ಮೇವಿಲ್ಲದೆ ಕೃಷಿಕರ ಪರದಾಟ
Team Udayavani, Mar 8, 2020, 4:19 PM IST
ಅಂಕೋಲಾ: ಕಳೆದ ಆಗಸ್ಟ್ನಲ್ಲಿ ನಡೆದ ಭೀಕರ ನೆರೆ ಹಾವಳಿಯಿಂದ ಕೃಷಿ ಭೂಮಿಯಲ್ಲಿ ವಾರಗಳ ಕಾಲ ನೀರು ತುಂಬಿಕೊಂಡು ಭತ್ತದ ಬೆಳೆ ಸಂಪೂರ್ಣ ನೆಲಕ್ಕಚ್ಚಿರುವ ಪರಿಣಾಮ ರೈತರ ದನ ಕರುಗಳಿಗೆ ಮೇವಿಲ್ಲದೆ ರೈತರು ಪರದಾಡುವ ಪರಿಸ್ಥಿತಿ ಬಂದೊದಗಿದೆ.
ತಾಲೂಕಿನ ಶಿರೂರು, ಬೆಳಸೆ, ಚಂದುಮಠ, ತೆಂಕನಾಡ ಭಾಗದ ದನ ಕರುಗಳಿಗೆ ಮೇವಿಲ್ಲದೆ ಬರಡಾಗುತ್ತಿದೆ. ರೈತರ ಬತ್ತದ ಬೆಳೆ ನೆರೆಯಿಂದ ನಾಶವಾಗಿದ್ದು ಸಾಕಿರುವ ಜಾನುವಾರುಗಳ ಸಂರಕ್ಷಣೆಗೆ ಜುಲೈ 2020ರ ಕೊನೆಯವರೆಗೆ ಅವಶ್ಯವಿರುವ ಮೇವಿನ ಸಂಗ್ರಹಣೆ ಮಾಡಿ ಇಡಲು ಸಾಧ್ಯವಾಗಲಿಲ್ಲ. ಈಗ ಈ ಭಾಗದಲ್ಲಿ ಜಾನುವಾರುಗಳಿಗೆ ಅವಶ್ಯವಿರುವ ಮೇವು ಒದಗಿಸಿಕೊಳ್ಳುವ ಯಾವುದೇ ಮೂಲವು ಇಲ್ಲ. ಸಂಬಂಧಿಸಿದ ಅಧಿಕಾರಿಗಳು ನೆರೆ ಬಂದಿರುವ ಸಂದರ್ಭದಲ್ಲಿ ಬೆಳೆ ನಾಶವಾದ ಮತ್ತು ಜಾನುವಾರುಗಳ ಪರಶೀಲನೆ ನಡೆಸಿದ್ದಾರೆ.
ಪರಿಶೀಲನೆ ನಡೆಸಿದ ಬಳಿಕ ವರದಿಯನ್ನು ಸರಕಾರಕ್ಕೆ ಸರಿಯಾದ ಸಮಯದಲ್ಲಿ ಸಲ್ಲಿಸದೆ ಈ ಬಾಗದ ಹಲವು ಕುಟುಂಬಗಳ ಹೆಸರಗಳೆ ಇಲ್ಲವಾಗಿದೆ. ಈ ಮಧ್ಯೆ ದನಕರುಗಳಿಗೆ ಮೇವು ನಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಮಾರ್ಚ ಆರಂಭವಾದರು ಮೇವಿನ ಮಾತು ಎತ್ತುತ್ತಿಲ್ಲ. ರೈತರು ಕಚೇರಿಗೆ ಅಲೆದಾಡಿದರು ಯಾವ ಅಧಿಕಾರಿಗಳೂ ಸರಿಯಾಗಿ ಸ್ಪಂದಿಸುತ್ತಿಲ್ಲವೆ ಎಂದು ರೈತರು ದೂರಿದ್ದಾರೆ. ದನಕರುಗಳ ಸಂರಕ್ಷಣೆಗೆ ಅವಶ್ಯವಿರುವ ಮೇವು ಪೂರೈಸುವ ವ್ಯವಸ್ಥೆಯನ್ನು ಸರಕಾರದಿಂದ ಈ ಕೂಡಲೆ ಪ್ರಾರಂಭಿಸಿ ಎಂಬುದು ಕೃಷಿಕರ ಅಳಲಾಗಿದೆ.
ಈ ಹಿಂದೆ ಮಾಡಿದ ವರದಿ ಆಧಾರದಲ್ಲಿ ರೈತರ ಕುಟುಂಬಗಳ ಮತ್ತು ಜಾನುವಾರುಗಳ ಪರಶೀಲನೆ ಮತ್ತೂಮ್ಮೆ ನಡೆಸಿ ಕುಟುಂಬಕ್ಕೆ ಯೋಗ್ಯ ಪರಿಹಾರವನ್ನು ಶೀಘ್ರದಲ್ಲಿಯೆ ಮಂಜೂರು ಮಾಡುವುದರೊಂದಿಗೆ ತಕ್ಷಣ ದನಕರುಗಳಿಗೆ ಮೇವು ಪೂರೈಸಲು ಆಗ್ರಹಿಸಿದ್ದಾರೆ.
ನಮ್ಮ ಗದ್ದೆಯಲ್ಲಿ ನೆರೆಯಿಂದ ನೀರು ತುಂಬಿದ ಪರಿಣಾಮ ಬೆಳೆದಿರುವ ಭತ್ತ ಎಲ್ಲವು ಕೊಳೆತು ಹೋಗಿದೆ. ನಮ್ಮ ದನಗಳಿಗೆ ಬೇಕಾಗುವ ಹುಲ್ಲು ಸಿಗದಂತಾಗಿದೆ. ಅಧಿಕಾರಿಗಳು ಇಲ್ಲಿಗೆ ಬಂದಾಗ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು. ಮಾರ್ಚ್ ಬಂದರು ಮೇವಿಲ್ಲದೆ ದನಗಳು ಬರಡಾಗುತ್ತಿವೆ. ದಿನಗೂಲಿ ಮಾಡಿ ಜೀವನ ನಡೆಸುವ ನಮಗೆ ಮೇವು ಖರೀದಿ ಮಾಡಲು ನಮ್ಮಿಂದ ಸಾಧ್ಯವಾಗದು. -ಮಾಣಿ ಸಣ್ಣು ಗೌಡ, ಗ್ರಾಮಸ್ಥ
ಈಗಾಗಲೇ ಸರಕಾರದಿಂದ ನೆರೆ ಪರಿಹಾರ ನೀಡಲಾಗುತ್ತಿದೆ. ಮೇವನ್ನು ಕೂಡ ಸಕಾಲದಲ್ಲಿ ಆಯಾ ಸ್ಥಳಗಳಿಗೆ ಕಲ್ಪಿಸಿ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು. ಈ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. -ರೂಪಾಲಿ ನಾಯ್ಕ, ಶಾಸಕಿ
-ಅರುಣ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Kunigal; ಬೈಕ್ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