ಜೀವಯಾನ; ಬಾಳಿಗೊಂದಿಷ್ಟು ಬೆಳಕು: ನೆನಪುಗಳ ಮೂಟೆಯ ಭಾರ ಇಳಿಸೋಣ


Team Udayavani, Aug 13, 2020, 6:40 AM IST

ಜೀವಯಾನ; ಬಾಳಿಗೊಂದಿಷ್ಟು ಬೆಳಕು: ನೆನಪುಗಳ ಮೂಟೆಯ ಭಾರ ಇಳಿಸೋಣ

ನಾವು ಯೋಚಿಸುವ ರೀತಿ ಸರಿಯಿಲ್ಲ, ನಮ್ಮ ವರ್ತನೆ ಸರಿಯಿಲ್ಲ ಎಂದು ಎಷ್ಟೋ ಬಾರಿ ನಮಗೇ ಅನ್ನಿಸುವುದುಂಟು. ಆಲೋಚಿಸುವ ರೀತಿಯನ್ನು ಬದಲಾಯಿಸಿಕೊಳ್ಳಬೇಕು ಎಂದುಕೊಳ್ಳುತ್ತೇವೆ. ಸಾಧ್ಯವೇ?  ಸದ್ಗುರು ಜಗ್ಗಿ ವಾಸುದೇವ್‌ ಅವರಿಗೆ ಜ್ಞಾನಾರ್ಥಿಯೊಬ್ಬರಿಂದ ಇದೇ ಪ್ರಶ್ನೆ ಎದು ರಾಯಿತು. ನಿಮಗೆ ಎಂಥ ಆಲೋಚನೆಗಳು, ಭಾವನೆಗಳು ಉಂಟಾಗುತ್ತವೆ ಎಂಬುದರ ಪರಿಶೀಲನೆ ಮುಖ್ಯವಲ್ಲ ಎಂದರು ಸದ್ಗುರು.

ನಮ್ಮ ಮನಸ್ಸು ಮತ್ತು ದೇಹಗಳೆರಡೂ ಕಾರ್ಯಾಚರಿಸುವುದು ನೆನಪುಗಳ ಮೊತ್ತ ದಿಂದ. ಬೆಂಕಿಯ ಜ್ವಾಲೆ ಬಿಸಿ ಇರುತ್ತದೆ ಎಂಬುದು ಸಣ್ಣವರಿದ್ದಾಗ ನಮಗೆ ಗೊತ್ತಾಗಿದೆ. ಅದೇ ನೆನಪಿನಿಂದ ಈಗಲೂ ನಾವು ಬೆಂಕಿಯ ಹತ್ತಿರ ಹೋಗುವುದಿಲ್ಲ. ಎರಡು ಕಾಲುಗಳಿಂದ ನಡೆಯುವುದು, ಬೆರಳುಗಳನ್ನು ಉಪ ಯೋಗಿಸಿ ಅನ್ನ ಕಲಸಿ ಬಾಯಿಗೆ ತುತ್ತು ಇಟ್ಟುಕೊಳ್ಳುವುದು-ಇಂಥ ಸರಳ ಸಂಗತಿಗಳು ಕೂಡ ಹೀಗೆಯೇ, ಸ್ಮರಣೆಯ ಬಲದಲ್ಲಿ ನಡೆಯುತ್ತವೆ.

ಬರೇ ಮನಸ್ಸು ಮಾತ್ರ ಅಲ್ಲ, ದೇಹವೂ ಎಷ್ಟೋ ಸಂಗತಿಗಳನ್ನು ನೆನಪಿನಲ್ಲಿ ಇರಿಸಿಕೊಳ್ಳುತ್ತದೆ. ನಮ್ಮ ಪೂರ್ವಜರ ರೀತಿಯದೇ ಕಣ್ಣು, ಬಾಯಿ, ಮೂಗು ಈಗ ನಮ್ಮ ಮುಖದ ಮೇಲಿರುವುದೂ ನಮ್ಮ ದೇಹದ ಒಳಗಿರುವ ಏನೋ ಒಂದು ಅದನ್ನು ನೆನಪಿಟ್ಟುಕೊಂಡಿದ್ದರಿಂದ. ಸಾವಿರಾರು ವರ್ಷ ಗಳಿಂದ ಸಂಚಿತವಾಗಿರುವಂಥ ನೆನಪು ಅದು.

