ಸೌಲಭ್ಯ ವಂಚಿತ ನಂದನವನ ಪಾರ್ಕ್‌

ದೊಡ್ಡಣಗುಡ್ಡೆಯ ಪಾರ್ಕ್‌ನಲ್ಲಿ ವಿರಮಿಸಲು ಆಸನಗಳೇ ಇಲ್ಲ!

Team Udayavani, Mar 5, 2020, 5:52 AM IST

ಸೌಲಭ್ಯ ವಂಚಿತ ನಂದನವನ ಪಾರ್ಕ್‌

ಉಡುಪಿ: ದೊಡ್ಡಣಗುಡ್ಡೆಯ ಕರ್ನಾಟಕ ಜನತಾ ಕಾಲನಿಯಲ್ಲಿರುವ ನಂದನವನ ಪಾರ್ಕ್‌ನಲ್ಲಿ ವಾಕಿಂಗ್‌ ಟ್ರ್ಯಾಕ್‌ ಬಿಟ್ಟರೆ ಯಾವುದೇ ಸುಸಜ್ಜಿತ ವ್ಯವಸ್ಥೆ ಇಲ್ಲ. ಖಾಲಿ ಮೈದಾನದಂತಿರುವ ಈ ಪಾರ್ಕ್‌ಗೆ ಭೇಟಿ ನೀಡುವವರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕೂಡ ಇಲ್ಲದಿರುವುದರಿಂದ ಭೇಟಿ ನೀಡುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ.

ದೊಡ್ಡಣಗುಡ್ಡೆ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು ಬೆಳಗ್ಗೆ, ಸಾಯಂಕಾಲ ಸಮಯಗಳಲ್ಲಿ ಈ ಪಾರ್ಕ್‌ಗೆ ಭೇಟಿ ಕೊಡುತ್ತಾರೆ. ಇತ್ತೀಚೆಗೆ ಪಾರ್ಕ್‌ ಒಂದೊಂದೇ ಮೂಲಭೂತ ಸೌಕರ್ಯಗಳಿಂದ ವಿಮುಖವಾಗುತ್ತಿದ್ದಂತೆ ಭೇಟಿ ನೀಡುವವರ ಸಂಖ್ಯೆಯೂ ಕಡಿಮೆಯಾಯಿತು ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.

ತೆರವು
2ವರ್ಷಗಳ ಹಿಂದೆ ಪಾರ್ಕ್‌ಗೆ ಇಂಟರ್‌ಲಾಕ್‌ ಅಳವಡಿಸುವ ಸಂದರ್ಭದಲ್ಲಿ ಆಸನ, ಸೇರಿದಂತೆ ಕಾರಂಜಿ ಹಾಗೂ ಮಕ್ಕಳ ಆಟೋಟ ಉಪಕ ರಣಗಳನ್ನು ತೆರವುಗೊಳಿಸಲಾಗಿತ್ತು. ಹಿಂದೆ ಇಲ್ಲಿನ ಸ್ಥಳೀಯರು ಸ್ವಆಸಕ್ತಿಯಿಂದ ಪಾರ್ಕ್‌ನ ಅಭಿವೃದ್ಧಿ ಮಾಡಿ ಸಂಪೂರ್ಣ ನೈಸರ್ಗಿಕ ರೀತಿಯಲ್ಲಿ ಮಣ್ಣಿನ ಟ್ರ್ಯಾಕ್‌, ಮಕ್ಕಳ ಆಟದ ಸಲಕರಣೆ, ವಯಸ್ಕರಿಗೆ ವ್ಯಾಯಾಮದ ಸೈಕಲ್‌ ಮೊದಲಾದವುಗಳನ್ನು ಜೋಡಿಸಿ ಪಾರ್ಕ್‌ನ ಸೌಂದರ್ಯವನ್ನು ದ್ವಿಗುಣಗೊಳಿಸಿದ್ದರು. ಆದರೆ ಪಾರ್ಕ್‌ನ್ನು ಮೇಲ್ದರ್ಜೆಗೆ ಏರಿಸುವ ಭರದಲ್ಲಿ ಆಡಳಿತ ಇದ್ದ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಬದಲು ಅವುಗಳನ್ನು ತೆರವು ಮಾಡಿದೆ. ಸದ್ಯ ಈ ಪಾರ್ಕ್‌ನಲ್ಲಿ ಏನೂ ಇಲ್ಲದಂತೆ ಆಗಿರುವುದು ಸ್ಥಳೀಯರಲ್ಲಿ ಬೇಸರ ತರಿಸಿದೆ.

