ದುಃಖದ ಜತೆ ನೀರಿನ ಬವಣೆ ನೀಗಿಸಿದ ‘ಪ್ರಾಜೆಕ್ಟ್ ಹ್ಯಾಪಿನೆಸ್‌’


Team Udayavani, Aug 13, 2020, 4:00 PM IST

happines

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಆಕೆಗೆ 18 ವರ್ಷದಲ್ಲೇ ಮದುವೆಯಾಯಿತು. ಬಿ.ಕಾಂ ಪದವಿ ಪಡೆಯಬೇಕು ಎನ್ನುವ ಆಸೆಗೆ ಅನಿವಾರ್ಯ ಕಾರಣದಿಂದ ತಿಲಾಂಜಲಿ ಇಟ್ಟು ಪತಿ ಜತೆಗೆ ಕತಾರ್‌ಗೆ ತೆರಳಿದರು.

ಸುಮಾರು ಎಂಟು ವರ್ಷಗಳ ಅನಂತರ ದಂಪತಿ ಊರಿಗೆ ಮರಳಿದರು.

ಈ ಮಧ್ಯೆ ಹಿರಿಯ ಪುತ್ರ ಆಟಿಸಂನಿಂದ ಬಳಲುತ್ತಿದ್ದ ಮತ್ತು ಮಾತನಾಡಲು, ಸಂವಹನ ನಡೆಸಲು ಕಷ್ಟವಾಗುತ್ತಿತ್ತು. ಜತೆಗೆ ಆಕೆಯ ಊರಲ್ಲಿ ನೀರಿಗೆ ಕ್ಷಾಮವಿತ್ತು.

ಈ ಎಲ್ಲ ಸಮಸ್ಯೆಯಿಂದ ಹೊರ ಬರಲು ಆಕೆ ಕಂಡುಕೊಂಡ ದಾರಿ ಗಿಡಗಳನ್ನು ಬೆಳೆಸುವುದು. ಹೀಗೆ 56 ಸೆಂಟ್ಸ್‌ ಸ್ಥಳದಲ್ಲಿ ಕಾಡು ಬೆಳೆದ ಆಕೆ ತನ್ನ ಬೇಸರದಿಂದ ತಕ್ಕ ಮಟ್ಟಿಗೆ ಹೊರ ಬಂದರು.

ಇದು ಯಾವುದೇ ಕತೆಯಲ್ಲ. ಕೇರಳದ ಆಲಪ್ಪುಳ ಜಿಲ್ಲೆಯ ಮಾವೇಲಿಕ್ಕರ ಕುನ್ನಂನ ಜಯಶ್ರೀ ಎಂ.ಬಿ. ಯಶೋಗಾಥೆ. ಕಾಡು ಬೆಳೆಸುವುದನ್ನು ‘ಪ್ರಾಜೆಕ್ಟ್ ಹ್ಯಾಪಿನೆಸ್‌’ ಎಂದು ಕರೆಯುವ ಜಯಶ್ರೀ ಇದರಲ್ಲೇ ದುಃಖ ಮರೆತಿದ್ದಾರೆ, ಸಮಾಧಾನ ಕಂಡುಕೊಂಡಿದ್ದಾರೆ.

