ನೆಮ್ಮಾರ್ ಬಳಿ ಕುಸಿದ ರಸ್ತೆ: ಶೃಂಗೇರಿ ಕಾರ್ಕಳ ರಸ್ತೆ ತಾತ್ಕಾಲಿಕ ಬಂದ್
Team Udayavani, Aug 10, 2020, 8:54 AM IST
ಶೃಂಗೇರಿ(ಚಿಕ್ಕಮಗಳೂರು) : ತಾಲೂಕಿನಲ್ಲಿ ಆಶ್ಲೇಷಾ ಮಳೆ ಅರ್ಭಟ ಅಲ್ಪ ಮಟ್ಟಿಗೆ ತಗ್ಗಿದ್ದು, ತುಂಗಾ ನದಿಯ ಪ್ರವಾಹ ಇಳಿಕೆಯಾಗಿದೆ.
ಕಳೆದ ನಾಲ್ಕು ದಿನದಿಂದ ತುಂಬಿ ಹರಿಯುತ್ತಿದ್ದ ನದಿ ಪಟ್ಟಣದ ಬೈಪಾಸ್ ರಸ್ತೆ, ಕೆವಿಆರ್ ರಸ್ತೆಯಿಂದ ಕೆಳಕ್ಕೆ ಇಳಿದಿದೆ. ತಾಲೂಕಿನಲ್ಲಿ ವ್ಯಾಪಕ ಮಳೆಯಿಂದ ತೀವ್ರ ಹಾನಿ ಸಂಭವಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ ಮತ್ತಷ್ಟು ವರದಿ ಬರುತ್ತಿದೆ. ಭೂಕುಸಿತ, ಮರ ಬಿದ್ದು ಹಾನಿಯಾಗಿರುವ ಪ್ರದೇಶಕ್ಕೆ ಅಧಿಕಾರಿಗಳು, ಜನ ಪ್ರತಿನಿಧಿಗಳು ಭೇಟಿ ನೀಡುತ್ತಿದ್ದು, ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169 ರ ನೆಮ್ಮಾರ್ ಸಾಲುಮರದ ಸಮೀಪ ತುಂಗಾ ನದಿ ಪ್ರವಾಹದಿಂದ ರಸ್ತೆ ಕುಸಿದಿದ್ದು, ರಸ್ತೆ ಅಪಾಯ ಸ್ಥಿತಿ ತಲುಪಿದೆ. ಇದರಿಂದ ಶೃಂಗೇರಿ ಕಾರ್ಕಳ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಕಾರ್ಕಳದಿಂದ ಶೃಂಗೇರಿಗೆ ಬರುವ ಪ್ರಯಾಣಿಕರಿಗೆ ಆಗುಂಬೆ ಅಥವಾ ಕುದುರೆಮುಖ ಮಾರ್ಗವಾಗಿ ಸಂಚರಿಸುವಂತೆ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಸರ್ಕಾರಿ ಜಾಗಕ್ಕೆ ಎರಡು ಸಮುದಾಯಗಳ ನಡುವೆ ಮಾರಾಮಾರಿ
Kaduru; ನಿಂತಿದ್ದ ಲಾರಿಗೆ ಟಿಟಿ ಢಿಕ್ಕಿ: ಓರ್ವ ಸಾವು, ಹಲವರಿಗೆ ಗಾಯ
Chikkamagaluru; ಮಲೆನಾಡಿಗರಲ್ಲಿ ಮಂದಹಾಸ ಮೂಡಿಸಿದ ಮಳೆರಾಯ
ಶಿವಮೊಗ್ಗದಿಂದ ಮೈಸೂರಿಗೆ ಬರುತ್ತಿದ್ದ ಐರಾವತ ಬಸ್ ಬೆಂಕಿಗಾಹುತಿ… ತಪ್ಪಿದ ಭಾರಿ ದುರಂತ
Charmady: ಕತ್ತಲಾಗ್ತಿದ್ದಂತೆ ಹೆದ್ದಾರಿಗೆ ಬಂದು ನಿಲ್ಲುವ ಕಾಡಾನೆ… ಜೀವ ಭಯದಲ್ಲಿ ಸವಾರರು