13 ಲಕ್ಷ ಮಾಸ್ಕ್ ಪೂರೈಸಿದ ಸಂಜೀವಿನಿ ತಂಡ
ತಂಡಕ್ಕೆ 174.97 ಕೋಟಿ ರೂ. ಸಮುದಾಯ ಬಂಡವಾಳ ನಿಧಿ ನೆರವು
Team Udayavani, Apr 23, 2020, 12:35 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಮಾಸ್ಕ್ ಗಳ ಕೊರತೆ ನೀಗಿಸಲು ಸಂಜೀವಿನಿ ಸ್ವ ಸಹಾಯ ಗುಂಪುಗಳ ಮಹಿಳೆಯರು ಈವರೆಗೆ 13 ಲಕ್ಷ ಮಾಸ್ಕ್ ಗಳನ್ನು ತಯಾರಿಸಿರುವ ಕಾರ್ಯ ಶ್ಲಾಘನೀಯ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು. ಬುಧವಾರ ಸಂಜೀವಿನಿ ಸ್ವ ಸಹಾಯ ಗುಂಪುಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ಮಾಸ್ಕ್ ತಯಾರಿಸಲು ಸಂಜೀವಿನಿ ತಂಡಕ್ಕೆ 174.97 ಕೋಟಿ ರೂ. ಸಮುದಾಯ ಬಂಡವಾಳ ನಿಧಿಯನ್ನು ನೀಡಲಾಗಿದೆ.
ಸ್ವಸಹಾಯ ಸಂಘಗಳ ಮಹಿಳೆಯರ ಜತೆ ವಿಡಿಯೋ ಸಂವಾದ ನಡೆಸಿದ್ದೇನೆ ಎಂದರು. ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ – ಸಂಜೀವಿನಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 1,147 ಸ್ವ ಸಹಾಯ ಗುಂಪುಗಳ 3,168 ಮಹಿಳೆಯರು ಕಳೆದ 25 ದಿನಗಳಲ್ಲಿ 13 ಲಕ್ಷ ಮೂರು ಪದರುಗಳ ಉತ್ತಮ ಗುಣಮಟ್ಟದ ಮಾಸ್ಕ್ ಗಳನ್ನು ತಯಾರಿಸಿ ಆಯಾಜಿಲ್ಲಾಡಳಿತ, ಸ್ಥಳೀಯ ಮೆಡಿಕಲ್ ಶಾಪ್ಗ್ಳು, ಸಂಘ-ಸಂಸ್ಥೆಗಳಿಗೆ ಪ್ರತಿ ಮಾಸ್ಕಿನ ಬೆಲೆ 10ರಿಂದ 22 ರೂ. ಕಡಿಮೆ ಬೆಲೆಗೆ ಪೂರೈಕೆ ಮಾಡಿದ್ದಾರೆ ಎಂದರು. 4,000ಕ್ಕೂ ಹೆಚ್ಚು ಸಂಜೀವಿನಿ ಮಹಿಳೆಯರು ಆಯಾಯ ಜಿಲ್ಲೆಗಳಲ್ಲಿ ಕೋವಿಡ್ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 13 ಕಡೆ ಸಮುದಾಯ ಅಡುಗೆ ಮನೆಗಳನ್ನು ಸ್ಥಾಪಿಸಿ ಜಿಲ್ಲಾಡಳಿತಗಳ ನೆರವಿನಿಂದ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ 6.81 ಕೋಟಿ ರೂ. ದುರ್ಬಲ ನಿರ್ಮೂಲನ ನಿಧಿಯನ್ನು ಒದಗಿಸಲಾಗಿದೆ ಎಂದರು. ತುಮಕೂರು, ಉಡುಪಿಯಲ್ಲಿನ ಸ್ವ ಸಹಾಯ ಗುಂಪುಗಳು ವೈಯಕ್ತಿಕ ರಕ್ಷಣಾ ನಿಲುವಂಗಿಗಳು (ಪಿಪಿಇ) ಮತ್ತು ಹೆಡ್ ಗೈ ಗಳನ್ನು ಉತ್ಪಾದಿಸುತ್ತಿವೆ ಎಂದರು.
30 ಸಾವಿರ ವೆಂಟಿಲೇಟರ್: “ಕೋವಿಡ್ ಸಂಕಷ್ಟದ ವಿರುದ್ಧದ ಹೋರಾಟದಲ್ಲಿ ವೆಂಟಿಲೇಟರ್ ಗಳ ಕೊರತೆ ಆಗದಂತೆ ಎಚ್ಚರವಹಿಸಿರುವ ಕೇಂದ್ರ ಸರ್ಕಾರ 30 ಸಾವಿರ ವೆಂಟಿಲೇಟರ್ ತಯಾರು ಮಾಡಲು ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಆದೇಶ ನೀಡಿದೆ. ವೆಂಟಿಲೇಟರ್ ತಯಾರು ಮಾಡಲು ಅಂದಾಜು 200 ಬಿಡಿ ಭಾಗಗಳು ಬೇಕಾಗುತ್ತದೆ. ಈ ಪೈಕಿ ಏರ್ ಫ್ಲೋ ರೆಗ್ಯುಲೇಟ್ ಪ್ರಮುಖ ಭಾಗವಾಗಿದ್ದು, ಒಂದಕ್ಕೆ 20 ಸಾವಿರ ರೂ. ಆಗುತ್ತದೆ. ಈ ಮೊದಲ ಇಂಥ ಬಿಡಿ ಭಾಗಗಳು ಜರ್ಮಿನಿಯಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ತಯಾರಿಸಲು ಆರ್ಡರ್ ಬಂದಿದೆ. ಹಲವಾರು ಸಂಸ್ಥೆಗಳು ಈ ಕಾರ್ಯದಲ್ಲಿ ನೆರವಾಗಿವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು