ರಕ್ಷಾ ಬಂಧನ ವಿಶೇಷ : ಅಣ್ಣನ ಬಣ್ಣನೆ


Team Udayavani, Aug 3, 2020, 12:33 PM IST

ರಕ್ಷಾ ಬಂಧನ ವಿಶೇಷ : ಅಣ್ಣನ ಬಣ್ಣನೆ

ಸಾಂದರ್ಭಿಕ ಚಿತ್ರ

“ಅಣ್ಣನ ಬಣ್ಣನೆ ತುಸು ಕಷ್ಟ ಎಂದವರಿಗೆ, ಮುದ್ದಿನ ತಂಗಿಯು ಮೆಲ್ಲನೆ ಬಂದು ‘ನಾ’ ಬಲ್ಲೆ ಎಂದಳಂತೆ” ಅಪರಂಜಿಯಂತಹ ಅಣ್ಣನ ಪ್ರೀತಿಯನ್ನು ತಂಗಿಗಿಂತಲೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲ ಬಿಡಿ. ಅಣ್ಣನೆಂದರೆ ಆಕಾಶದಷ್ಟು ವಿಶಾಲ ಹೃದಯಿ, ಅಪ್ಪನೆದೆಯ ಭಾರಕ್ಕೆ ಹೆಗಲು ನೀಡುವ ಕರುಣಾಮಯಿ. ಅಣ್ಣನೆಂಬವನು ಮನೆಗೆ ಜ್ಯೇಷ್ಠನಾಗಿ ಮುದ್ದಿನ ಕೂಸಾಗಿ ಬೆಳೆದಿದ್ದರೂ, ತನ್ನ ಅನುಸರಿಸಿ ಜನಿಸಿದ ಅನುಜೆಗೆ ತನ್ನೆಲ್ಲ ಆಟಿಕೆಯಲಿ ಪಾಲು ಕೊಟ್ಟ ಕರ್ಣ ಅಣ್ಣನೆ ತಾನೆ. ಪುಟ್ಟ ರಾಕ್ಷಸಿಯಂತೆ ಕಿತ್ತಾಡುತ್ತ, ನೋಡಿದೆಲ್ಲವು ಬೇಕೇಂದು ರಚ್ಚೆ ಹಿಡಿದು ಅಳುವ ಹಕ್ಕು ತಂಗಿಯದು ಮಾತ್ರ.

ಅಮ್ಮ ತಂದಿಟ್ಟ ತಿಂಡಿಯಲ್ಲಿ ತಂಗಿಯದೇ ಸಿಂಹಪಾಲು,ಟಿ.ವಿ ರಿಮೋಟಿಗೂ ಅವಳದೇ ತಕರಾರು.ಮನೆಯೆಂಬ ಅರಮನೆಗೆ ತಂಗಿಯೇ ರಾಜಕುಮಾರಿ! ಅವಳು ಹೇಳಿದ ನ್ಯಾಯವೇ ಸರಿ. ಒಮ್ಮೆ ಜಗಳ ಮತ್ತೊಮ್ಮೆ ಪ್ರೀತಿ, ಒಮ್ಮೆ ಕೋಪ ಮತ್ತೊಮ್ಮೆ ಸ್ನೇಹ ಈ ಅಪರೂಪದ ಭಾಂಧವ್ಯದ ಸಿಹಿ ಸವಿದವರಿಗಷ್ಟೆ ಗೊತ್ತು. ನಮ್ಮ ನಡುವೆಯೆ ಅದೇಷ್ಟೋ  ಸಹೃದಯಿ ಅಣ್ಣಂದಿರಿದ್ದಾರೆ. ಜಗತ್ತಿನ ಕಾಮದ ಕಣ್ಣು ತನ್ನ ತಂಗಿಗೆ ಸೋಕದಿರಲೆಂದು ನಿಗಾ ವಹಿಸುವ ರಕ್ಷಕನಂತಿದ್ದಾರೆ. ಹಾದಿ ತಪ್ಪಿದ ತಂಗಿಯರಿಗೆ ಕಿವಿ ಹಿಂಡಿ ತಿದ್ದಿ ಬುದ್ದಿ ಹೇಳುವ ಶಿಕ್ಷಕರಂತಿದ್ದಾರೆ.

ರಕ್ಷಾಬಂಧನ ಕಟ್ಟಲು ನನಗೆ ಒಬ್ಬಳಾದರೂ ತಂಗಿ ಇರಬಾರದಿತ್ತೆ! ಎಂದು ಅಳುವ ಅಣ್ಣಂದಿರು ಇರುತ್ತಾರೆ. ದೂರದ ಊರುಗಳಲ್ಲಿ ಅಲ್ಪಸಂಬಳಕೆ ದುಡಿದು,ಅರೆ ಹೊಟ್ಟೆಯಲಿ ಮಲಗಿ, ತಂಗಿ ಮದುವೆಯ ಸಾಲಕ್ಕೆ ಜೀವನ ಪರ್ಯಂತ ದುಡಿಯುವವರಿದ್ದಾರೆ. ಹೆಂಡತಿ ಬಂದ ಮೇಲೆ ಅಣ್ಣ ಬದಲಾದ ಎಂಬ ಚುಚ್ಚು ಮಾತುಗಳನ್ನ ಸಹಿಸಿಕೊಂಡು ತಂಗಿ ಮಗುವಿಗೆ ಮಾವನಾಗಿ, ಅವಳ ಕಷ್ಟಕೆ ನೆರವಾಗುತ್ತ ,ತನ್ನ ಕರ್ತವ್ಯ ನಿರ್ವಹಿಸುತ್ತಿರುವ ಮುಗ್ಧ ಅಣ್ಣಂದಿರು ನಮ್ಮ ನಡುವೆಯೆ ಇದ್ದಾರೆ.

ಅಂತಹ ತಾಯಿ ಮನಸ್ಸಿನ ಅಣ್ಣಂದಿರಿಗೆ ರಕ್ಷಾಬಂಧನದ ಶುಭಾಶಯ.‌‌….
ದೇವರ ರಕ್ಷೆ ಇರಲಿ ಎಂಬುದೆನ್ನ ಆಶಯ…..‌..

ಶರಣ್ಯ ಬೆಳುವಾಯಿ

ಟಾಪ್ ನ್ಯೂಸ್

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.