ರೈಲ್ವೆ ಬಸ್ ಸಂಚಾರ ಪುನಾರಂಭ
Team Udayavani, Mar 17, 2020, 4:47 PM IST
ಕಲಾದಗಿ: ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ಖಜ್ಜಿಡೋಣಿವರೆಗೆ ಮುಕ್ತಾಯಗೊಂಡಿದ್ದು, 2018 ಜೂನ್ 15ರಂದು ಶುಭಾರಂಭ ಮಾಡಿದ್ದ ರೈಲ್ ಬಸ್ ತನ್ನ ಸಂಚಾರವನ್ನು ಆಗ ಆರೇಳು ತಿಂಗಳಲ್ಲಿ ನಿಲ್ಲಿಸಿತ್ತು. ಈಗ ಮತ್ತೆ ಸೋಮವಾರ ಸಂಚಾರ ಪುನರಾಂಭ ಮಾಡಿದೆ.
ಬೆಳಗ್ಗೆ 7.45ಕ್ಕೆ ಬಾಗಲಕೋಟೆ ರೈಲ್ವೆ ಸ್ಟೇಶನನಿಂದ ಬಿಟ್ಟ ರೈಲ್ ಬಸ್ ನವನಗರ, ಸೂಳಿಕೇರಿ, ಕೆರಕಲಮಟ್ಟಿ, ಹಿರೇಶೆಲ್ಲಿಕೇರಿ, ಖಜ್ಜಿಡೋಣಿಗೆ 9.30ಕ್ಕೆ ಬಂದು ತಲುಪಿತು. ಮತ್ತೆ ಆರಂಭಗೊಂಡ ರೈಲ್ವೆ$ ಬಸ್ನ ಮೊದಲ ದಿನ ಪ್ರಯಾಣಿಕರಿಲ್ಲದೆ ಸಂಚಾರ ನಡೆಸಿದ್ದು ಕಂಡು ಬಂತು. ಬಾಗಲಕೋಟೆಯಿಂದ ಖಜ್ಜಿಡೋಣಿವರೆಗೆ 7 ಟಿಕೆಟ್ ಪಡೆದು ಪ್ರಯಾಣಿಕರು ಸಂಚರಿಸಿದ್ದರು. ಖಜ್ಜಿಡೋಣಿಗೆ ರೈಲು ಬಸ್ ಬರುತ್ತಿದಂತೆ ಅಲ್ಲಿದ್ದ ಸ್ಥಳೀಯರು ರೈಲ್ ಬಸ್ಸನ್ನು ವೀಕ್ಷಣೆ ಮಾಡಿ ಸಂಚಾರ ಪುನಾರಂಭ ಮಾಡಿದ್ದಕ್ಕೆ ಸಂತಸಗೊಂಡರು. 10 ಗಂಟೆಗೆ ಖಜ್ಜಿಡೋಣಿಯಿಂದ ಬಾಗಲಕೋಟೆಗೆ ನಗರದ ಕಡೆಗೆ ಪ್ರಯಾಣಿಕರು ಪ್ರಯಾಣ ಬೆಳೆಸಿದರು.
ಬಾಗಲಕೋಟೆಯಿಂದ ಖಜ್ಜಿಡೋಣಿಯವರೆಗೂ ಐದು ಸ್ಟೇಶನ್ ಗಳು ಬರುತ್ತವೆ.ಯಾವುದೇ ಸ್ಟೇಶನ್ವರೆಗೂ ಸಂಚಾರ ಮಾಡಿದರೂ 10 ರೂಪಾಯಿ. ಸೋಮವಾರ ಪುನಾರಂಭಗೊಂಡ ರೈಲು ಬಸ್ ಸಂಚಾರದಲ್ಲಿ ಬಾಗಲಕೋಟೆಯಿಂದ ಖಜ್ಜಿಡೋಣಿವರೆಗೂ 7 ಟಿಕೆಟ್ ಪಡೆದಿದ್ದರು. ಪ್ರಯಾಣಿಕರು ರೈಲು ಬಸ್ ಸಂಚಾರದ ಅನುಕೂಲ ಸೌಲಭ್ಯ, ರೈಲು ಬಸ್ ಪ್ರಯಾಣ ಸಂಚಾರ ಸದ್ಬಳಕೆ ಮಾಡಿಕೊಳ್ಳಬೇಕು. –ಲಕ್ಷ್ಮಣ ಯಲಗನ್ನವರ, ರೈಲ್ ಬಸ್ ಟಿಸಿ, ಬಾಗಲಕೋಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