ಸಂಬಂಧಿಕರ ವಿರೋಧ
ಕಾಡು ಬೆಳೆಸುವ ತನ್ನ ನಿರ್ಧಾರ ಸುಲಭದ್ದೇನೂ ಆಗಿರಲಿಲ್ಲ ಎನ್ನುತ್ತಾರೆ ಜಯಶ್ರೀ. ‘ಪತಿ ವಿಶ್ವಂಭರ ಜತೆ ಕತಾರ್‌ನಿಂದ ಕುನ್ನಂಗೆ ಹಿಂದಿರುಗಿದ ಸಮಯ. ಇಲ್ಲಿ ನೀರಿಗೆ ಕೊರತೆಯಿತ್ತು. ಹೀಗಾಗಿ ನಾನು ಖಾಲಿ ಜಾಗದಲ್ಲಿ ಗಿಡಗಳನ್ನು ನೆಡಲು ನಿರ್ಧರಿಸಿದೆ. ಆಗ ನೆರೆ ಹೊರೆಯವರು, ಸಂಬಂಧಿಕರೆಲ್ಲ ನನ್ನನ್ನು ಗೇಲಿ ಮಾಡಿದರು. ಕಾಡು ಗಿಡಗಳನ್ನು ನೆಡುವ ಬದಲು ಮರಗೆಣಸು ಮುಂತಾದ ಆದಾಯ ತರುವ ಸಸಿಗಳನ್ನು ಬೆಳಸಬಹುದಲ್ಲ ಎಂದು ಪ್ರಶ್ನಿಸಿದರು. ಆದರೆ ನನಗೆ ಅದು ಇಷ್ಟವಿರಲಿಲ್ಲ. ಕಾಡು ಬೆಳೆಸಬೇಕೆನ್ನುವ ನಿರ್ಧಾರದಲ್ಲಿ ಗಟ್ಟಿಯಾಗಿದ್ದೆ. ಹೀಗಾಗಿ 28 ವರ್ಷಗಳ ಹಿಂದೆ ತೇಗ, ಮಹಾಗನಿ, ಮಾವು, ಆಲ ಮುಂತಾದ ಗಿಡಗಳನ್ನು ನೆಟ್ಟೆ. ಇದೀಗ ನಮ್ಮೂರಿನಲ್ಲಿ ಕಾಡುತ್ತಿದ್ದ ನೀರಿನ ಸಮಸ್ಯೆ ಬಗೆಹರಿದಿದೆ. ಅಂದು ಟೀಕಿಸುತ್ತಿದ್ದವರೆಲ್ಲ ಶ್ಲಾ ಸುತ್ತಿದ್ದಾರೆ’ ಎಂದು ವಿವರಿಸುತ್ತಾರೆ ಜಯಶ್ರೀ.

ದುಃಖ ಮರೆಸಿತು
‘ಹಿರಿಯ ಪುತ್ರ ಆಟಿಸಂ ತೊಂದರೆ ಕಾಣಿಸಿಕೊಂಡಿತ್ತು. ಅನೇಕ ಚಿಕಿತ್ಸೆ ನೀಡಿದರೂ ಗುಣಮುಖನಾಗಿರಲಿಲ್ಲ. ಸಂವಹನ ನಡೆಸಲು ಆತನಿಗೆ ಕಷ್ಟವಾಗುತ್ತಿತ್ತು. ಈ ಸಮಯದಲ್ಲಿ ಎಲ್ಲ ಭರವಸೆಯನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದೆ. ಆಗ ಕೈ ಹಿಡಿದದ್ದು ಗಿಡಗಳ ಒಡನಾಟ. ಅವುಗಳನ್ನು ಆರೈಕೆ ಮಾಡುತ್ತಾ ದುಃಖ ಮರೆತೆ’ ಎಂದು ಹೇಳುತ್ತಾರೆ ಜಯಶ್ರೀ.

