ಲಾಕ್ಡೌನ್ ವೇಳೆ ಗುಡ್ಡ ಅಗೆದು ಕೃಷಿ ಮಾಡಿದ ಶಿಕ್ಷಕ
Team Udayavani, May 6, 2020, 6:23 AM IST
ಕುಂದಾಪುರ: ಲಾಕ್ಡೌನ್ ವೇಳೆ ಸಮಯ ಕಳೆಯುವುದು ಹೇಗೆ ಎನ್ನುವುದು ಹಲವರ ಚಿಂತೆಯಾದರೆ ಇಲ್ಲೊಬ್ಬರು ಶಿಕ್ಷಕರು ತಮ್ಮ ಮನೆ ಪಕ್ಕದ ಗುಡ್ಡ ಸಮತಟ್ಟುಗೊಳಿಸಿ ತರಹೇವಾರಿ ತರಕಾರಿ ಕೃಷಿಯನ್ನು ಮಾಡಿದ್ದಾರೆ.
ಹಾಲಾಡಿ ಗ್ರಾಮದ ಮುದೂರಿಯ ನಿವಾಸಿ, ಪ್ರಸ್ತುತ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ರಾಗಿರುವ ದಿನೇಶ್ ಮುದೂರಿ ಅವರೇ ಗುಡ್ಡ ಅಗೆದು, ಕೃಷಿ ಮಾಡಿದ ಶಿಕ್ಷಕ.
12 ವರ್ಷಗಳ ಬಳಿಕ ಕೃಷಿ
ದಿನೇಶ್ ಅವರು 12 ವರ್ಷಗಳಿಂದ ದೈ.ಶಿ. ಶಿಕ್ಷಕರಾಗಿದ್ದು ಊರಿಗೆ ಬರುತ್ತಿ ದ್ದರೂ, ಕೃಷಿಯಲ್ಲಿ ಸಕ್ರಿಯರಾಗಿ ತೊಡಗಿ ಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಮನೆ ಸನಿಹ ಅರ್ಧ ಕಿ.ಮೀ. ದೂರದಲ್ಲಿ ಗುಡ್ಡ ಸಮತಟ್ಟುಗೊಳಿಸಿ ತರಕಾರಿ ಕೃಷಿಗೆ ಮುಂದಾಗಿದ್ದಾರೆ. ಇದಕ್ಕೆ ವಾರಾಹಿ ನೀರು ವರವಾಗಿದೆ. ಕಾಡುಪ್ರಾಣಿ ಉಪಟಳ ತಡೆಗೆ ಬೇಲಿ ವ್ಯವಸ್ಥೆ ಮಾಡಿದ್ದಾರೆ.
ಸಾವಯವ ತರಕಾರಿ
ಈ ಕೈತೋಟದಲ್ಲಿ ಸೌತೆ, ಬೆಂಡೆಕಾಯಿ, ಅಲಸಂಡೆ ಬೆಳೆದಿದ್ದಾರೆ. ಸೌತೆ ಬಳ್ಳಿ ಕಾಯಿ ಬಿಟ್ಟಿದ್ದು, ಅಲಸಂಡೆ ಬಳ್ಳಿ, ಬೆಂಡೆ ಗಿಡ ಇನ್ನಷ್ಟು ಬೆಳೆಯಬೇಕಿದೆ. ರಾಸಾಯನಿಕ ಗೊಬ್ಬರ ಹಾಕದೇ, ಹಟ್ಟಿ ಗೊಬ್ಬರ ಬಳಸಿ ಬೆಳೆಯಲಾದ ಸಾವಯವ ಬೆಳೆ ಇದಾಗಿದೆ ಎನ್ನುತ್ತಾರೆ ದಿನೇಶ್ ಮುದೂರಿ.
ಖುಷಿ ಕೊಟ್ಟಿದೆ
ಕೃಷಿ ಕಾಯಕ ಮನಸ್ಸಿಗೆ ತುಂಬಾ ಸಂತೃಪ್ತಿ ನೀಡಿದೆ. ಲಾಕ್ಡೌನ್ ಸಮಯವನ್ನು ಹೇಗೆ ಕಳೆಯುವುದೆಂದು ಯೋಚಿಸುತ್ತಿದ್ದಾಗ ತರಕಾರಿ ಕೃಷಿ ಮಾಡುವ ಯೋಚನೆ ಬಂತು. ಉತ್ತಮ ನೀರು ಕೂಡ ಇರುವುದರಿಂದ ಬೆಂಡೆ, ಅಲಸಂಡೆ, ಸೌತೆ ಬಳ್ಳಿಗಳು ಉತ್ತಮವಾಗಿ ಬೆಳೆಯುತ್ತಿದೆ. ಸಾವಯವ ಗೊಬ್ಬರವೇ ಹಾಕಿರುವುದರಿಂದ ಉತ್ತಮ ಇಳುವರಿಯ ನಿರೀಕ್ಷೆಯಿದೆ.
-ದಿನೇಶ್ ಮುದೂರಿ,
ಕೃಷಿಯಲ್ಲಿ ತೊಡಗಿರುವ ಶಿಕ್ಷಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Birla; ಸಂಗೀತ ಕ್ಷೇತ್ರ ತೊರೆಯುವ ಕಠಿನ ನಿರ್ಧಾರ ತಳೆದ ಅನನ್ಯಶ್ರೀ ಬಿರ್ಲಾ
ʼಸಲಾರ್ʼನ ʼಶಿವ್ ಮನ್ನಾರ್ʼಗೂ ʼಕೆಜಿಎಫ್ʼಗೂ ಇದ್ಯಾ ಲಿಂಕ್: ಸುಳಿವು ಕೊಟ್ಟ ಪೃಥ್ವಿರಾಜ್
Brazil Floods: ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್, ಸಾವಿನ ಸಂಖ್ಯೆ 90ಕ್ಕೆ ಏರಿಕೆ
Gundlupete; ಸತತ 25 ದಿನಗಳ ಕಾಲ ಕೂಂಬಿಂಗ್ ಯಶಸ್ವಿ:ಪುಂಡಾನೆ ಸೆರೆ
Mangaluru:ರೈಲ್ವೆ ಸ್ಟೇಷನ್ ನಲ್ಲಿ ರಿಕ್ಷಾ ಚಾಲಕರು ಮತ್ತು ಪ್ರಯಾಣಿಕರ ಹೊಡೆದಾಟ