊಳಚೆ ನೀರು ಹರಿಬಿಡದಂತೆ ಅಗತ್ಯ ಕ್ರಮಕೈಗೊಳ್ಳಲು ಸಿಬ್ಬಂದಿಗೆ ಹಲವಾರು ಬಾರಿ ಸೂಚಿಸಿದ್ದೇನೆ. ಆದರೂ ಕೂಡ ಸಿಬ್ಬಂದಿ ನಿರ್ಲಕ್ಷತನದಿಂದ ಪರಿಸರ ಹಾಳಾಗುತ್ತಿದೆ. – ಅನ್ನಪೂರ್ಣಮ್ಮ ಬೂದಿ, ಪುರಸಭೆ ಮಾಜಿ ಅಧ್ಯಕ್ಷ
ಪುರಸಭೆ ಹಿಂಬದಿಯಲ್ಲಿ ನಿರ್ಮಾಣವಾದ ಕೊಳಚೆ ಪುರಸಭೆಯ ಶೌಚಾಲಯಗಳದ್ದಲ್ಲ, ಆ ಬಗ್ಗೆ ನನಗೆ ಗೊತ್ತಿಲ್ಲ. ಅಲ್ಲಿ ನೀರು ಎಲ್ಲಿಂದ ಬರುತ್ತಿದೆಯೋ ನಮಗೆ ಗೊತ್ತಿಲ್ಲ. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲು ಪುರಸಭೆ ಸಿಬ್ಬಂದಿಗೆ ಸೂಚಿಸುತ್ತೇನೆ. – ಅಕ್ಷತಾ, ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕಿ
-ದಿಗಂಬರ ಕುರಡೇಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
MUST WATCH
ಹೊಸ ಸೇರ್ಪಡೆ
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ
Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ
ಪ್ರಜ್ವಲ್ ರೇವಣ್ಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಮಹಿಳಾ ಕಾಂಗ್ರೆಸ್ ಘಟಕ ಆಗ್ರಹ
ಉತ್ತರದವರು ಸಿಎಂ ಆಗಲು ಬಿಜೆಪಿ ಗೆಲ್ಲಿಸಿ; ಬಸನಗೌಡ ಪಾಟೀಲ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