2008ರಲ್ಲಿ ವಿಶ್ವಂಭರಂ ಕಾಯಿಲೆಯಿಂದ ನಿಧನ ಹೊಂದಿದರು. ಆಗ ಮಕ್ಕಳಿನ್ನು ಚಿಕ್ಕವರು. ಜಯಶ್ರೀ ಹೃದಯ ಚೂರಾಗಿತ್ತು.’ಆಗ ನಾನು ಸಂಪೂರ್ಣವಾಗಿ ಗಿಡಗಳ ಜತೆಗೆ ಸಮಯ ಕಳೆದೆ. ಇದರಿಂದ ನನಗೆ ಜೀವನೋತ್ಸಾಹ ಲಭಿಸಿತು’ ಎಂದು ಸ್ಮರಿಸಿಕೊಳ್ಳುತ್ತಾರೆ ಅವರು.
ಇದೀಗ ಮಕ್ಕಳು ದೊಡ್ಡವರಾಗಿದ್ದು, ಸಮಯ ಸಿಕ್ಕಾಗಲೆಲ್ಲ ತಾಯಿ ಜತೆ ಕೈ ಜೋಡಿಸುತ್ತಾರೆ. ದೊಡ್ಡ ಮಗ ವಿಷ್ಣು ಪಿಎಸ್‌ಸಿ ಪರೀಕ್ಷೆ ತಯಾರಾಗುತ್ತಿದ್ದರೆ ಕಿರಿಯ ಮಗ ವಿಶಾಖ್‌ ಪಿಎಚ್‌ಡಿ ಪಡೆದಿದ್ದಾನೆ. ಸುಮಾರು 50 ವಿಧದ ಮರ ಬೆಳೆದಿರುವ ಜಯಶ್ರೀ ಕೆಲವು ಔಷಧೀಯ ಗಿಡಗಳನ್ನೂ ಆರೈಕೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಗಿಡಗಳ ಸಹವಾಸದಿಂದ ದುಃಖ ಮರೆತ ಜಯಶ್ರೀ ಊರಿನ ನೀರಿನ ಸಮಸ್ಯೆಯನ್ನೂ ಬಗೆಹರಿಸಿ ಮಾದರಿಯಾಗಿದ್ದಾರೆ.

ರಮೇಶ್‌ ಬಳ್ಳಮೂಲೆ, ಕಾಸರಗೋಡು

 

ಟಾಪ್ ನ್ಯೂಸ್

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

Road Mishap ಪರಸ್ಪರ ಢಿಕ್ಕಿ; ವಾಹನಗಳು ಜಖಂ

Road Mishap ಪರಸ್ಪರ ಢಿಕ್ಕಿ; ವಾಹನಗಳು ಜಖಂ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

accident

Koppal; ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಢಿಕ್ಕಿ: ಸ್ಥಳದಲ್ಲೇ ನಾಲ್ವರ ಸಾವು

ಅಂಜಲಿ ಕೊಲೆಯಲ್ಲಿ ಪೊಲೀಸರ ಲೋಪ: ಡಾ| ಜಿ. ಪರಮೇಶ್ವರ್‌

ಅಂಜಲಿ ಕೊಲೆಯಲ್ಲಿ ಪೊಲೀಸರ ಲೋಪ: ಡಾ| ಜಿ. ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Dance: ಬಸಣ್ಣನ ಡ್ಯಾನ್ಸು

12-uv-fusion

Smile: ಕಷ್ಟ – ಸುಖದ ಜೀವನ… ನಗು ನಗುತಾ ಸಾಗಿ

11-uv-fusion

UV Fusion: ಕಡಲ ಕುವರರೇ, ನಿಮಗೊಂದು ಸಲಾಂ!

10-uv-fusion

Festival: ಊರ ಹಬ್ಬ

9-uv-fusion

Goal: ಬದಲಾವಣೆ ನಮ್ಮ ಗುರಿಯತ್ತ ಸಾಗುವಂತಿರಲಿ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

Sullia ಬೇಂಗಮಲೆ: ಚರಂಡಿಗೆ ಬಿದ್ದ ಕಾರು

Sullia ಬೇಂಗಮಲೆ: ಚರಂಡಿಗೆ ಬಿದ್ದ ಕಾರು

Road Mishap ಪರಸ್ಪರ ಢಿಕ್ಕಿ; ವಾಹನಗಳು ಜಖಂ

Road Mishap ಪರಸ್ಪರ ಢಿಕ್ಕಿ; ವಾಹನಗಳು ಜಖಂ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.