ಶ್ರೀಕೃಷ್ಣ ಮಠದಲ್ಲಿ ಉಧ್ವರ್ತನೆ ಸೇವೆ
ಮಠಗಳ ಸ್ವಾಮೀಜಿಯವರಿಂದ ಕರಸೇವೆ
Team Udayavani, Jun 29, 2020, 6:05 AM IST
ಉಡುಪಿ: ಶ್ರೀಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕ ನಡೆಯುವ ಮುನ್ನ ರವಿವಾರ ಗರ್ಭಗುಡಿ ಯನ್ನು ಶುಚಿಗೊಳಿಸುವ “ಉಧ್ವರ್ತನೆ’ ಸೇವೆ ನಡೆಯಿತು.
ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥರು ಬೆಳಗ್ಗಿನ ಪಂಚಾಮೃತಾಭಿಷೇಕದ ವರೆಗಿನ ಪೂಜೆ ನಡೆಸಿದ ಬಳಿಕ ಶುಚಿಗೊಳಿಸುವ ಕೆಲಸ ಆರಂಭ ಗೊಂಡಿತು. ಬೆಳಗ್ಗೆ 5 ಗಂಟೆಯಿಂದ 7.30ರವರೆಗೆ ಶುಚಿಗೊಳಿಸಲಾಯಿತು. ಕೃಷ್ಣಾಪುರ, ಅದಮಾರು ಹಿರಿಯ, ಪಲಿಮಾರು ಹಿರಿಯ- ಕಿರಿಯ, ಪೇಜಾವರ, ಸೋದೆ, ಕಾಣಿಯೂರು ಮಠಾಧೀಶರು ಪಾಲ್ಗೊಂಡು ಕರಸೇವೆ ನಡೆಸಿದರು.
ಓಲಿ ಚಾಪೆಯನ್ನು ಮಡಚಿ ಶ್ರೀಕೃಷ್ಣನ ವಿಗ್ರಹದ ಸುತ್ತ ಇಟ್ಟ ಬಳಿಕ ಓಲಿಯ ಕೊಡೆಯನ್ನು ಬೋರಲು ಹಾಕಲಾಗುತ್ತದೆ. ಆಗ ಸುತ್ತಮುತ್ತ ಶುಚಿಗೊಳಿಸುವಾಗ ಆ ನೀರು ವಿಗ್ರಹಕ್ಕೆ ಬೀಳುವುದಿಲ್ಲ. ಹೀಗೆ ಮಾಡಿದ ಬಳಿಕ ತೆಂಗಿನ ಗರಿಗಳ ಕಡ್ಡಿಯಿಂದ ಮಾಡಿದ ಹೊಸ ಸೂಡಿಗಳನ್ನು ಹಿಡಿದು ಸ್ವಾಮೀಜಿಯವರು ಮೇಲ್ಭಾಗ, ಗೋಡೆಯ ಭಾಗ, ನೆಲ ಭಾಗವನ್ನು ಶುಚಿಗೊಳಿಸುತ್ತಾರೆ. ಆಗ ತಲೆ ಮೇಲೆ ಕಸ ಬೀಳಬಾರದು ಎಂದು ಬಾಳೆ ಎಲೆಯ ಟೋಪಿ ಧರಿಸಿಕೊಳ್ಳುತ್ತಾರೆ. ಇದೆಲ್ಲ ಕೆಲಸಗಳನ್ನು ಸ್ವಾಮೀಜಿಯವರು ಮಾತ್ರ ನಡೆಸುತ್ತಾರೆ. ಮಠದ ಸಿಬಂದಿ ಗಳು ಇವರಿಗೆ ಸಹಕರಿಸುತ್ತಾರೆ.
ಅದಮಾರು ಹಿರಿಯ ಸ್ವಾಮೀಜಿ ಯವರು ಅದಮಾರು ಮೂಲಮಠಕ್ಕೆ ತೆರಳಿ ಅಲ್ಲಿನ ಉಧ್ವರ್ತನೆ ಸೇವೆಯನ್ನು ನಡೆಸಿದರು. ಜೂ. 30ರಂದು ಮಹಾಭಿಷೇಕ ನಡೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Gundmi Toll Plaza ಸ್ಥಳೀಯರಿಗೆ ಟೋಲ್ ಬರೆ; ಟೋಲ್ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ
Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’
Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ ರಕ್ಷಣೆ
Chhattisgarh; ನಿಲ್ಲದ ನಕ್ಸಲ್ ಬೇಟೆ: ಓರ್ವನ ಹತ್ಯೆ