ಕೊರೊನಾ ಹರಡಲು 5 ಜಿ ಕಾರಣ ?

ಹೀಗೊಂದು ಏನಕೇನ ಪ್ರಕಾರೇಣ

Team Udayavani, Apr 6, 2020, 3:42 PM IST

ಕೊರೊನಾ ಹರಡಲು 5 ಜಿ ಕಾರಣ ?

ಕೋಲ್ಕತ್ತಾ: ಜೆಎನ್‌ರೇ ಆಸ್ಪತ್ರೆಯ ದಾದಿಯರು ಕೊರೊನಾ ವೈರೆಸ್‌ ಸಾಂಕ್ರಾಮಿಕ ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ಒಗ್ಗಟ್ಟನ್ನು ತ್ರಿವರ್ಣ ಧ್ವಜ ಹಾರಿಸುವ ಮೂಲಕ ವ್ಯಕ್ತಪಡಿಸಿದರು.

ಮಣಿಪಾಲ: ಕೋವಿಡ್-19 ವೈರಸ್‌ ಗೆ ಏನು ಕಾರಣ? ಹೇಗೆ ಹರಡಿತು ? ಎಂದು ನಾವು ಅಂತರ್ಜಾಲದಲ್ಲಿ ಜಾಲಾಡಿದರೆ 5ಜಿ ಕಾರಣ ಎಂಬ ಉತ್ತರ ಬರುತ್ತದೆ. ಹೊಸ 5 ಜಿ ನೆಟ್‌ವರ್ಕ್‌ಗಳು ರೋಗಕ್ಕೆ ಕಾರಣವಾಗಿವೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದೆ. ಇಂತಹ ಊಹಾಪೋಹಗಳನ್ನು ಅಮೆರಿಕ ಸೇರಿದಂತೆ ಇತರ ದೇಶಗಳ ಜನರು ಹಬ್ಬಿಸಿದ್ದಾರೆ. ವಿಪರ್ಯಾಸ ಎಂದರೆ ಕೆಲವು ದೇಶಗಳಲ್ಲಿ ಸೆಲೆಬ್ರಿಟಿಗಳೇ ಇಂತಹ ಹೇಳಿಕೆಗಳ‌ನ್ನು ನೀಡುತ್ತಿದ್ದಾರೆ. ಟ್ವಿಟರ್‌ಗಳಲ್ಲಿ 3 ಲಕ್ಷ ಫಾಲೋವರ್‌ಗಳನ್ನು ಹೊಂದಿರುವ ನಟರೊಬ್ಬರು ಇಂತಹ ಅನುಮಾನವನ್ನು ವ್ಯಕ್ತಪಡಿಸಿದ್ದು, ಅವರನ್ನು ಬೆಂಬಲಿಸಿ ಲಕ್ಷಾಂತರ ಪ್ರತಿಕ್ರಿಯೆಗಳು ಬಂದಿವೆ. ಆದರೆ ವಿಜ್ಞಾನಿಗಳ ಪ್ರಕಾರ 5ಜಿ ಮತ್ತು ಕೊರೊನಾ ವೈರಸ್‌ ಗೆ ಯಾವುದೇ ಸಂಬಂಧ ಇಲ್ಲ. ಈ ಕುರಿತಂತಹ ಚರ್ಚೆಗಳೇ ಹಾಸ್ಯಾಸ್ಪದ.

5 ಜಿಯನ್ನು ವಿರೋಧಿಸುತ್ತಿರುವ ಗುಂಪು ಇಂತಹ ಸುಳ್ಳು ಸುದ್ದಿಯನ್ನು ಹರಡಿಸುತ್ತಿವೆ. ಫೇಸ್‌ಬುಕ್‌ ಗುಂಪು ಸೇರಿದಂತೆ ಯೂಟ್ಯೂಬ್‌ ನಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಮಾರ್ಚ್‌ ತಿಂಗಳಿನಲ್ಲಿ ಬೆನ್‌ ಮ್ಯಾಕಿ ಎಂಬವರು ಫೇಸ್ಬುಕ್‌ ನಲ್ಲಿ 5ಜಿಯನ್ನು ಕೊರೊನಾ ವೈರಸ್‌ ಗೆ ಲಿಂಕ್‌ ಮಾಡಿದ್ದರು. “ಪ್ರಪಂಚದಾದ್ಯಂತ 5 ಜಿ ಗೋಪುರಗಳನ್ನು ನಿರ್ಮಿಸುತ್ತಿರುವುದರಿಂದ ಈ ವೈರಸ್‌ಗಳು ಹಬ್ಬುತ್ತಿವೆ. ಇದಕ್ಕೆ 5ಜಿ ತಂತ್ರಜ್ಞಾನ ಕಾರಣ ಎಂದಿದ್ದರು. ಇದು ಜಗತ್ತಿನ ಜನ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನ. ಕೊರೊನಾ ವೈರಸ್‌ ನಿಗ್ರಹಿಸಲು ಅಭಿವೃದ್ಧಿಪಡಿಸುವ ಲಸಿಕೆಗಳು ನಿಜವಾಗಿಯೂ ಲಸಿಕೆಗಳಲ್ಲ; ವಾಸ್ತವವಾಗಿ ಜನರಲ್ಲಿ ಅಳವಡಿಸಲಾಗುವ ಚಿಪ್‌ಗ್ಳಾಗಿವೆ ಎಂದು ಮ್ಯಾಕಿ ಹೇಳಿದರು.