ಹೀಗೆ ದೇಹ ಮತ್ತು ಮನಸ್ಸು ಎರಡೂ ನೆನಪುಗಳ ಮೂಟೆಯನ್ನು ಹೊತ್ತುಕೊಂಡಿವೆ. ಅದರ ಆಧಾರದಲ್ಲಿಯೇ ನಾವು ರೂಪುಗೊಳ್ಳು ವುದು, ನಮ್ಮ ನಿತ್ಯದ ಕೆಲಸಕಾರ್ಯ, ಚಟುವಟಿಕೆಗಳು, ಆಲೋಚನೆಗಳು, ಭಾವನೆ ಗಳು ಎಲ್ಲವೂ ನಡೆಯುವುದು.

ವಿಶ್ವದಲ್ಲಿ ನಮ್ಮ ಸ್ಥಾನ ಒಂದು ಧೂಳಿನ ಕಣಕ್ಕಿಂತಲೂ ಸಣ್ಣದು ಎಂಬುದನ್ನು ಮೊದಲು ಅರಿತುಕೊಳ್ಳೋಣ. ಈ ವಿಶಾಲ ವಿಶ್ವದಲ್ಲಿ ನಾವಿರುವ ಗ್ಯಾಲಕ್ಸಿ ಒಂದು ಧೂಳಿನ ಕಣದಷ್ಟು ಗಾತ್ರದ್ದು. ಈ ಹಾಲುಹಾದಿಯಲ್ಲಿ ನಮ್ಮ ಸೌರವ್ಯೂಹ ಇನ್ನೂ ಸಣ್ಣ ಧೂಳಿನ ಕಣದಂತೆ. ಅದರಲ್ಲಿ ನಮ್ಮ ಭೂಮಿಯ ಗಾತ್ರ ಮತ್ತೂ ಕಿರಿದು. ಅದರಲ್ಲಿ ನಾವಿರುವ ಹಳ್ಳಿಯೋ, ಪಟ್ಟಣವೋ ಇನ್ನಷ್ಟು ಸಣ್ಣದು.

ಅಂಥದ್ದರಲ್ಲಿ ನಾನೊಬ್ಬ ದೊಡ್ಡ ಮನುಷ್ಯ ಅಂದುಕೊಳ್ಳುತ್ತೇವೆ. ನಮ್ಮ ಆಲೋಚನೆ, ಭಾವನೆಗಳ ಬಗ್ಗೆ ಚಿಂತೆ ಮಾಡುತ್ತೇವೆ! ನಮಗೆ ಈ ವಿಶ್ವದಲ್ಲಿ ನಮ್ಮ ಸ್ಥಾನದ ಬಗ್ಗೆ ಅರಿವು ಇಲ್ಲ. ನಮ್ಮ ಆಲೋಚನೆ, ಭಾವನೆ ಸರಿಯಿಲ್ಲ ಎಂದುಕೊಳ್ಳುವುದು ನಾವು ಮಾತ್ರ; ಇಡೀ ವಿಶ್ವಕ್ಕೆ ಅದರಿಂದೇನೂ ಬಾಧಕವಿಲ್ಲ.

ಇಷ್ಟು ವಿಶಾಲವಾದ ವಿಶ್ವದಲ್ಲಿ ನಾವು ಇಷ್ಟು ಸಣ್ಣವರು ಎಂಬ ಅರಿವನ್ನು ಹೊಂದುವುದೇ ಬಹುದೊಡ್ಡ ಜ್ಞಾನೋದಯ. ನಮ್ಮ ಆಲೋಚನೆ, ಭಾವನೆಗಳು ಇಡೀ ವಿಶ್ವದ ದೃಷ್ಟಿಯಿಂದ ತೀರಾ ಅಮುಖ್ಯ ಎಂಬ ಸತ್ಯ ಹೊಳೆದುಬಿಟ್ಟರೆ ನಮ್ಮ ಆಲೋಚನೆ ಮತ್ತು ಭಾವನೆಗಳಿಂದ ಸಮ ದೂರವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಆಲೋಚನೆ ಮತ್ತು ಭಾವನೆಗಳೆರಡೂ ಪ್ರಜ್ಞಾಶೀಲ ಪ್ರಕ್ರಿಯೆಗಳಾಗಿ ಬದಲಾಗುವುದು ಆಗ.

ಇದಾದಾಗ ನಮ್ಮ ನೆನಪುಗಳ ಮೂಟೆಯ ಭಾರವನ್ನು ಇಳಿಸಿ ನಾವು ಹಗುರವಾಗುತ್ತೇವೆ. ಆಲೋಚನೆ, ಭಾವನೆ ಗಳೆಲ್ಲವೂ ಸ್ವತಂತ್ರ ಸುಂದರ ಅಸ್ತಿತ್ವವನ್ನು ಹೊಂದುತ್ತವೆ.

(ಸಂಗ್ರಹ)

ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು  [email protected] ಗೆ ಕಳುಹಿಸಬಹುದು. ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.