ಮಳೆಗಾಲದ ಪೂರ್ವ ಸಿದ್ಧತೆ ಇನ್ನೂ ಆಗಿಲ್ಲ

 ಒಂದನೇ ಕೊಳ, ಕಲ್ಮಾಡಿ ವಾರ್ಡ್‌

Team Udayavani, Jun 5, 2020, 5:04 AM IST

ಮಳೆಗಾಲದ ಪೂರ್ವ ಸಿದ್ಧತೆ ಇನ್ನೂ ಆಗಿಲ್ಲ

ಮಲ್ಪೆ: ಮಳೆಗಾಲ ಸನ್ನಿಹಿತವಾದರೂ ನಗರಸಭೆಯ 1ನೇ ಕೊಳ ಮತ್ತು ಕಲ್ಮಾರ್ಡಿ ವಾರ್ಡ್‌ನಲ್ಲಿ ಇದುವರೆಗೂ ಯಾವುದೇ ಪೂರ್ವ ತಯಾರಿ ನಡೆದಂತೆ ಕಾಣುತ್ತಿಲ್ಲ. ನಗರ ಸಭೆಯ ಅಧಿಕಾರಿಗಳು ಕೋವಿಡ್-19 ಹಿಂದೆ ಇದ್ದಾರೆ ಎನ್ನಲಾಗುತ್ತಿದೆ.

ಉಡುಪಿ ನಗರಸಭೆಯ 1ನೇ ಕೊಳ ವಾರ್ಡ್‌ ಸಮುದ್ರದ ದಂಡೆಯಲ್ಲಿದ್ದು, ಮಲ್ಪೆ ಭಾಗದ ಬಹುತೇಕ ಸರಕಾರಿ ಕಚೇರಿಗಳು ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ಸಮುದ್ರ ತೀರದ ಕೊಳ ಮೀನುಗಾರಿಕೆ ರಸ್ತೆ ಮತ್ತು ಪ್ರವಾಸೋದ್ಯಮ ರಸ್ತೆ ಇರುವ ಕಾಲನಿಯಲ್ಲಿ ಪ್ರತೀ ವರ್ಷವು ಕೃತಕ ನೆರೆ ಉಂಟಾಗುತ್ತಿದೆ. ಇಲ್ಲಿ ಚರಂಡಿ ವ್ಯವಸ್ಥೆ ಇದ್ದರೂ ಅವೈಜ್ಞಾನಿಕವಾಗಿರುವುದರಿಂದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತದೆ. ಇಲ್ಲಿ ಚರಂಡಿಯ ನೀರನ್ನು ನೇರ ಸಮುದ್ರಕ್ಕೆ ಬಿಡುವ ವ್ಯವಸ್ಥೆ ಮಾಡಲಾಗಿದೆ. ಆದರೆ ಮಳೆಗಾಲದಲ್ಲಿ ಬಲವಾದ ಗಾಳಿ ಬೀಸುವಾಗ ಸಮುದ್ರದ ಅಲೆಗಳೊಂದಿಗೆ ಬರುವ ಮರಳು ಚರಂಡಿ ಸೇರುವುದರಿಂದ ಸಮಸ್ಯೆ ಉದ್ಭವಿಸುತ್ತದೆ.

