ನಿಲ್ಲದ ಡ್ರ್ಯಾಗನ್‌ ಹುಚ್ಚಾಟ ಎಚ್ಚರಿಕೆ ಅಗತ್ಯ


Team Udayavani, Jul 30, 2020, 8:36 AM IST

ನಿಲ್ಲದ ಡ್ರ್ಯಾಗನ್‌ ಹುಚ್ಚಾಟ ಎಚ್ಚರಿಕೆ ಅಗತ್ಯ

ಚೀನ ತಾನು ಗಡಿ ಹಂಚಿಕೊಂಡಿರುವ ದೇಶಗಳೊಂದಿಗೆ ಬಿಕ್ಕಟ್ಟು ಮುಂದುವರಿಯುವುದನ್ನೇ ಬಯಸುತ್ತದೆ ಎಂದೆನಿಸುತ್ತಿದೆ. ಇತ್ತೀಚೆಗೆ ಲೇಹ್‌-ಲಡಾಖ್‌ ಕ್ಷೇತ್ರದ ಬಳಿ ಅದು ಸೃಷ್ಟಿಸಿದ ಬಿಕ್ಕಟ್ಟನ್ನು ಇಡೀ ಜಗತ್ತೇ ನೋಡಿದೆ. ತೀವ್ರವಾಗಿ ಖಂಡಿಸಿದೆ. ಒಂದು ವೇಳೆ ಭಾರತವೇನಾದರೂ ಸಮಯಕ್ಕೆ ಸರಿಯಾಗಿ ಪ್ರತಿರೋಧ ತೋರಿರಲಿಲ್ಲ ಎಂದಿದ್ದರೆ ನಿಸ್ಸಂಶಯವಾಗಿಯೂ ಚೀನ ತನ್ನ ದುರುದ್ದೇಶ ಈಡೇರಿಕೆಯನ್ನು ಮುಂದುವರಿಸುತ್ತಿತ್ತು. ಆದಾಗ್ಯೂ ಗಾಲ್ವಾನ್‌ ಕಣಿವೆಯಿಂದ ಪಿಎಲ್‌ಎ ಹಿಂದೆ ಸರಿದಿದೆಯಾದರೂ ಇನ್ನೂ ಕೆಲವು ಭಾಗಗಳಲ್ಲಿ ಮಾತುಕತೆಯನ್ವಯ ಅದು ಪೂರ್ಣವಾಗಿ ಹಿಂದೆ ಸರಿದಿಲ್ಲ ಎಂದು ಇತ್ತೀಚೆಗಷ್ಟೇ ಭಾರತೀಯ ಸೇನೆಯು ಹೇಳಿತ್ತು.

ಹೀಗಿರುವ ವೇಳೆಯಲ್ಲಿ ಪಿಎಲ್‌ಎ ಇನ್ನೂ ಕೆಲವು ಗಡಿ ಭಾಗಗಳಲ್ಲಿ ಸೇನಾ ಜಮಾವಣೆ ಮಾಡುತ್ತಿರುವ ಸುದ್ದಿ ಹೊರಬಿದ್ದಿದೆ. ಶನಿವಾರ ಭಾರತದ ಉಪಗ್ರಹ ಎಮಿಸ್ಯಾಟ್‌ ಚೀನ ಆಕ್ರಮಿತ ಟಿಬೆಟ್‌ನಲ್ಲಿ, ಅಂದರೆ ಅರುಣಾಚಲ ಪ್ರದೇಶದ ಸನಿಹದಲ್ಲಿ ಚೀನಿ ಸೇನೆಯು ತನ್ನ ಉಪಸ್ಥಿತಿಯನ್ನು ಹೆಚ್ಚಿಸಿರುವುದು, ಚಟುವಟಿಕೆಗಳನ್ನು ಹೆಚ್ಚಿಸಿಕೊಂಡಿರುವುದು ಪತ್ತೆ ಪಚ್ಚಿದೆ. ಎಮಿಸ್ಯಾಟ್‌ ಉಪಗ್ರಹವು ಕೌಟಿಲ್ಯ ಎನ್ನುವ ಎಲೆಕ್ಟ್ರಾನಿಕ್‌ ಗುಪ್ತಚರ ಮಾಹಿತಿ ಸಂಗ್ರಾಹಕ ತಂತ್ರಜ್ಞಾನವನ್ನು ಒಳಗೊಂಡಿದೆ. ಮೂಲಗಳ ಪ್ರಕಾರ ಟಿಬೆಟ್‌ ಹಾಗೂ ದೇಪ್‌ಸಾಂಗ್‌ ಸೆಕ್ಟರ್‌ನ ಸನಿಹವೂ ಚೀನ ಸೈನಿಕರನ್ನು ನಿಯೋಜಿಸುತ್ತಿದೆ ಎನ್ನುವುದು ಪತ್ತೆಯಾಗಿದೆ. ಹಾಗೆಂದು, ಚೀನ ಈ ರೀತಿ ಮಾಡುತ್ತಿರುವುದು ಮೊದಲ ಬಾರಿಯೇನೂ ಅಲ್ಲ. ಭಾರತದೊಂದಿಗೆ ಗಡಿ ಭಾಗದಲ್ಲಿ ಬಿಕ್ಕಟ್ಟು ಸೃಷ್ಟಿಯಾದಾಗಲೆಲ್ಲ ಈ ರೀತಿ ಅದು ಮಾಡುತ್ತಾ ಬಂದಿದೆ.

