ಜಲಾಶಯ; ಸಾರ್ವಜನಿಕರಲ್ಲಿ ಆತಂಕ ಬೇಡ


Team Udayavani, Jun 16, 2020, 7:34 AM IST

ಜಲಾಶಯ; ಸಾರ್ವಜನಿಕರಲ್ಲಿ ಆತಂಕ ಬೇಡ

ಕನಕಗಿರಿ: ನವಲಿ ಬಳಿ ಸ್ಥಾಪಿಸಲು ಹೊರಟಿರುವ ಸಮಾನಾಂತರ ಜಲಾಶಯಕ್ಕೆ ಭೂಮಿ, ಮನೆ,ಯಾವುದೇ ರೀತಿಯ ಆಸ್ತಿ ಕಳೆದುಕೊಳ್ಳುವ ಸಾರ್ವಜನಿಕರಿಗೆ ಆತಂಕಬೇಡ. ಸಂತ್ರಸ್ಥರ ಹಿತ ಕಾಯುವುದೇ ನನ್ನ ಉದ್ದೇಶ. ಯಾವುದೆ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಶಾಸಕ ಬಸವರಾಜ ದಡೇಸೂಗೂರು ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮತ ಕ್ಷೇತ್ರದಲ್ಲಿ ಅಂದಾಜು 12ರಿಂದ 13 ಹಳ್ಳಿಗಳು ಮುಳುಗಡೆಯಾಗಲಿದ್ದು, ಡಿಪಿಆರ್‌ ನಂತರವೇ ಕಳೆದುಕೊಳ್ಳುವ ಆಸ್ತಿಗಳಿಗೆ ಮೊತ್ತ ನಿಗದಿಯನ್ನು ಸರ್ಕಾರ ಮಾಡುತ್ತದೆ. ಮತ ಕ್ಷೇತ್ರದ ಯಾವುದೇ ಹಳ್ಳಿಯನ್ನು ಬೇರೆ ಯಾವುದೆ ಕ್ಷೇತ್ರಕ್ಕೂ ಸ್ಥಳಾಂತರಿಸುವುದಿಲ್ಲ ಕ್ಷೇತ್ರ ವ್ಯಾಪ್ತಿಯ ಪ್ರದೇಶದಲ್ಲೆ ಜಲಾಶಯಕ್ಕೆ ಒಳಪಡುವ ಹಳ್ಳಿಗಳನ್ನು ಮರು ನಿರ್ಮಾಣ ಮಾಡಲಾಗುವುದು. ಹಿರೇಖೇಡ ಗ್ರಾಮ ಪಂಚಾಯತ ವ್ಯಾಪ್ತಿಯ 9 ಹಳ್ಳಿಗಳು ಮತ್ತು ಕರಡೋಣ ಪಂಚಾಯಿತಿಯ 4 ಹಳ್ಳಿಗಳು ಮುಳುಗಡೆ ಆಗಬಹುದೆಂಬ ಮಾಹಿತಿ ಇದೆ. ಅಂದಾಜು 3 ಸಾವಿರ ಕುಟುಂಬಗಳು ನಿರಾಶ್ರಿತರಾಗಬಹುದು. ಆ ಎಲ್ಲಾ ಕುಟುಂಬಗಳಿಗೆ ನ್ಯಾಯ ಯೋಚಿತ ಪರಿಹಾರ ಹಾಗೂ ಸೂರನ್ನು ಕಟ್ಟಿಕೊಡಲಾಗುವುದು.

ಈ ಯೋಜನೆ ಸಫಲವಾದರೆ ಕೊಪ್ಪಳ ಬಳ್ಳಾರಿ ರಾಯಚೂರು ಜಿಲ್ಲೆಯ ರೈತರಿಗೆ ಅನೂಕೂಲವಾಗಲಿದ್ದು, ಈ ಒಳ್ಳೆಯ ಕೆಲಸಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ. ವಿರೋಧ ಪಕ್ಷದ ಸ್ನೇಹಿತರು ಸಹ ಈ ಯೋಜನೆಯ ಕುರಿತು ಇಲ್ಲ ಸಲ್ಲದ ಉಹಾಪೋಹಗಳನ್ನು ಹೇಳುವುದು ಬಿಟ್ಟು ಪುರ್ಣ ಪ್ರಮಾಣದ ಮಾಹಿತಿ ಪಡೆದು ಮಾತನಾಡಬೇಕು. ಒಂದು ಕೆಲಸ ಮಾಡಬೇಕಾದರೆ ಪರ ವಿರೋದ ಇರುವುದು ಸಹಜ ಇದನ್ನೇ ಮುಂದಿಟ್ಟುಕೊಂಡು ಒಳ್ಳೆಯ ಕೆಲಸ ನಿಲ್ಲಿಸಲಾಗುವುದಿಲ್ಲ. ಸಾರ್ವಜನಿಕರ ಸಭೆ ಕರೆದು ಅವರ ಬೇಡಿಕೆ ಅನುಸಾರವೇ ನಡೆಯಲಿದೆ. 50 ಟಿಎಂಸಿ ನೀರು ಸಂಗ್ರಹದ ಪ್ರಮಾಣದ್ದು ಆಗಲಿ ಎಂಬುದು ಸರ್ಕಾರದ ಹಾಗೂ ನಮ್ಮ ಇಚ್ಚೆಯಿದೆ. ಇದು ಹಂತ ಹಂತವಾಗಿ ಆಗುತ್ತದೆ. ಸದ್ಯಕ್ಕೆ 35 ಟಿಎಂಸಿ ನೀರು ಸಂಗ್ರಹದ ಪ್ರಮಾಣದಲ್ಲಿ ಜಲಾಶಯ ಆಗಲಿದೆ ಎಂದು ಹೇಳಿದರು.

ನಂತರ ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್‌ ಮಾತನಾಡಿದರು. ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಣ್ಣ ಕನಕಪ್ಪ, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ವೀರಬಸನಗೌಡ, ಪ್ರಮುಖರಾದ ವಾಗೀಶ ಹಿರೆಮಠ, ನಾಗರಾಜ ಇದ್ಲಾಪುರ, ರಂಗಪ್ಪ ಕೊರಗಟಿಗಿ, ಹರೀಶ್‌ ಪೂಜಾರ, ತಿಪ್ಪಯ್ಯ ಸ್ವಾಮಿ ಮರುಕುಂಬಿ, ಪಾಂಡುರಂಗ ರಾಠೊಡ, ಕೃಷ್ಣವೇಣಿ ಬೊಂದಡೆ ಇದ್ದರು.

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್‌ ತಂಗಡಗಿ

ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್‌ ತಂಗಡಗಿ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

1-wqqwqw

Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.