ಸಿಟಿಜನ್‌ ಸರ್ಕಲ್‌ ಬಳಿಯಲ್ಲಿರುವ ದೊಡ್ಡ ಚರಂಡಿಯಲ್ಲಿ ಹೂಳಿನ ಜತೆಯಲ್ಲಿ ಗಿಡಮರಗಳು ಬೆಳೆದು ನಿಂತಿದೆ. ಕೊಳ, ಮಲ್ಪೆ ಸೆಂಟ್ರಲ್‌, ವಡಭಾಂಡೇಶ್ವರ ಮತ್ತು ಕೊಡವೂರು ವಾರ್ಡ್‌ಗಳ ನೀರು ಈ ಚರಂಡಿಯಲ್ಲಿ ಹರಿಯುವುದರಿಂದ ಇದರ ಹೂಳು ತೆರವು ಮಾಡುವುದು ಮುಖ್ಯ. ಸಿಟಿಜನ್‌ ಸರ್ಕಲ್‌ನಿಂದ ಮಲ್ಪೆ ಪೇಟೆಯವರೆಗೆ ಹೊಸದಾಗಿ ನಿರ್ಮಾಣ ಗೊಂಡ ಕಾಂಕ್ರೀಟ್‌ ರಸ್ತೆಯ ಇಕ್ಕೆಲಗಳಲ್ಲಿ ವ್ಯವಸ್ಥಿತ ಚರಂಡಿ ನಿರ್ಮಾಣ ಆಗದ ಕಾರಣ ಕೃತಕ ನೆರೆ ಉಂಟಾಗುವ ಸಾಧ್ಯತೆ ಇದೆ. ಬಲರಾಮ ನಗರದ 6 ಅಡ್ಡ ರಸ್ತೆಗಳ ಚರಂಡಿಯಲ್ಲಿ ಹೂಳು ತುಂಬಿವೆ, ಸಿಟಿಜನ್‌ ಸರ್ಕಲ್‌ನಿಂದ ಪೊಲೀಸ್‌ ಠಾಣೆಯವರೆಗೆ ಚರಂಡಿ ಯಲ್ಲಿ ಹೂಳಿನೊಂದಿಗೆ ಗಿಡಗಂಟಿಗಳು ಬೆಳೆದು ನಿಂತಿವೆ. ಬೀಚ್‌ ಬಯಲು ರಂಗ ಮಂದಿರದಿಂದ ರಾಮ ಭಜನ ಮಂದಿರ, ಪ್ಯಾರಡೈಸ್‌ ಶಾಲೆಯಿಂದ ಪೂರ್ಣಿಮಾ ಸ್ಟೋರ್‌ವರೆಗಿನ ಚರಂಡಿಯೂ ಮುಚ್ಚಿದೆ.

ಕಲ್ಮಾಡಿಯಲ್ಲೂ ಕೃತಕ ನೆರೆ
ಮಲ್ಪೆ ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಕಲ್ಮಾಡಿ ಭಾಗದಲ್ಲಿ ರಸ್ತೆ ತಗ್ಗಾಗಿ ಪ್ರತೀ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುತ್ತಿದೆ. ಪಾದಾಚಾರಿಗಳು ಮತ್ತು ವಾಹನಗಳು ನೆರೆ ನೀರಿನೊಂದಿಗೆ ಸಾಗಬೇಕಾಗುತ್ತದೆ. ಅಗಲ ಕಿರಿದಾದಾಗ ರಸ್ತೆಯಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲದ್ದರಿಂದ ನೀರು ಇಂಗಿ ಹೋಗಬೇಕೇ ವಿನಾ ಅನ್ಯ ಮಾರ್ಗ ಇಲ್ಲ. ರಾಷ್ಟ್ರೀಯ ಹೆದ್ದಾರಿಯಾದ್ದರಿಂದ ಇಲ್ಲಿ ರಸ್ತೆ ವಿಸ್ತಾರವಾಗಿ ಚರಂಡಿ ನಿರ್ಮಾಣವಾದರೆ ಮಾತ್ರ ಶಾಶ್ವತ ಪರಿಹಾರ ಸಿಗಲಿದೆ.

ಕಲ್ಮಾಡಿ ವಾರ್ಡ್‌ನಲ್ಲಿ ಒಟ್ಟು 22 ತೋಡುಗಳಿವೆ. ಫಿಶರೀಸ್‌ ಶಾಲೆಯಿಂದ ಸಸಿತೋಟ ನಾಗಬನದವರೆಗಿನ ಚರಂಡಿ ಮತ್ತು ಸರ್ವೇಶ್ವರ ದೇವಸ್ಥಾನದಿಂದ ಬಾಪುತೋಟ ರಸ್ತೆಯ ಚರಂಡಿಯ ಹೂಳು ತುಂಬಿದೆ. ಕಲ್ಮಾಡಿ ರಾಮರಾವ್‌ ಮುಖ್ಯರಸ್ತೆಯಿಂದ ಬೊಬ್ಬರ್ಯ ರಸ್ತೆ, ಕಲ್ಮಾಡಿ ಚರ್ಚ್‌ ಮುಂಭಾಗದ ರಸ್ತೆಯ ಚರಡಿಯಲ್ಲಿ ಹೂಳು ತುಂಬಿದೆ. ಬಿಲ್ಲುಗಡ್ಡೆಯಿಂದ ಬಂಕೇರುಕಟ್ಟೆ ರಸ್ತೆಯ ಎರಡೂ ಬದಿಯ ಚರಂಡಿಯಲ್ಲಿ ಹೂಳಿನೊಂದಿಗೆ ಗಿಡಗಂಟಿಗಳು ಬೆಳೆದು ನೀರು ಹರಿದು ಹೋಗಲು ಸಮಸ್ಯೆ ಉಂಟಾಗಿದೆ. ಮಲ್ಪೆ ನಗರದ ಮುಖ್ಯ ರಸ್ತೆಯ ಎರಡೂ ಬದಿ ಚರಂಡಿ ವ್ಯವಸ್ಥೆ ಇಲ್ಲದರಿಂದ ಸುತ್ತಮುತ್ತಲಿನ ನೀರು ರಸ್ತೆಯಲ್ಲಿ ಹರಿದು ಬಂದು ಏಳೂರು ಮೊಗವೀರ ಸಭಾಭವನದ ಮುಂಭಾಗದಲ್ಲಿ ಸೇರುತ್ತದೆ.