ಸತ್ಯವೇನೆಂದರೆ ಗಾಲ್ವಾನ್‌ ಕಣಿವೆಯಲ್ಲಿ ಚೀನದ ತಂತ್ರಗಳೆಲ್ಲ ನೆಲ ಕಚ್ಚಿವೆ. ಇದರಿಂದಾಗಿ ಅದಕ್ಕೆ ಹುಚ್ಚುಹಿಡಿದಂತಾಗಿದೆ. ಭಾರತವು ಈ ಬಾರಿ ಕೇವಲ ಸೈನ್ಯ ಬಲದಿಂದ ಒತ್ತಡ ತಂದದ್ದಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಚೀನದ ಮೇಲೆ ಒತ್ತಡ ತರುವಲ್ಲಿ ಸಫ‌ಲವಾಗಿದೆ. ಇದಷ್ಟೇ ಅಲ್ಲದೇ ಭಾರತವು ಆರ್ಥಿಕ ಆಯಾಮದಿಂದಲೂ ಚೀನಕ್ಕೆ ಹೊಡೆತ ಕೊಟ್ಟಿರುವುದೂ ಡ್ರ್ಯಾಗನ್‌ ರಾಷ್ಟ್ರದ ಕಣ್ಣು ಕೆಂಪಾಗಿಸಿದೆ. ಈ ಕಾರಣದಿಂದಲೇ ನಮ್ಮ ಉಪಗ್ರಹಗಳು ಕೊಟ್ಟಿ ರುವ ಮಾಹಿತಿಯನ್ನು ಗಂಭೀರವಾಗಿಯೇ ಪರಿಗಣಿಸಬೇಕಾಗಿದೆ. ಇತ್ತೀಚೆಗಷ್ಟೇ ಚೀನ ಡೋಕ್ಲಾಂ ಪ್ರದೇಶವನ್ನು ತನಗೆ ಬಿಟ್ಟುಕೊಡಬೇಕು ಎಂಬ ಧಾಟಿಯಲ್ಲಿ ಭೂತಾನ್‌ನ ಮೇಲೆ ಒತ್ತಡ ಹಾಕಿದ್ದನ್ನು ನಾವು ನೋಡಿದ್ದೇವೆ. ಇನ್ನು ನೇಪಾಲದ ಪ್ರಧಾನಮಂತ್ರಿಯನ್ನು ಅದು ಭಾರತ ವಿರೋಧಿ ನಡೆಗಳಿಗೂ ಬಳಸಿಕೊಳ್ಳಲಾರಂಭಿಸಿದೆ.

ಈ ಕಾರಣಕ್ಕಾಗಿಯೇ ಭಾರತದ ವಿರುದ್ಧ ಯುದ್ಧ ಸಾರಲು ಅದು ಸಿದ್ಧತೆ ನಡೆಸಿಬಿಟ್ಟಿದೆಯೇ ಎಂಬ ಪ್ರಶ್ನೆ ಎದುರಾಗುತ್ತಿದೆ. ಆದರೆ ಇದು 1962 ಅಲ್ಲ, ಭಾರತವೀಗ ತನ್ನಂತೆಯೇ ಜಗತ್ತಿನ ಅತಿಬಲಿಷ್ಠ ಮಿಲಿಟರಿ ಶಕ್ತಿಗಳಲ್ಲಿ ಒಂದು ಎನ್ನುವ ಅರಿವು ಚೀನಕ್ಕೆ ಸ್ಪಷ್ಟವಿದೆ. ಹಾಗಿದ್ದರೆ ಚೀನ ಏಕೆ ಹೀಗೆ ಮಾಡುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಸರಳ. ಭಾರತವು ಗಡಿ ಭಾಗದಲ್ಲಿ ನಿರ್ಮಿಸುತ್ತಿರುವ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ ಉಂಟುಮಾಡುವ ಉದ್ದೇಶ ಅದಕ್ಕಿದೆ. ಒಮ್ಮೆ ಈ ರಸ್ತೆಗಳೆಲ್ಲ ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಯಾಗಿಬಿಟ್ಟರೆ, ಅದರ ಕಳ್ಳಾಟಗಳಿಗೆಲ್ಲ ಬ್ರೇಕ್‌ ಬೀಳಲಿದೆ. ಈ ಕಾರಣಕ್ಕಾಗಿಯೇ, ಗಡಿಭಾಗದಲ್ಲಿ ಬಿಕ್ಕಟ್ಟು ಸೃಷ್ಟಿಸಲು ಚೀನ ಪ್ರಯತ್ನಿಸುತ್ತಲೇ ಇದೆ. ಆದರೆ, ಭಾರತವು ಚೀನದ ಪ್ರತಿಯೊಂದು ತಂತ್ರಕ್ಕೂ ಪ್ರತಿತಂತ್ರ ರಚಿಸಿ, ಎಚ್ಚರಿಕೆ ವಹಿಸುತ್ತಿರುವುದು ಶ್ಲಾಘನೀಯ ಸಂಗತಿ.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.