ಕ್ವಾರಂಟೈನ್ನಲ್ಲಿದ್ದವ ಆತ್ಮಹತ್ಯೆಗೆ ಯತ್ನ
ಹೋಂ ಕ್ವಾರಂಟೈನ್ ರಾಜಕೀಯ ಪ್ರೇರಿತ ಎಂದು ಶಂಕಿತನ ಆರೋಪ
Team Udayavani, Apr 23, 2020, 2:43 PM IST
ಮಾಲೂರು: ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಯ ಭಾವಚಿತ್ರಗಳನ್ನು ಸಾಮಾಜಿಕ ಜಾಲಾ ತಾಣದಲ್ಲಿ ಹರಿಬಿಟ್ಟು, ತಮ್ಮನ್ನು ಮಾತ್ರ ಮನೆಯಲ್ಲಿ ಕೂಡಿ ಹಾಕಿ ತಾಲೂಕು ಆರೋಗ್ಯಾಧಿಕಾರಿಯ ಸೋದರನೂ ಆಗಿರುವ ಗ್ರಾಪಂ ಸದಸ್ಯನನ್ನು ಮನಸೋ ಇಚ್ಛೆ ತಿರುಗಲು ಬಿಟ್ಟಿರುವ ಆಶಾ ಕಾರ್ಯಕರ್ತರು ಮತ್ತು ಸ್ಥಳೀಯ ಗ್ರಾಪಂ ಪಿಡಿಒ ಅವರ ಕ್ರಮವನ್ನು ಖಂಡಿಸಿದ ವ್ಯಕ್ತಿಯೊಬ್ಬ ಗ್ರಾಪಂ ಕಚೇರಿಯಲ್ಲಿ ಕುಟುಂಬ ಸಮೇತನಾಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಸಂತೇಹಳ್ಳಿಯಲ್ಲಿ ಸಂಭವಿಸಿದೆ.
ಮಾಲೂರು ತಾಲೂಕಿನ ಸಂತೇಹಳ್ಳಿ ಗ್ರಾಪಂ ವ್ಯಾಪ್ತಿಯ ನಿಡಘಟ್ಟ ಗ್ರಾಮದ ಎಂಟು ಮಂದಿಯ ಗುಂಪೊಂದು, ಕಳೆದ ನಾಲ್ಕು ದಿನಗಳ ಹಿಂದೆ ಬೆಂಗಳೂರಿನಿಂದ ಗ್ರಾಮಕ್ಕೆ ಬಂದಿದ್ದ ಪಶುವೈದ್ಯನೊಬ್ಬನ ಜೊತೆಗೂಡಿ ಪಾರ್ಟಿ ನಡೆಸಿತ್ತು. ಇದರಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ಸೇರಿ ತಾಲೂಕು ಆರೋಗ್ಯಾಧಿಕಾರಿಯ ಸೋದರ, ಗ್ರಾಪಂ ಸದಸ್ಯ ಕೂಡ ಭಾಗಿಯಾಗಿದ್ದ. ಆತನನ್ನೂ ಕ್ವಾರಂಟೈನ್ ಮಾಡಲಾಗಿತ್ತು. ಆದರೆ, ಗ್ರಾಮದ ಏಳು ಮಂದಿಯನ್ನು ಗೃಹ ಬಂಧನದಲ್ಲಿ ಇರಿಸಿರುವ ಸಂತೇಹಳ್ಳಿ ಗ್ರಾಪಂ ಪಿಡಿಒ ಹಾಗೂ ಅಶಾ ಕಾರ್ಯಕರ್ತರು ಗ್ರಾಪಂ ಸದಸ್ಯನನ್ನು ಮಾತ್ರ ಊರಿನಲ್ಲಿ ತಿರುಗಲು ಬಿಟ್ಟಿದ್ದಾರೆ ಎಂದು ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ದೂರಿದ್ದಾನೆ.
ತೇಜೋವಧೆಗೆ ಯತ್ನ: ಅಲ್ಲದೆ, ತನ್ನ ಚಿತ್ರವನ್ನು ಸಾಮಾಜಿಕ ಜಾಲಾತಾಣದಲ್ಲಿ ಹರಿ ಬಿಟ್ಟು ತಮ್ಮ ತೇಜೋವಧೆಗೆ ಮುಂದಾಗಿದ್ದು, ಇದರಿಂದ ಗ್ರಾಮದ ಅಕ್ಕಪಕ್ಕದ ಮನೆಯರು
ತಮ್ಮ ಕುಟುಂಬವನ್ನು ಹೀನ ದೃಷ್ಟಿಯಲ್ಲಿ ಕಾಣುತ್ತಿರುವುದನ್ನು ಸಹಿಸದೆ ಕುಟುಂಬ ಸಹಿತವಾಗಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಆರೋಪಿಸಿದ್ದಾನೆ. ಬೆಳಗ್ಗೆ 10 ಗಂಟೆಗೆ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಗ್ರಾಪಂ ಕಚೇರಿಗೆ ಮೂರು ಲೀಟರ್ ಪೆಟ್ರೋಲ್ನೊಂದಿಗೆ ಬಂದ ವ್ಯಕ್ತಿಯು, ತನ್ನ ಹಾಗೂ ತನ್ನ ಕುಟುಂಬದವರ ಮೇಲೆ ಪೆಟ್ರೋಲ್ ಸುರಿದು ಅತ್ಮಾಹುತಿ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದನು.
ಪ್ರಯತ್ನ ವಿಫಲ: ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅರೋಗ್ಯ ಸಿಬ್ಬಂದಿ ಆತ್ಮಹತ್ಯೆ ಯತ್ನವನ್ನು ತಡೆಯುವ ಪ್ರಯತ್ನ ನಡೆಸಿದರಾದರೂ ಸತತ ಐದು ಗಂಟೆಗಳ ನಡೆದ ಪ್ರಯತ್ನ ವಿಫಲವಾಗಿತ್ತು. ಅಂತಿಮವಾಗಿ ಸ್ಥಳಕ್ಕೆ ದಾವಿಸಿದ ಶಾಸಕ ನಂಜೇಗೌಡ ನೀಡಿದ ಭರವಸೆಯಿಂದ ಆತ್ಮಹತ್ಯೆ ನಿರ್ಧಾರವನ್ನು ಕುಟುಂಬವು ಕೈಬಿಟ್ಟಿತು. ಇದೊಂದು ರಾಜಕೀಯ ಪ್ರೇರಿತವಾಗಿರುವ ನಾಟಕ ಎನ್ನುವುದು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಅಧಿಕಾರಿಗಳಿಗೂ ಮಾತನಾಡುತ್ತಿದ್ದ ದೃಶ್ಯ ಕಂಡು ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