ಅಪಾಯಕಾರಿ ಮರ
ಕಲ್ಮಾಡಿ ಮುಖ್ಯ ರಸ್ತೆ, ಬೊಟ್ಟಲ, ಕಲ್ಮಾಡಿ ಗರೋಡಿ ರಸ್ತೆ, ಬೊಬ್ಬರ್ಯ ರಸ್ತೆ ಸೇರಿದಂತೆ ಕೆಲವಡೆ ಅಪಾಯಕಾರಿ ಮರಗಳು ಇದ್ದು ಈಗಲೋ, ಮತ್ತೆಯೋ ಎನ್ನುವಂತೆ ಬೀಳುವ ಸ್ಥಿತಿಯಲ್ಲಿದೆ. ಕಲ್ಮಾಡಿ ರಸ್ತೆಯ ಎರಡೂ ಬದಿ ಹಳೆಯ ತೆಂಗಿನ ಮರಗಳ ಸೋಗೆ ವಿದ್ಯುತ್‌ ತಂತಿಗಳ ಮೇಲೆ ಬಿದ್ದು ವಿದ್ಯುತ್‌ ಸಮಸ್ಯೆ ತಂದೊಡ್ಡುತ್ತದೆ.

ಪರ್ಯಾಯ ವ್ಯವಸ್ಥೆ ಅಗತ್ಯ
ಈವರೆಗೆ ಮೇ ಅಂತ್ಯದೊಳಗೆ
ವಾರ್ಡ್‌ನ ಎಲ್ಲ ಚರಂಡಿಗಳ ಹೂಳೆತ್ತುವ ಕೆಲಸ ಆಗುತ್ತಿತ್ತು. ಆದರೆ ಈ ಬಾರಿ ಕೋವಿಡ್-19 ಕಾರಣದಿಂದ ಯಾವ ಕೆಲಸವೂ ನಡೆದಿಲ್ಲ. ಕೊಳ ಭಾಗದಲ್ಲಿ ಚರಂಡಿಯ ನೀರನ್ನು ನೇರ ಸಮುದ್ರಕ್ಕೆ ಬಿಡುವ ವ್ಯವಸ್ಥೆ ಮಾಡಿದ್ದರಿಂದ ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆ ತಂದೊಡ್ಡುತ್ತಿದೆ. ಆದ್ದರಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾಗಿದೆ.
– ಲಕ್ಷ್ಮೀ ಮಂಜುನಾಥ್‌, ಕೊಳ ವಾರ್ಡ್‌ ಸದಸ್ಯೆ

ಕೋವಿಡ್-19 ಕಾರಣ
ಮಳೆಗಾಲದ ಮೊದಲೇ ಕಾಮಗಾರಿ ಮುಗಿಯಬೇಕಿತ್ತು. ಇನ್ನು ಯಾವ ತಯಾರಿಯೂ ನಡೆದಿಲ್ಲ. ಅಧಿಕಾರಿಗಳು ಎಲ್ಲದಕ್ಕೂ ಕೋವಿಡ್-19 ಕಾರಣ ಹೇಳುತ್ತಾರೆ. ನಗರದ ಇತರ ವಾರ್ಡ್‌ಗಳಿಗೆ ಟೆಂಡರ್‌ ಮಾಡಿ ಕರಾವಳಿ ಭಾಗವನ್ನು ನಿರ್ಲಕ್ಷ್ಯವಹಿಸಲಾಗಿತ್ತು. ಇದೀಗ ಒತ್ತಡಕ್ಕೆ ಮಣಿದು ಕರಾವಳಿ ಭಾಗದ ವಾರ್ಡ್‌ಗಳಿಗೆ ತಲಾ ಒಂದು ಲಕ್ಷ ರೂ. ಟೆಂಡರ್‌ ಇಟ್ಟಿದ್ದಾರೆ. ನಮ್ಮ ವಾರ್ಡ್‌ನಲ್ಲಿರುವ 22 ತೋಡಿನ ಕೆಲಸ ಆಗಬೇಕಾಗಿದೆ.
– ಸುಂದರ್‌ ಜೆ. ಕಲ್ಮಾಡಿ,
ಕಲ್ಮಾಡಿ ವಾರ್ಡ್‌ ಸದಸ್ಯ