ಖಾಲಿಖಾಲಿ
ಬರೇ ವಾಕಿಂಗ್‌ ಟ್ರ್ಯಾಕ್‌ ಬಿಟ್ಟರೆ ಇಲ್ಲಿ ಬೇರೇನೂ ಕಂಡುಬರುವುದಿಲ್ಲ. ಪಾರ್ಕ್‌ನ ಪ್ರವೇಶಕ್ಕಿರುವ 2 ಬದಿಯ ಪ್ರವೇಶ ದ್ವಾರಗಳಲ್ಲಿ ಹಿಂಬದಿಯ ದ್ವಾರದ ಗೇಟು ಮುರಿದು ಹಗ್ಗದಲ್ಲಿ ಕಟ್ಟಲಾಗಿದೆ.ಇದರಿಂದ ದನ ಮೊದಲಾದ ಪ್ರಾಣಿಗಳ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟಂತಾಗಿದೆ. ಸದ್ಯ ಪಾರ್ಕ್‌ನಲ್ಲಿರುವ ಮರಗಳನ್ನು ಸಂರಕ್ಷಿಸುವ ಮೂಲಕ, ಮಕ್ಕಳು, ಹೆತ್ತವರು ಹಿರಿಯರಿಗೆ ಅನುಕೂಲವಾಗುವ ವ್ಯವಸ್ಥೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಕೈಗೊಂಡು, ಮತ್ತೆ ಹೊಸರೂಪದಲ್ಲಿ ಈ ಪಾರ್ಕ್‌ ಸದ್ಬಳಕೆಗೆ ಬರಲಿ ಎಂಬುದು ಸ್ಥಳೀಯರ ಆಗ್ರಹ.

ಅಧಿಕಾರಿಗಳ ಗಮನಕ್ಕೆ ತರಲಾಗಿದೆ
ಪಾರ್ಕ್‌ನಲ್ಲಿ ಹಿಂದೆ ಗಾರ್ಡನ್‌ ಸೇರಿದಂತೆ ಕಾರಂಜಿಯಂತಹ ವ್ಯವಸ್ಥೆ ಇತ್ತು ಹೊಸ ಕಾಮಗಾರಿಯ ಸಮಯದಲ್ಲಿ ಹಿಂದೆ ಇದ್ದ ಸೌಲಭ್ಯಗಳನ್ನು ಕಳೆದುಕೊಂಡಿವೆೆ. ಇದನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅನುದಾನ ಬಂದ ಮೇಲೆ ಗಾರ್ಡನ್‌ ಸೇರಿದಂತೆ ಶೆಟಲ್‌ ಕೋರ್ಟ್‌ ನಿರ್ಮಾಣದ ಯೋಜನೆ ಇದೆ.
-ಪ್ರಭಾಕರ್‌ ಪೂಜಾರಿ,
ನಗರಸಭಾ ಸದಸ್ಯರು, ದೊಡ್ಡಣಗುಡ್ಡೆ

ಗಮನ ಹರಿಸಲಿ
ಇರುವ ವ್ಯವಸ್ಥೆಯನ್ನು ಅಭಿವೃದ್ಧಿ ಗೊಳಿಸುವ ಬದಲು ಹೊಸ ಯೋಜನೆಯಿಂದ ಪಾರ್ಕ್‌ ನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಸಾಧ್ಯವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಗಮನ ಹರಿಸುವಂತಾಗಲಿ.
-ಎಂ.ಎನ್‌. ನಾಯಕ್‌,
ಸ್ಥಳೀಯರು

-ಕಾರ್ತಿಕ್‌ ಚಿತ್ರಾಪುರ

ಟಾಪ್ ನ್ಯೂಸ್

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.