COVID-19 ರೇಡಿಯೊ ತರಂಗಗಳಿಂದೆ‌ಲ್ಲ ಹರಡುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ವೈರಸ್‌ನಿಂದ ಹರಡುತ್ತದೆ ಎಂದು ಎಫ್‌ಸಿಸಿ, ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ ಮತ್ತು ಪರಿಸರ ಸಂರಕ್ಷಣಾ ಸಂಸ್ಥೆ ಮಾಹಿತಿ ನೀಡಿದೆ. ಇವೆಲ್ಲರೂ 5 ಜಿ ಸುರಕ್ಷಿತವೆಂದು ಹೇಳಿದ್ದಾರೆ.

5 ಜಿ ಎಂಬುದು ಹೊಸ ಸೂಪರ್‌-ಫಾಸ್ಟ್‌ ವೈರ್‌ಲೆಸ್‌ ತಂತ್ರಜ್ಞಾನವಾಗಿದೆ. ಅಮೆರಿಕದಲ್ಲಿ ಪ್ರಮುಖ ನಗರಗಳು ಲೈವ್‌ 5 ಜಿ ಸಂಪರ್ಕ ಹೊಂದಿವೆ. ಚೀನ, ದಕ್ಷಿಣ ಕೊರಿಯಾ, ಜರ್ಮನಿ ಮತ್ತು ಯುಕೆ ಮುಂತಾದ ಹಲವು ದೇಶಗಳಲ್ಲಿ 5 ಜಿ ಸೇವೆಗಳಿವೆ. ಇದು ತಂತ್ರಜ್ಞಾನ ಕ್ಷೇತ್ರಗಳಿಗೆ ತುಂಬಾ ನೆರವಾಗಲಿದೆ. ನಾವು ವಾಸಿಸುವ ವಿಧಾನವನ್ನು ಬದಲಾಯಿಸಲು ಈ ತಂತ್ರಜ್ಞಾನವು ಸಜ್ಜಾಗಿದೆ. ಸ್ವಯಂ ಚಾಲನಾ ಕಾರುಗಳಿಂದ ಹಿಡಿದು ಸುಧಾರಿತ ತಂತ್ರಜ್ಞಾನಗಳು ಈ ಸೇವೆ ಆರಂಭಗೊಂಡ ಬಳಿಕ ಜೀವ ಪಡೆಯಲಿವೆೆ. 5ಜಿ ಸೇವೆಗಳನನು ಹೊಂದಿರುವ ದೇಶಗಳು ಈ ದಶಕವನ್ನು ಆಳಲಿವೆ ಎಂದು ಹೇಳಲಾಗುತ್ತಿದೆ.

5 ಜಿ ಆರೋಗ್ಯ ಕಾಳಜಿ?
ಕಂಪನಿಗಳು 5 ಜಿ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗಿನಿಂದ, ಆರೋಗ್ಯದ ಮೇಲೆ ತಂತ್ರಜ್ಞಾನದ ಪ್ರಭಾವದ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. 5 ಜಿ ಯ ಒಂದು ಆವೃತ್ತಿಯನ್ನು ಮಿಲಿ ಮೀಟರ್‌ ತರಂಗ ಎಂದು ಕರೆಯಲಾಗುತ್ತದೆ. ಇದು ಹೆಚ್ಚಿನ ಆವರ್ತನದ ರೇಡಿಯೊ ತರಂಗಗಳಲ್ಲಿ ಚಲಿಸುತ್ತದೆ. ಆ ಸಂಕೇತಗಳು ಹೆಚ್ಚು ದೂರ ಪ್ರಯಾಣಿಸಲು ಸಾಧ್ಯವಿಲ್ಲ, ಇದಕ್ಕೆ ಗೋಪುರಗಳನ್ನು ಹೆಚ್ಚಿನ ಸ್ಥಳಗಳಲ್ಲಿ ಸ್ಥಾಪಿಸಬೇಕು. ರೇಡಿಯೊ ತರಂಗಗಳು ಮಿದುಳಿನ ಕ್ಯಾನ್ಸರ್‌, ತಲೆನೋವು ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗುವ ಹಾನಿಕಾರಕ ವಿಕಿರಣ ಹೆಚ್ಚಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಈ ಕುರಿತು ಇನ್ನಷ್ಟು ಸಂಶೋಧನೆ ನಡೆಯಬೇಕಿದೆ.

ಟಾಪ್ ನ್ಯೂಸ್

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

1-eeqwew

Ban; ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.