ಟಾಪ್ ನ್ಯೂಸ್

Kasturi Rangan ವರದಿಗೆ ಮತ್ತೆ ರಾಜ್ಯ ತಿರಸ್ಕಾರ? Kasturi Rangan ವರದಿಗೆ ಮತ್ತೆ ರಾಜ್ಯ ತಿರಸ್ಕಾರ?

Kasturi Rangan ವರದಿಗೆ ಮತ್ತೆ ರಾಜ್ಯ ತಿರಸ್ಕಾರ?

CHandrababu Naidu

Tirupati Laddus row;ತಪ್ಪಿತಸ್ಥರನ್ನು ಸುಮ್ಮನೆ ಬಿಡಲು ಸಾಧ್ಯವೇ?: ಸಿಎಂ ನಾಯ್ಡು ಪ್ರಶ್ನೆ

1-ambani

Ambani;1,000 ಕೋಟಿಯ ವಿಮಾನ ಖರೀದಿಸಿದ ಮುಕೇಶ್‌ ಅಂಬಾನಿ

ISREL

Israel- ಹೆಜ್ಬುಲ್ಲಾ ನಡುವೆ ಬಾಂಬ್‌ಗಳ ಸುರಿಮಳೆ! ; 100 ರಾಕೆಟ್‌ ಲಾಂಚರ್‌ ಧ್ವಂಸ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

goa

Goa Beachನಲ್ಲಿ ಮದುವೆ: ದಿನಕ್ಕೆ 1 ಲಕ್ಷ ರೂ. ಶುಲ್ಕ

1-ddsadsa

Amit Shah; ತಡೆಯದಿದ್ದರೆ ಅಕ್ರಮ ವಲಸಿಗರೇ ಬಹುಸಂಖ್ಯಾಕರಾಗುತ್ತಾರೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

13

Udupi: ಅಪಾಯಕಾರಿಯಾಗಿ ಬಸ್‌ ಚಾಲನೆ: ಪ್ರಕರಣ ದಾಖಲು

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

sand

Malpe: ಮರಳು ಅಕ್ರಮ ಸಂಗ್ರಹ, ಕೇಸು ದಾಖಲು

kurkalu: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

kurkalu: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kasturi Rangan ವರದಿಗೆ ಮತ್ತೆ ರಾಜ್ಯ ತಿರಸ್ಕಾರ? Kasturi Rangan ವರದಿಗೆ ಮತ್ತೆ ರಾಜ್ಯ ತಿರಸ್ಕಾರ?

Kasturi Rangan ವರದಿಗೆ ಮತ್ತೆ ರಾಜ್ಯ ತಿರಸ್ಕಾರ?

Electric scooter

Battery production ಅಮೆರಿಕ ಹೂಡಿಕೆ; ಚೀನಕ್ಕೆ ಸಡ್ಡು

CHandrababu Naidu

Tirupati Laddus row;ತಪ್ಪಿತಸ್ಥರನ್ನು ಸುಮ್ಮನೆ ಬಿಡಲು ಸಾಧ್ಯವೇ?: ಸಿಎಂ ನಾಯ್ಡು ಪ್ರಶ್ನೆ

1-ambani

Ambani;1,000 ಕೋಟಿಯ ವಿಮಾನ ಖರೀದಿಸಿದ ಮುಕೇಶ್‌ ಅಂಬಾನಿ

ISREL

Israel- ಹೆಜ್ಬುಲ್ಲಾ ನಡುವೆ ಬಾಂಬ್‌ಗಳ ಸುರಿಮಳೆ! ; 100 ರಾಕೆಟ್‌ ಲಾಂಚರ್‌ ಧ್ವಂಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.