ಕೊರೊನಾ ಭೀತಿ: 21ಸಾವಿರ ಕೋಳಿಗಳ ಸಜೀವ ಸಮಾಧಿ


Team Udayavani, Mar 17, 2020, 6:02 PM IST

br-tdy-1

ನೆಲಮಂಗಲ: ಕೋಳಿ ಸೇವಿಸುವುದರಿಂದ ಕೊರೊನಾ ವೈರಸ್‌ ಬರಲು ಕಾರಣವಾಗುತ್ತದೆ ಎಂಬ ವದಂತಿಯಿಂದ ಕೋಳಿ ಉದ್ಯಮ ಸಂಪೂರ್ಣವಾಗಿ ನೆಲಕಚ್ಚಿದ್ದು, ತಾಲೂಕಿನ ಕೋಳಿ ಸಾಕಾಣಿಕೆದಾರರು ನಷ್ಟದಿಂದ ಕೋಳಿಗಳ ಜೀವಂತ ಸಮಾಧಿಗೆ ಮುಂದಾಗಿದ್ದಾರೆ.

ನೆಲಮಂಗಲ ವಿಧಾನಸಭಾ ಕ್ಷೇತ್ರದ ಕುಪ್ಪೆಮಳ ಹಾಗೂ ಎಣ್ಣೆಗೆರೆ ಗ್ರಾಮದಲ್ಲಿ ರೈತ ರಘು 21 ಸಾವಿರ ಕೋಳಿಗಳನ್ನು ಜೆಸಿಬಿಯಿಂದ ಗುಂಡಿ ತೆಗೆಸಿ ಜೀವಂತ ಸಮಾಧಿ ಮಾಡಿದರೆ, ತಾಲೂಕಿನ ಅನೇಕ ಸಾಕಾಣಿಕೆದಾರರು ಹಂತ ಹಂತವಾಗಿ ಕೋಳಿಗಳ ಜೀವಂತ ಸಮಾಧಿ ಮಾಡಲು ನಿರ್ಧರಿಸಿದ್ದಾರೆ.

ಉಚಿತ ಕೊಟ್ಟರು ಪಡೆಯುತಿಲ್ಲ: ಕೋಳಿಗಳನ್ನು ಉಚಿತವಾಗಿ ನೀಡಿದರೂ, ಯಾವ ಮಾಂಸಪ್ರಿಯರು ತೆಗೆದುಕೊಂಡು ಹೋಗಲು ಮುಂದಾಗುತ್ತಿಲ್ಲ . ಮಾರಾಟಗಾರರು ಕೋಳಿಯ ಬೆಲೆ ದಿಢೀರ್‌ ಕುಸಿತವಾದ ಕಾರಣ ಖರೀದಿದಾರರಿಲ್ಲದೆ ನಷ್ಟದಿಂದ ಸಾಕಾಣಿಕೆದಾರರ ಕಡೆ ಮುಖಮಾಡುತ್ತಿಲ್ಲ. ಕೋಳಿ ಖರೀದಿಸುವ ಜನರಿಲ್ಲದ ಕಾರಣ ಮಣ್ಣಿನಲ್ಲಿ ಮುಚ್ಚುವ ನಿರ್ಧಾರಕ್ಕೆ ಸಾಕಾಣಿಕೆದಾರರು ಮುಂದಾಗಿದ್ದಾರೆ.

 ಬೆಲೆ ದಿಢೀರ್‌ ಕುಸಿತ : ರಾಜ್ಯದಲ್ಲಿ ಜನವರಿ ತಿಂಗಳು ಫಾರಂ ಕೋಳಿ ಕೆಜಿಗೆ 96 ರಿಂದ 116 ರೂ.ಇದ್ದ ಬೆಲೆ ಮಾರ್ಚ್‌ ಆರಂಭದಲ್ಲಿ 36ರೂ.ಗೆ ಕುಸಿತ ಕಂಡಿದ್ದು, ಇದರಿಂದ ಫಾರಂ ಕೋಳಿಗಳ ನಿರ್ವಹಣೆ ಖರ್ಚು ಹೆಚ್ಚಾಗುತ್ತಿರುವ ಕಾರಣ ಅಪಾರ ಪ್ರಮಾಣದ ನಷ್ಟದಿಂದ ತಪ್ಪಿಸಿಕೊಳ್ಳಲು ಕೋಳಿಗಳನ್ನು ಸಾಯಿಸಲಾಗುತ್ತಿದೆ ಎಂದು ಸಾಕಾಣಿಕೆದಾರರು ಬೇಸರ ವ್ಯಕ್ತಪಡಿಸಿದರು.

ಕೋಳಿ ಅಂಗಡಿ ಬಂದ್‌ : ಸರ್ಕಾರ ಆದೇಶದಂತೆಎಲ್ಲಾ ಕೋಳಿ ಹಾಗೂ ಕೋಳಿ ಮಾಂಸ ಮಾರಾಟ ಅಂಗಡಿಗಳು ಸಂಪೂರ್ಣವಾಗಿ ಬಂದ್‌ ಮಾಡಿದ ಹಿನ್ನಲೆ ಫಾರಂ ಗಳಿಂದ ಕೋಳಿಗಳನ್ನು ಖರೀದಿಸುವವರು ಇಲ್ಲದಂತಾಗಿದೆ. ಒಟ್ಟಾರೆ ಕೊರೊನಾ ಭೀತಿ ಕೋಳಿ ಉದ್ಯಮಕ್ಕೆ ಭಾರಿ ಹೊಡೆತ ನೀಡಿದ್ದು ಕೆಲ ಸಾಗಾಣಿಕೆದಾರರು ಫಾರಂಗಳನ್ನು ನಿಲ್ಲಿಸುವ ನಿರ್ಧಾರ ಮಾಡಿದ್ದಾರೆ.

ನಿರ್ವಹಣೆ ಖರ್ಚು ಹೆಚ್ಚುತ್ತಿದೆ: ಕೋಳಿ ಸಾಗಣಿಕೆದಾರ ರಘು ಪ್ರತಿಕ್ರಿಯಿಸಿ, ಕೊರೊನಾಭೀತಿಯಿಂದ ಕೋಳಿ ಬೆಲೆ ಸಂಪೂರ್ಣ ಕುಸಿತ ಕಂಡಿದ್ದು, ಕೋಳಿಗಳ ನಿರ್ವಹಣೆ ಮಾಡಲು ಖರ್ಚು ಹೆಚ್ಚಾಗುತ್ತಿದ್ದು ಹೆಚ್ಚು ನಷ್ಟಕ್ಕೆ ಒಳಗಾಗುವ ಮುಂಚೆಯೇ ತಪ್ಪಿಸಿಕೊಳ್ಳಲು ಈ ನಿರ್ಧಾರ ಮಾಡಿದ್ದೇನೆ ಎಂದರು.

ಕೋಳಿ ಅಂಗಡಿಯ ಕೆಲಸಗಾರ ಸುರೇಶ್‌ ಪ್ರತಿಕ್ರಿಯಿಸಿ, ಕೋಳಿ ಮಾಂಸವನ್ನು ಕೇಳುವವರಿಲ್ಲ ಸರ್ಕಾರ ಆದೇಶದ ನಂತರ ಕೋಳಿ ಅಂಗಡಿ ಮುಚ್ಚಲಾಗಿದೆ. ಆದ್ದರಿಂದ ಕೋಳಿ ಉದ್ಯಮ ಸಂಪೂರ್ಣ ಸ್ಥಗಿತವಾಗಿದೆ ಎಂದರು.

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.